ಸಂಕ್ರಾಂತಿಗೆ ಪರಭಾಷಾ ಅಬ್ಬರ; ಕನ್ನಡ ಚಿತ್ರಗಳಿಗೆ ಕಾಡಲಿದೆ ಥಿಯೇಟರ್‌ ಸಮಸ್ಯೆ


Team Udayavani, Jan 6, 2023, 2:41 PM IST

ಸಂಕ್ರಾಂತಿಗೆ ಪರಭಾಷಾ ಅಬ್ಬರ; ಕನ್ನಡ ಚಿತ್ರಗಳಿಗೆ ಕಾಡಲಿದೆ ಥಿಯೇಟರ್‌ ಸಮಸ್ಯೆ

ವರ್ಷ ಆರಂಭವಾಗಿದೆ. ಮತ್ತೆ ಸಿನಿಮಾ ಜಾತ್ರೆ ಶುರುವಾಗಿದೆ. 2022ರ ಅದೃಷ್ಟದ ನೆನಪು ಒಂದು ಕಡೆಯಾದರೆ 2023 ಆಶಾಭಾವನೆಯೊಂದಿಗೆ ಸಿನಿಮಾ ಬಿಡುಗಡೆಯಾಗುತ್ತಿವೆ. ಮೊದಲ ವಾರ (ಜ.06) ಕನ್ನಡದಿಂದ 9 ಸಿನಿಮಾಗಳು ತೆರೆಕಾಣುತ್ತಿವೆ. ಹಾಗಾದರೆ, ಮುಂದಿನ ವಾರ ಅಂದರೆ ಸಂಕ್ರಾಂತಿ ಹಬ್ಬಕ್ಕೆ ಕನ್ನಡದಿಂದ ಬರುತ್ತಿರುವ ಸ್ಟಾರ್‌ ಸಿನಿಮಾ ಯಾವುದು ಎಂದು ನೀವು ಕೇಳಬಹುದು. ಅದಕ್ಕೆ ಉತ್ತರವಿಲ್ಲ. ಏಕೆಂದರೆ ಪ್ರತಿ ವರ್ಷದಂತೆ ಈ ಬಾರಿಯೂ ಸಂಕ್ರಾಂತಿಯಲ್ಲಿ ಪರಭಾಷಾ ಅಬ್ಬರ ಜೋರಾಗಿರಲಿದೆ.

ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿರುವ ಪರಭಾಷಾ ಸ್ಟಾರ್‌ ಸಿನಿಮಾಗಳು ಸಂಕ್ರಾಂತಿಗೆ ಅಖಾಡಕ್ಕೆ ಇಳಿಯುತ್ತಿವೆ. ಹೀಗಾಗಿ, ಸಂಕ್ರಾಂತಿಗೆ ಕನ್ನಡದಿಂದ ಯಾವುದೇ ದೊಡ್ಡ ಸ್ಟಾರ್‌ ಸಿನಿಮಾಗಳು ಘೋಷಣೆಯಾಗಿಲ ತಮಿಳಿನ ಎರಡು ಹಾಗೂ ತೆಲುಗಿನ ಎರಡು ಸಿನಿಮಾಗಳು ಸಂಕ್ರಾಂತಿಗೆ ಅಭಿಮಾನಿಗಳನ್ನು ರಂಜಿಸಲಿವೆ.

ತಮಿಳಿನಿಂದ ವಿಜಯ್‌ ನಟನೆಯ “ವಾರಿಸು’ ಹಾಗೂ ಅಜಿತ್‌ ನಟನೆಯ “ತುನಿವು’ ಚಿತ್ರಗಳು ಬಿಡುಗಡೆಯಾದರೆ, ತೆಲುಗಿನಿಂದ ಮೆಗಾಸ್ಟಾರ್‌ ಚಿರಂಜೀವಿ ನಟನೆಯ “ವಾಲ್ಟರ್‌ ವೀರಯ್ಯ’ ಹಾಗೂ ಬಾಲಕೃಷ್ಣ ನಾಯಕರಾ ಗಿರುವ “ವೀರಸಿಂಹ ರೆಡ್ಡಿ’ ಚಿತ್ರಗಳು ಸಂಕ್ರಾಂತಿಗೆ ತೆರೆಕಾಣುತ್ತಿವೆ. ಈ ಎಲ್ಲಾ ನಟರಿಗೂ ದೊಡ್ಡ ಫ್ಯಾನ್‌ಬೇಸ್‌ ಇರುವುದರಿಂದ ಸಿನಿಮಾಗಳು “ಹಬ್ಬ’ವಾಗಲಿದೆ. “ವಾರಿಸು’ ಹಾಗೂ “ತುನಿವು’ ಚಿತ್ರಗಳು ಜ.11ರಂದು ತೆರೆಕಂಡರೆ, ತೆಲುಗಿನ “ವೀರ ಸಿಂಹ ರೆಡ್ಡಿ’ ಜ.12ರಂದು ಹಾಗೂ “ವಾಲ್ಟರ್‌ ವೀರಯ್ಯ’ ಜ.13ರಂದು ಬಿಡುಗಡೆಯಾಗುತ್ತಿವೆ ಈಗಾಗಲೇ ಈ ಸಿನಿಮಾಳ ಹಾಡು, ಟೀಸರ್‌, ಟ್ರೇಲರ್‌ ಹಿಟ್‌ಲಿಸ್ಟ್‌ ಸೇರುವ ಮೂಲಕ ಸಿನಿಮಾ ಅಭಿಮಾನಿಗಳಲ್ಲಿ ಕ್ರೇಜ್‌ ಕೂಡಾ ಹೆಚ್ಚಾಗಿದೆ. ಹಾಗಾಗಿ, ಸಂಕ್ರಾಂತಿಗೆ ಕರ್ನಾಟಕದಲ್ಲೂ ಪರಭಾಷಾ ಸಿನಿಮಾಗಳ ಅಬ್ಬರ ಜೋರಾಗಿಯೇ ಇರಲಿದೆ.

‌ಕನ್ನಡದಿಂದ ಹೊಸಬರ ಸಿನಿಮಾ

ಮೊದಲೇ ಹೇಳಿದಂತೆ ಕನ್ನಡದಿಂದ ಯಾವುದೇ ಸ್ಟಾರ್‌ ಸಿನಿಮಾಗಳು ಸಂಕ್ರಾಂತಿಗೆ ಬಿಡುಗಡೆಯಾಗುತ್ತಿಲ್ಲ. ಬದಲಾಗಿ ಹೊಸಬರ ಒಂದೆರಡು ಸಿನಿಮಾಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ. ಇದಕ್ಕೆ ಕಾರಣ ಚಿತ್ರಮಂದಿರಗಳ ಸಮಸ್ಯೆ. ಹೌದು, ಸಂಕ್ರಾಂತಿಗೆ ಬಿಡುಗಡೆಯಾಗುತ್ತಿರುವ ಪರಭಾಷೆಯ 4 ಚಿತ್ರಗಳು ಕೂಡಾ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿವೆ. ಹಾಗಾಗಿ, ಕನ್ನಡ ಚಿತ್ರಗಳಿಗೆ ಮತ್ತೆ ಚಿತ್ರಮಂದಿರಗಳ ಸಮಸ್ಯೆ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಶೋ ಸಮಸ್ಯೆ ಕಾಡಲಿದೆ.

ಜನವರಿ ಬಿಡುಗಡೆಯಲ್ಲಿ ಇಳಿಕೆ

ಹೊಸ ವರ್ಷದಲ್ಲಿ ಸಾಲು ಸಾಲು ಸಿನಿಮಾಗಳು ತೆರೆಕಾಣಲು ಸಜ್ಜಾಗಿವೆಯಾದರೂ ಜನವರಿಯಲ್ಲಿ ಮಾತ್ರ ಬಿಡುಗಡೆಯ ಸಂಖ್ಯೆಯಲ್ಲಿ ಇಳಿಕೆಯಾಗುವ ಲಕ್ಷಣಗಳು ಕಾಣುತ್ತಿವೆ. ಈ ವಾರ 9 ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಆದರೆ, ಮುಂದಿನ ವಾರ ಮೂರ್‍ನಾಲ್ಕು ಹಾಗೂ ಜ.20ಕ್ಕೆ ಮೂರ್‍ನಾಲ್ಕು ಸಿನಿಮಾಗಳಷ್ಟೇ ತೆರೆಕಾಣುತ್ತಿವೆ. ಅದಕ್ಕೆ ಸಂಕ್ರಾಂತಿಗೆ ತೆರೆಕಾಣುತ್ತಿರುವ ಪರಭಾಷಾ ಸಿನಿಮಾಗಳು ಒಂದು ಕಡೆಯಾದರೆ, ಜ.25ರಂದು ಶಾರುಖ್‌ ಖಾನ್‌ “ಪಠಾಣ್‌’ ಹಾಗೂ ಜ.26ರಂದು ದರ್ಶನ್‌ “ಕ್ರಾಂತಿ’ ತೆರೆಗೆ ಬರುತ್ತಿರುವುದು ಮತ್ತೂಂದು ಕಾರಣ. ಸದ್ಯ “ಕ್ರಾಂತಿ’ ಜೊತೆ ಕನ್ನಡದಿಂದ ಯಾವ ಸಿನಿಮಾವೂ ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿಲ್ಲ.

ವಿಜಯ್ ಗ್ರ್ಯಾಂಡ್ ಎಂಟ್ರಿ

ನಟ ದುನಿಯಾ ವಿಜಯ್‌ ತೆಲುಗಿನ “ವೀರಸಿಂಹ ರೆಡ್ಡಿ’ ಚಿತ್ರದಲ್ಲಿ ಬಾಲಕೃಷ್ಣ ಅವರ ಎದುರು ವಿಲನ್‌ ಆಗಿ ಅಬ್ಬರಿಸಿದ್ದಾರೆ. ಸಖತ್‌ ರಗಡ್‌ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ವಿಜಯ್‌ “ವೀರಸಿಂಹರೆಡ್ಡಿ’ ಚಿತ್ರದ ಮೂಲಕ ತೆಲುಗಿಗೆ ಗ್ರ್ಯಾಂಡ್‌ ಎಂಟ್ರಿಕೊಡಲಿದ್ದಾರೆ. ಇನ್ನು, ಕನ್ನಡದಲ್ಲಿ ಅವರ ನಿರ್ದೇಶನ, ನಟನೆಯ “ಭೀಮ’ ಚಿತ್ರ ಚಿತ್ರೀಕರಣದಲ್ಲಿದ್ದು, ಈ ವರ್ಷವೇ ತೆರೆಕಾಣಲಿದೆ.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ

Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.