ಕನ್ನಡ ಚಿತ್ರರಂಗದಲ್ಲಿ ಮತ್ತೆ ಟೈಟಲ್ ಪ್ರಾಬ್ಲಂ, ಯಾರು ಲೀಡರ್?
Team Udayavani, Mar 22, 2017, 11:42 AM IST
ಗಾಂಧಿನಗರದಲ್ಲಿ ಈಗ ಟೈಟಲ್ ಪ್ರಾಬ್ಲಂ..! – ಹೌದು, ಮೊನ್ನೆಯಷ್ಟೇ ಪಿಆರ್ಕೆ ಹಾಗೂ ಹೊಂಬಾಳೆ ಬ್ಯಾನರ್ನಲ್ಲಿ “ಅರ್ಧಸತ್ಯ’ ಎಂಬ ಚಿತ್ರದ ಶೀರ್ಷಿಕೆ ಕುರಿತು ಸಮಸ್ಯೆ ಎದ್ದಿತ್ತು. ನಿರ್ದೇಶಕ ಹೇಮಂತ್ರಾವ್ “ಅರ್ಧಸತ್ಯ’ ಟೈಟಲ್ ಅನೌನ್ಸ್ ಮಾಡುತ್ತಿದ್ದಂತೆಯೇ, ನಿರ್ದೇಶಕ ಬಿ. ರಾಮಮೂರ್ತಿ, ಅದು ನನ್ನ ಸಿನಿಮಾದ ಶೀರ್ಷಿಕೆ ಅಂತ ತಕರಾರು ತೆಗೆದಿದ್ದರು.
ಅದಿನ್ನೂ ಬಗೆಹರಿದಿಲ್ಲ. ಈಗ “ಲೀಡರ್’ ಟೈಟಲ್ನ ಸರದಿ. ಹೌದು ಶಿವರಾಜಕುಮಾರ್ ಅಭಿನಯದ ತರುಣ್ ಶಿವಪ್ಪ ನಿರ್ಮಾಣದ “ಲೀಡರ್’ ಚಿತ್ರ ಶುರುವಾಗಿ, ಮುಗಿದು, ಇನ್ನೇನು ಪ್ರೇಕ್ಷಕರ ಮುಂದೆ ಬರೋಕೆ ತಯಾರಿ ಮಾಡಿಕೊಳ್ಳುತ್ತಿದೆ. ಈಗ ನಿರ್ದೇಶಕ ಎಎಂಆರ್ ರಮೇಶ್ ಅವರು “ಲೀಡರ್’ ನನ್ನ ಬ್ಯಾನರ್ನಲ್ಲಿ ನೋಂದಣಿಯಾದ ಶೀರ್ಷಿಕೆ.
ಅದನ್ನು ಯಾರೂ ಬಳಕೆ ಮಾಡದಂತೆ ಸೂಚನೆ ನೀಡಬೇಕು ಎಂದು ಮನವಿ ಮಾಡಿ, ಫೆಬ್ರವರಿ 18, 2017 ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದರು. ಫೆಬ್ರವರಿ 20, 2017 ರಂದು ಆ ಮನವಿ ಸ್ವೀಕರಿಸಿದ ಮಂಡಳಿಯು, “ಲೀಡರ್’ ಶೀರ್ಷಿಕೆಯನ್ನು ಬಳಸಬಾರದೆಂದು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಿದೆ. ಗೌರವ ಕಾರ್ಯದರ್ಶಿ ಎಂ.ಜಿ.ರಾಮಮೂರ್ತಿ ಅವರು ವಶಿಷ್ಟ ಪಿಕ್ಚರ್ಗೆ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಪ್ರೇಕ್ಷಕಳಾಗಿ ಕಾಂಗರೂ ನನಗೆ ಇಷ್ಟವಾಯಿತು..
Sandalwood: ಬಿಸಿಲ ಧಗೆ ಎಫೆಕ್ಟ್; ಔಟ್ಡೋರ್ ಶೂಟಿಂಗ್ನಿಂದ ಸಿನಿಮಂದಿ ದೂರ
Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್
MUST WATCH
ಹೊಸ ಸೇರ್ಪಡೆ
Gangster ಗೋಲ್ಡಿ ಬ್ರಾರ್ ಸತ್ತಿಲ್ಲ… ಶೂಟೌಟ್ ಬಗ್ಗೆ ಸ್ಪಷ್ಟನೆ ನೀಡಿದ ಅಮೆರಿಕ ಪೊಲೀಸರು
Pens: ಬಹುರೂಪದಲ್ಲಿ ಲಭ್ಯವಿರುವ ಬಹುಪಯೋಗಿ ಲೇಖನಿ
70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ; ನಿರ್ವಹಣೆಯಿಲ್ಲದೆ ಸೊರಗಿದ ಮಲ್ಲಿಕಟ್ಟೆ ಪಾರ್ಕ್
Rajinikanth ಬಯೋಪಿಕ್ಗೆ ಭರ್ಜರಿ ತಯಾರಿ; ಬಾಲಿವುಡ್ ನಿರ್ಮಾಪಕನಿಂದ ಸಿನಿಮಾ ನಿರ್ಮಾಣ
Udupi: ಪರಿಸರ ಸ್ನೇಹಿ ಸಿಎನ್ಜಿ ಬಸ್ ಸಂಚಾರ-ಸಿಎನ್ಜಿ ಲಭ್ಯತೆ ಸಮಸ್ಯೆ