ದಯವಿಟ್ಟು ಗಮನಿಸಿ: ಭಾವನಾ ರಾವ್‌ ಮತ್ತೆ ಸುದ್ದಿಯಲ್ಲಿದ್ದಾರೆ!


Team Udayavani, Oct 11, 2017, 6:24 PM IST

Bhavana-Rao-(9).jpg

ಕೆಲವೊಮ್ಮೆ ಅದೃಷ್ಟ ಬಂದರೆ ಒಂದೇ ಸಲ ಹುಡುಕ್ಕೊಂಡ್‌ ಬರುತ್ತೆ. ಅದರಲ್ಲೂ ಸಿನಿಮಾ ನಟ, ನಟಿಯರ ವಿಷಯದಲ್ಲಂತೂ ತುಸು ಹೆಚ್ಚು ಅನ್ನಬಹುದು. ಇಲ್ಲೀಗ ಹೇಳಹೊರಟಿರುವ ವಿಷಯ ನಟಿ ಭಾವನಾ ರಾವ್‌ ಅವರದು. ಯಾವ ಭಾವನಾ ರಾವ್‌ ಅಂತ ಕನ್‌ಫ್ಯೂಷನ್‌ ಆಗೋದು ಬೇಡ. “ಗಾಳಿಪಟ’ ಹುಡುಗಿ ವಿಷಯ ಇದು. ಅದೇ ಭಾವನಾ ರಾವ್‌ ಈಗ ಸುದ್ದಿಯಾಗಿದ್ದಾರೆ.

ಎಲ್ಲೋ ಕಳೆದೇ ಹೋದರು ಅಂದುಕೊಳ್ಳುತ್ತಿದ್ದಂತೆ, ಅಲ್ಲೆಲ್ಲೋ “ಬಹುಪರಾಕ್‌’ ಹಾಗೂ ಇನ್ನೆಲ್ಲೋ “ಪರಪಂಚ’ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ, ಭಾವನಾ ಮತ್ತೆ ಸುದ್ದಿಯೇ ಇರಲಿಲ್ಲ. ಹಾಗಂತ ಅವರು ಸಿನಿಮಾ ನಂಟು ಬಿಟ್ಟಿರಲಿಲ್ಲ. ಡಾಲರ್ ಕಾಲೋನಿಯಲ್ಲೊಂದು ತಮ್ಮ ಗೆಳತಿ ಜೊತೆ ಡ್ಯಾನ್ಸ್‌ ಕ್ಲಾಸ್‌ ಶುರುಮಾಡಿ ಅಲ್ಲಿಯೇ ಹೆಚ್ಚು ಗಮನಹರಿಸಿದ್ದರು.

ಒಂದೂವರೆ ವರ್ಷ ಕಾಲ ಡ್ಯಾನ್ಸ್‌ ಕ್ಲಾಸ್‌ನಲ್ಲೇ ಬಿಜಿಯಾಗಿದ್ದ ಭಾವನಾಗೆ ಅವಕಾಶಗಳು ಹುಡುಕಿ ಬಂದರೂ, ಒಪ್ಪಲಿಲ್ಲವಂತೆ. ಕಾರಣ, ಸರಿಯಾದ ಆಯ್ಕೆ. ಹಾಗಾಗಿ ಬಂದ ಅವಕಾಶಗಳನ್ನು ಪಕ್ಕಕ್ಕೆ ಸರಿಸಿದರು. ಆದರೆ, ಒಮ್ಮೆಲೆ ಒಂದಷ್ಟು ಸಿನಿಮಾ ಒಪ್ಪಿಕೊಂಡರು. ಈಗ ಆ ಚಿತ್ರಗಳು ರಿಲೀಸ್‌ಗೆ ರೆಡಿಯಾಗಿವೆ. ಅದೂ ಅಕ್ಟೋಬರ್‌ನಲ್ಲೇ ಬ್ಯಾಕ್‌ ಟು ಬ್ಯಾಕ್‌ ಅನ್ನೋದೇ ಈ ಹೊತ್ತಿನ ಸುದ್ದಿ.

ಹೌದು, ಭಾವನಾ ಅಭಿನಯಿಸಿರುವ “ಸತ್ಯ ಹರಿಶ್ಚಂದ್ರ’, “ದಯವಿಟ್ಟು ಗಮನಿಸಿ’ ಮತ್ತು “ಟೈಗರ್‌ ಗಲ್ಲಿ’ ಚಿತ್ರಗಳು ಅಕ್ಟೋಬರ್‌ನಲ್ಲೇ ತೆರೆಗೆ ಬರುತ್ತಿವೆ. ಅದರಲ್ಲೂ “ಸತ್ಯ ಹರಿಶ್ಚಂದ್ರ’ ಮತ್ತು “ದಯವಿಟ್ಟು ಗಮನಿಸಿ’ ಚಿತ್ರಗಳು ಅಕ್ಟೋಬರ್‌ 20 ರಂದು ತೆರೆಗೆ ಬಂದರೆ, “ಟೈಗರ್‌ ಗಲ್ಲಿ’ ಚಿತ್ರ ಅಕ್ಟೋಬರ್‌ 27 ಕ್ಕೆ ರಿಲೀಸ್‌ ಆಗುತ್ತಿದೆ. ಈ ಮೂರು ಚಿತ್ರಗಳನ್ನು ಅವರು 2016 ರಲ್ಲಿ ಒಪ್ಪಿಕೊಂಡಿದ್ದರು.

ಈಗ ಎರಡು ವಾರಗಳ ಅಂತರದಲ್ಲಿ ಮೂರು ಚಿತ್ರಗಳು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. “ಸತ್ಯ ಹರಿಶ್ಚಂದ್ರ’ ಚಿತ್ರದಲ್ಲಿ ಶರಣ್‌ ಜೊತೆ ನಟಿಸಿದ್ದಾರೆ. ಅದೊಂದು ಹೊಸತನದ ಪಾತ್ರವಿದ್ದು, ನೋಡುಗರ ಗಮನಸೆಳೆಯುವಂತಹ ಪಾತ್ರವಂತೆ. ಯಾವ ಪಾತ್ರ ಅನ್ನುವುದಕ್ಕೆ ಸಿನಿಮಾ ನೋಡಬೇಕೆಂಬುದು ಅವರ ಮಾತು. ಇನ್ನು, “ದಯವಿಟ್ಟು ಗಮನಿಸಿ’ ಚಿತ್ರದಲ್ಲೂ ಭಾವನಾಗೊಂದು ವಿಶೇಷ ಪಾತ್ರವಿದೆಯಂತೆ.

“ಟೈಗರ್‌ ಗಲ್ಲಿ’ ಚಿತ್ರದಲ್ಲೂ ಭಾವನಾ ನಟಿಸಿದ್ದಾರೆ. ನೀನಾಸಂ ಸತೀಶ್‌ ಅವರ ಜೊತೆ ವಿಶೇಷ ಗೆಟಪ್‌ನಲ್ಲಿ ಹಾಡೊಂದಕ್ಕೆ ಸ್ಟೆಪ್‌ ಹಾಕಿದ್ದಾರೆ. ಅದೊಂದು ಪಕ್ಕಾ ಕಮರ್ಷಿಯಲ್‌ ಸಿನಿಮಾ ಆಗಿದ್ದು, ಅವರ ಪಾತ್ರ ಕೂಡ ಬೋಲ್ಡ್‌ ಆಗಿದೆಯಂತೆ. ಅದೇನೆ ಇರಲಿ, ಎಲ್ಲೂ ಸುದ್ದಿಯಾಗದೇ ಇದ್ದ ಭಾವನಾ, ಈಗ ಅಕ್ಟೋಬರ್‌ನ ಎರಡು ವಾರವಂತೂ ಅವರದ್ದೇ ಸುದ್ದಿ. ಇದೇ ಖುಷಿಯಲ್ಲಿ ಭಾವನಾ ಒಂದಷ್ಟು ಸಿನಿಮಾಗಳನ್ನು ಎದುರು ನೋಡುತ್ತಿರುವುದು ಅಷ್ಟೇ ದಿಟ.

ಟಾಪ್ ನ್ಯೂಸ್

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.