ರೇಡಿಯೋ ಜಾಕಿಯ ಹೊಸ ಮೈಲಿಗಲ್ಲು; ಕತ್ತಲ ಕಾಡಲ್ಲಿ ನೇತ್ರ ಓಡಾಟ!


Team Udayavani, Jul 2, 2018, 12:40 PM IST

netra.jpg

ಕನ್ನಡದಲ್ಲಿ ಆರ್‌ಜೆಗಳು ತೆರೆಯ ಮೇಲೆ  ಕಾಣಿಸಿಕೊಂಡಿರುವುದು ಹೊಸ ವಿಚಾರವೇನಲ್ಲ. ಹಾಗೇ ಆರ್‌ಜೆ ನೇತ್ರ ಅವರಿಗೂ ಸಿನಿಮಾ ಹೊಸದಲ್ಲ. ಆದರೀಗ ಹೊಸದೊಂದು ಮೈಲಿಗಲ್ಲಿನತ್ತ ತಮ್ಮ ಚಿತ್ತ ಹರಿಸಿದ್ದಾರೆ ಎಂಬುದೇ ಈ ಹೊತ್ತಿನ ವಿಶೇಷ. ಹೌದು, “ಆಟಗಾರ’ ಹಾಗೂ “ರಿಂಗ್‌ರೋಡ್‌-ಶುಭಾ’ ಚಿತ್ರದ ಬಳಿಕ “ಬಿಗ್‌ಬಾಸ್‌’ ಮನೆಗೆ ಹೋಗಿದ್ದ ಆರ್‌ಜೆ ನೇತ್ರ, ಹೊರ ಬಂದವರಿಗೆ ಸಿನಿಮಾ ಹುಡುಕಿ ಬಂದದ್ದು “6 ನೇ ಮೈಲಿ’. ಈ ಚಿತ್ರ ಈ ವಾರ ತೆರೆಗೆ ಬರುತ್ತಿದೆ.

ಈ ಕುರಿತು ಹೇಳಿಕೊಳ್ಳುವ ನೇತ್ರ, “ಕಥೆ ಮತ್ತು ಪಾತ್ರ ಕೇಳಿದಾಗ ಇಲ್ಲೊಂದು ಚಾಲೆಂಜ್‌ ಪಾತ್ರ ಇದೆ ಅಂತೆನಿಸಿತು. ಕೂಡಲೇ ಗ್ರೀನ್‌ಸಿಗ್ನಲ್‌ ಕೊಟ್ಟೆ. ಆದರೆ ಚಿತ್ರದಲ್ಲಿ ಸಂಚಾರಿ ವಿಜಯ್‌ ಇದ್ದಾರೆ ಅಂದಾಗ, ಒಂದಷ್ಟು ಭಯ ಶುರುವಾಗಿದ್ದುಂಟು. ಯಾಕೆಂದರೆ, ನಟನೆಯಲ್ಲಿ ರಾಷ್ಟ್ರಮಟ್ಟದ ಗಮನಸೆಳೆದ ಸಂಚಾರಿ ವಿಜಯ್‌ ಜೊತೆ ಹೇಗಪ್ಪಾ ಕೆಲಸ ಮಾಡೋದು, ಅವರ ಮುಂದೆ ನಾನು ಡಮ್ಮಿ ಪೀಸ್‌ ಆಗಿಬಿಡ್ತೀನಾ’ ಎಂಬ ಪ್ರಶ್ನೆ ಕಾಡಿದ್ದು ನಿಜ. ಕೊನೆಗೆ ಚಾಲೆಂಜಿಂಗ್‌ ತಗೊಂಡು ಕೆಲಸ ಮಾಡಿದಾಗಲೇ ಮಾತಿಗೂ ನಟನೆಗೂ ಎಷ್ಟೊಂದು ವ್ಯತ್ಯಾಸ ಇದೆ ಅಂತ ಗೊತ್ತಾಗಿದ್ದು ಎನ್ನುತ್ತಾರೆ ನೇತ್ರ.

ಈ ಚಿತ್ರದಲ್ಲಿ ನನ್ನ ಪಾತ್ರಕ್ಕೆ ಪ್ರಾಮುಖ್ಯತೆ ಇದೆ. ನನಗಿಲ್ಲಿ ಎರಡು ಶೇಡ್‌ ಪಾತ್ರವಿದೆ. ಮೊದಲರ್ಧ ಒಂದು ರೀತಿಯ ಪಾತ್ರವಿದ್ದರೆ, ದ್ವಿತಿಯಾರ್ಧದಲ್ಲಿ ಇನ್ನೊಂದು ಶೇಡ್‌ ಪಾತ್ರವಿದೆ. ಅದೊಂದು ರೀತಿಯ ಸ್ಟ್ರಾಂಗ್‌ ವುಮೆನ್‌ ಪಾತ್ರ. ತೆರೆಯ ಮೇಲೆ ನನ್ನ ಪಾತ್ರ ನೋಡಿದರೆ, ಖಂಡಿತ ಎಲ್ಲರಿಗೂ ಇಷ್ಟವಾಗುತ್ತೆ. ಪಾತ್ರದ ಬಗ್ಗೆ ಹೇಳುವುದಾದರೆ, ಟ್ರಕ್ಕಿಂಗ್‌ಗೆ ಹೋದಾಗ, ಕೆಲವೊಂದ ಘಟನೆಗಳು ನಡೆದು ಹೋಗುತ್ತವೆ. ಆಮೇಲೆ ಏನೆಲ್ಲಾ ಆಗಿಹೋಗುತ್ತೆ ಎನ್ನುವುದು ಕಥೆ. 

ವಿಶೇಷವೆಂದರೆ, ಸುಮಾರು 12 ದಿನಗಳ ಕಾಲ ರಾತ್ರಿಯಿಡೀ ಚಿತ್ರೀಕರಣ ನಡೆದಿದೆ. ಕೆಲವೊಮ್ಮೆ ಹಗಲು-ರಾತ್ರಿಯೂ ನಿರಂತರ ಚಿತ್ರೀಕರಣ ಮಾಡಿದ್ದುಂಟು. ರಾತ್ರಿ ಚಿತ್ರೀಕರಣ ನನಗೊಂದು ವಿಶೇಷ ಅನುಭವ ಕಟ್ಟಿಕೊಟ್ಟಿದ್ದು ಸುಳ್ಳಲ್ಲ. ಸಂಜೆ ಆಗುತ್ತಿದ್ದಂತೆಯೇ ಸಾಕಪ್ಪಾ ಕೆಲಸ ಅಂದುಕೊಳ್ಳುವ ನನಗೆ, ರಾತ್ರಿಯೆಲ್ಲಾ ಚಿತ್ರೀಕರಣದಲ್ಲಿರಬೇಕಾಗಿತ್ತು. ಅದರಲ್ಲೂ ಯಲ್ಲಾಪುರ, ಶಿರಸಿಯ ದಟ್ಟ ಕಾಡಿನ ನಡುವೆ ಓಡುವ, ಸುತ್ತಾಡುವ ದೃಶ್ಯಗಳಿದ್ದವು. ಅದೆಷ್ಟು ಮೈಲಿಗಳನ್ನು ದಾಟಿದ್ದೇವೋ ಗೊತ್ತಿಲ್ಲ. ಕತ್ತಲ ಕಾಡಲ್ಲಿ ಓಡೋದೇ ಒಂದು ಚಾಲೆಂಜ್‌ ಆಗಿತ್ತು. ಇನ್ನು, ಈ ಚಿತ್ರದಲ್ಲಿ ಸಾಕಷ್ಟು ಅನುಭವ ಆಗಿದೆ. ನಾಯಕ ಸಂಚಾರಿ ವಿಜಯ್‌ ಅವರೊಂದಿಗೆ ಒಳ್ಳೆಯ ಕೆಲಸ ಕಲಿತುಕೊಂಡೆ ಎಂದು ವಿವರ ಕೊಡುತ್ತಾರೆ ನೇತ್ರ.

ಅವರಿಗೆ ಆರ್‌ಜೆ ಮಾತು ಮುಖ್ಯವೋ, ನಟನೆ ಮುಖ್ಯವೋ ಎಂಬ ಪ್ರಶ್ನೆ ಮುಂದಿಟ್ಟಾಗ, “ಆರ್‌ಜೆ ಆಗಿ ಮೈಕ್‌ ಮುಂದೆ ಸುಲಭವಾಗಿ ಮಾತಾಡಬಹುದು. ಅಲ್ಲಿ ವಾಯ್ಸವೊಂದೇ ಪ್ರತಿಯೊಂದನ್ನು ಹೇಳುತ್ತಾ ಹೋಗುತ್ತೆ. ಆದರೆ, ಸಿನಿಮಾ ಹಾಗಲ್ಲ, ಕ್ಯಾಮೆರಾ ಮುಂದೆ ಹೇಗೆ ಇರಿ¤àವಿ, ಯಾವ ದೃಶ್ಯಕ್ಕೆ ಎಂಥಾ ಅಭಿನಯ ಕೊಡಬೇಕು ಎಂಬ ಚಾಲೆಂಜ್‌ ಇರುತ್ತೆ. ಆರ್‌ಜೆಯಾಗಿ ವಾಯ್ಸ ಬ್ಯಾಲೆನ್ಸ್‌ ಮಾಡಿದರೆ, ನಟಿಯಾಗಿ ಫೇಸ್‌, ಬಾಡಿಲಾಂಗ್ವೇಜ್‌ ಬ್ಯಾಲೆನ್ಸ್‌ ಮಾಡಬೇಕು. ಅದೊಂದು ದೊಡ್ಡ ಚಾಲೆಂಜ್‌ ಎನ್ನುವ ನೇತ್ರ, ಸಹೋದರ ರಿಷಿ ಜೊತೆ ನಟಿಸಲು ಉತ್ಸಾಹದಲ್ಲಿದ್ದಾರೆ. ಒಳ್ಳೆಯ ಕಥೆ ಬಂದರೆ ಖಂಡಿತ ನಟಿಸ್ತೀನಿ. ಸದ್ಯಕ್ಕೆ ಈ ಚಿತ್ರ ರಿಲೀಸ್‌ ಬಳಿಕ ಬೇರೊಂದು ಸಿನಿಮಾ ಕುರಿತು ಹೇಳ್ತೀನಿ ಎಂದಷ್ಟೇ ಹೇಳುತ್ತಾರೆ ನೇತ್ರ.

ಟಾಪ್ ನ್ಯೂಸ್

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.