ನಾಗೇಂದ್ರಪ್ರಸಾದ್ ಚಿತ್ರದ ಹೆಸರು ಗೂಗಲ್
Team Udayavani, Jul 17, 2017, 10:56 AM IST
ಈ ಹಿಂದೆ ನಿರ್ದೇಶಕ ನಾಗೇಂದ್ರಪ್ರಸಾದ್ ಮತ್ತು ಶುಭಾಪೂಂಜಾ ಇಬ್ಬರೂ ಮದುವೆ ಗೆಟಪ್ನಲ್ಲಿರುವ ಒಂದು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಸಖತ್ ಸುದ್ದಿಯಾಗಿತ್ತು. ಇನ್ನೇನು ಇಬ್ಬರಿಗೂ ಮದ್ವೆ ಆಗಿದೆಯಂತೆ ಎಂಬೆಲ್ಲಾ ಸುದ್ದಿಗಳು ತೇಲಾಡಿದ್ದವು. ಎಷ್ಟೋ ಜನ ಅದು ನಿಜಾನಾ ಅಂತಾನೂ ಪ್ರಶ್ನಿಸಿಕೊಂಡಿದ್ದರು.
ಆದರೆ, ಅದು ಪ್ರಚಾರಕ್ಕೆ ಹರಿಬಿಟ್ಟ ಫೋಟೋ ಅಂತ ಗೊತ್ತಾದ ಮೇಲೆ, ಪ್ರಚಾರಕ್ಕೆ ಇಷ್ಟೆಲ್ಲಾ ಮಾಡೋ ಅಗತ್ಯವಿತ್ತಾ ಅಂತ ಹೇಳಿಕೊಂಡಿದ್ದೂ ಉಂಟು. ಇಷ್ಟಕ್ಕೂ ಈಗ ಆ ವಿಷಯ ಯಾಕೆಂದರೆ, ಆ ಫೋಟೋ ಹರಿದಾಡಿದ್ದು ನಾಗೇಂದ್ರಪ್ರಸಾದ್ ನಿರ್ದೇಶನದ ಈ ಚಿತ್ರದ್ದು. ಆಗ ಚಿತ್ರಕ್ಕೆ ನಾಮಕರಣ ಮಾಡಿರಲಿಲ್ಲ. ಈಗ “ಗೂಗಲ್’ ಎಂದು ಹೆಸರಿಟಿದ್ದಾರೆ.
ಇಲ್ಲಿ ಹಾಕಿರುವ ಫೋಟೋ ನೋಡಿದರೆ, ನಾಗೇಂದ್ರಪ್ರಸಾದ್ ಅವರು ನಟಿ ಶುಭಾ ಪೂಂಜಾ ಅವರನ್ನು ವಿವಾಹವಾಗಿರುವಂತಿದೆ. ನವದಂಪತಿ ಎಂಬಂತೆ ಕಾಣಿಸಿಕೊಂಡಿರುವ ಅವರಿಬ್ಬರ ಈ ಫೋಟೋ, ಈ ಹಿಂದೆ ಸಾಮಾಜಿಕ ತಾಣಗಳಲ್ಲಿ ಕಾಣಿಸಿಕೊಂಡು ಸಿಕ್ಕಾಪಟ್ಟೆ ಸುದ್ದಿ ಮಾಡಿತ್ತು. ಕೆಲವರು ಮುಖಪುಟಗಳಲ್ಲಿ ಹಾಕಿ, “ಹ್ಯಾಪಿ ಮ್ಯಾರೀಡ್ ಲೈಫ್’ ಎಂಬ ಸ್ಟೇಟಸ್ ಹಾಕಿದ್ದರು.
ಇದು ರಿಯಲ್ ಅಲ್ಲ, ರೀಲ್ ಅಂತ ಗೊತ್ತಾಗಿ, ಪ್ರಚಾರಕ್ಕೆ ಹಂಗೆಲ್ಲಾ ಮಾಡಿದ್ದಾರೆ ಅಂತ ಸುಮ್ಮನಾಗಿದ್ದರು. “ಗೂಗಲ್’ ಚಿತ್ರದಲ್ಲಿ ನಾಗೇಂದ್ರಪ್ರಸಾದ್ಗೆ ಶುಭಾಪೂಂಜಾ ಜೋಡಿ. ಸೋ, ಆ ಚಿತ್ರದ ಮದುವೆ ಸನ್ನಿವೇಶದ ದೃಶ್ಯದಲ್ಲಿ ಶುಭಾಪೂಂಜಾ ಅವರನ್ನು ನಾಗೇಂದ್ರಪ್ರಸಾದ್ ಮದುವೆ ಆಗುತ್ತಾರೆ. ಆ ವೇಳೆ ತೆಗೆದ ಫೋಟೋ, ಒಂದು ಸುತ್ತು ಸುದ್ದಿ ಮಾಡಿತ್ತು. ಅದು ಹಳೇ ಸುದ್ದಿ.
ಈಗ ಹೊಸ ಸುದ್ದಿ ಅಂದರೆ, ಸಿನಿಮಾ ಮುಗಿದಿದೆ. ಚಿತ್ರಕ್ಕೆ ‘ಗೂಗಲ್’ ಎಂದು ಹೆಸರಿಡಲಾಗಿದೆ. ಅಂದಹಾಗೆ, ಚಿತ್ರದಲ್ಲಿ ಪ್ರಮುಖವಾಗಿ ಇನ್ನೊಬ್ಬ ನಾಯಕಿ ಅಮೃತಾರಾವ್ ಕೂಡ ಇದ್ದಾರೆ. ಇವರಿಗೆ ಜೋಡಿ ದೀಪಕ್. ಉಳಿದಂತೆ ಒಂದಷ್ಟು ಕಲಾವಿದರಿದ್ದಾರೆ. ಇದು “ಉತ್ಸವ್ ಮೂವೀಸ್’ ಬ್ಯಾನರ್ನಡಿ ನಿರ್ಮಾಣವಾಗುತ್ತಿದೆ. ಸೆಪ್ಟೆಂಬರ್ನಲ್ಲಿ “ಗೂಗಲ್’ ಬಿಡುಗಡೆಯಾಗುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ