ಶ್ರುತಿ ಪರ ಬ್ಯಾಟ್ ಬೀಸಿದ ಪ್ರಕಾಶ್ ರೈ;ಸರ್ಜಾ ಕ್ಷಮೆ ಕೇಳಲಿ!
Team Udayavani, Oct 21, 2018, 12:23 PM IST
ಬೆಂಗಳೂರು : ಪ್ರಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ನಟಿ ಶ್ರುತಿ ಹರಿಹರನ್ ಅವರ ಪರ ನಟ ಪ್ರಕಾಶ್ ರೈ ಬ್ಯಾಟ್ ಬೀಸಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ರೈ ಅವರು ಶ್ರುತಿ ಕನ್ನಡದ ಪ್ರತಿಭಾವಂತ ನಟಿ, ಅರ್ಜುನ್ ಸರ್ಜಾ ಅವರು ಕನ್ನಡ ಹೆಮ್ಮೆ ,ಹಿರಿಯ ನಟರು ಎನ್ನುವುದನ್ನು ಮರೆಯಬಾರದು ಎಂದಿದ್ದಾರೆ.
ಹೆಣ್ಣಿನ ಅಸಾಹಯಕತೆ ನೋವನ್ನು ಅರ್ಥ ಮಾಡಿಕೊಳ್ಳಬೇಕು.ಹೆಣ್ಣಿನ ಬೇಕು ಬೇಡಗಳ ಕುರಿತು ಸೂಕ್ಷ್ಮತೆ ಕಳೆದುಕೊಂಡಿದ್ದು ನಿಜ. ಅರ್ಜುನ್ ಸರ್ಜಾ ಅವರು ಕ್ಷಮೆ ಯಾಚಿಸಲು ಇದು ಸಕಾಲ ಎಂದಿದ್ದಾರೆ.
ಮೀ ಟೂ ಅಭಿಯಾನದಲ್ಲಾದರೂ ಹೆಣ್ಣಿನ ನೋವು ಕಡಿಮೆಯಾಗಲಿ ಎಂದು ಪ್ರತಿಕ್ರಿಯಿಸಿದ್ದಾರೆ.