ಲಿಪ್‌ಲಾಕ್‌ಗೆ ಒಲ್ಲೆ ಅಂದ ಸಂಯುಕ್ತ ಹೆಗ್ಡೆ!

ಮೈ ನೇಮ್‌ ಈಸ್‌ ರಾಜಾ ಚಿತ್ರದಲ್ಲಿ ಅಂಥದ್ಧೇನಿದೆ?

Team Udayavani, May 5, 2019, 3:00 AM IST

samyukta

ಸಂಯುಕ್ತ ಹೆಗ್ಡೆ ಅಂದಾಕ್ಷಣ, ಬೋಲ್ಡ್‌ ಆಗಿ ಮಾತನಾಡುವ ಅಷ್ಟೇ ಸಖತ್‌ ಹಾಟ್‌ ಆಗಿ ಕಾಣವ ನಟಿ ಎಂದೇ ಖ್ಯಾತಿ. ಈಗಾಗಲೇ ಸಂಯುಕ್ತ ಹೆಗ್ಡೆ ಕಾಣಿಸಿಕೊಂಡಿರುವ ಬಹುತೇಕ ಚಿತ್ರಗಳನ್ನು ಗಮನಿಸಿದರೆ, ಅಲ್ಲಿ ಪಕ್ಕಾ ಟಾಮ್‌ಬಾಯ್‌ ಆಗಿ, ಸಿಕ್ಕಾಪಟ್ಟೆ ಮಾತನಾಡುವ ಹುಡುಗಿಯಾಗಿ, ಗ್ಲಾಮರಸ್‌ ಪಾತ್ರದಲ್ಲಿ ಮಿಂಚಿರುವುದು ಕಂಡು ಬರುತ್ತೆ.

ಇಂತಹ ನಟಿ, ಇದೀಗ ಚಿತ್ರವೊಂದರಲ್ಲಿ ಬರುವ ಲಿಪ್‌ಲಾಕ್‌ ಸೀನ್‌ಗಾಗಿ ಆ ಚಿತ್ರವನ್ನೇ ಒಲ್ಲೆ ಅಂದಿದ್ದಾರೆ! ಹೌದು, ಇದು ನಿಜ. ಸಂಯುಕ್ತ ಹೆಗ್ಡೆ ಲಿಪ್‌ಲಾಕ್‌ ಸೀನ್‌ ಇದೆ ಎಂಬ ಕಾರಣಕ್ಕೆ ಹೊಸ ಚಿತ್ರವೊಂದರ ಅವಕಾಶ ಕೈ ಬಿಟ್ಟಿದ್ದಾರೆ. ಹೀಗಂತ ಹೇಳಿಕೊಂಡಿದ್ದು, ನಟ ರಾಜ್‌ ಸೂರ್ಯನ್‌.

ಯಾರು ಈ ರಾಜ್‌ ಸೂರ್ಯನ್‌ ಎಂಬ ಪ್ರಶ್ನೆಗೆ, “ಸಂಚಾರಿ’, “ಜಟಾಯು’ ಚಿತ್ರಗಳನ್ನು ಹೆಸರಿಸಬೇಕು. ಆ ಚಿತ್ರದ ಹೀರೋ ರಾಜ್‌ ಸೂರ್ಯ ಈಗ “ಮೈ ನೇಮ್‌ ಈಸ್‌ ರಾಜಾ’ ಎಂಬ ಚಿತ್ರದ ಹೀರೋ. ಈ ಚಿತ್ರವನ್ನು ಅಶ್ವಿ‌ನ್‌ ಕೃಷ್ಣ ನಿರ್ದೇಶಿಸುತ್ತಿದ್ದು, ನಾಯಕ ರಾಜ್‌ ಸೂರ್ಯ ಸಹೋದರ ಪ್ರಭುಸೂರ್ಯ (ಪ್ರಭಾಕರ್‌) ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಈ ಚಿತ್ರದಲ್ಲಿ ಒಬ್ಬರಲ್ಲ, ಇಬ್ಬರಲ್ಲ ಒಟ್ಟು ಮೂವರು ನಾಯಕಿಯರು. ಆ ಪೈಕಿ ಒಂದು ಪಾತ್ರವನ್ನು ಮಾಡುವಂತೆ ಸಂಯುಕ್ತ ಹೆಗ್ಡೆ ಅವರನ್ನು ಕೇಳಿದಾಗ, ಅವರು ಕಥೆ ಕೇಳಿ, ಇಷ್ಟಪಟ್ಟು ಮಾಡುವುದಾಗಿ ಒಪ್ಪಿದ ಬಳಿಕ, ಚಿತ್ರವನ್ನು ತಿರಸ್ಕರಿಸಿದ್ದಾರಂತೆ.

ಕನ್ನಡದ ಬಹುತೇಕ ನಟಿಯರನ್ನು ಸಂಪರ್ಕಿಸಿ, ಕಥೆ ಹೇಳಿದಾಗ, ಅವರೆಲ್ಲರೂ ಕೂಡ ಆ ಪಾತ್ರ ಮಾಡಲ್ಲ ಅಂತಾನೇ ಕೈ ಬಿಟ್ಟಿದ್ದಾರೆ. ಬರೋಬ್ಬರಿ ಸಾವಿರಕ್ಕೂ ಹೆಚ್ಚು ಕನ್ನಡದ ಪ್ರತಿಭೆಗಳು ಮಾಡಲ್ಲ ಎಂದರು ಎಂಬುದು ನಾಯಕ ರಾಜ್‌ ಸೂರ್ಯ ಅವರ ಮಾತು.

ಹಾಗಾದರೆ, ಆ ನಾಯಕಿ ಪಾತ್ರ ಅಷ್ಟೊಂದು ಬೋಲ್ಡ್‌ ಆಗಿದೆಯಾ? ಈ ಪ್ರಶ್ನೆಗೆ, ತೆಲುಗಿನ “ಅರ್ಜುನ್‌ರೆಡ್ಡಿ’ “ಆರ್‌ಎಕ್ಸ್‌ 100′ ರೀತಿಯ ಕೆಲ ಹಾಟ್‌ ಸೀನ್‌ಗಳು ಇಲ್ಲೂ ಇವೆ. ಅವೆಲ್ಲವೂ ಕಥೆಗೆ ಪೂರಕವಾಗಿದ್ದರಿಂದ ಆ ಸೀನ್‌ ಇಡಲಾಗಿದೆ. ಸಾಕಷ್ಟು ಕಡೆ ಲಿಪ್‌ಲಾಕ್‌ ಸೀನ್‌ ಇದ್ದುದರಿಂದ ಕನ್ನಡದ ಯಾರೊಬ್ಬರೂ ಮಾಡಲು ಒಪ್ಪಿಲ್ಲ ಎಂಬುದು ರಾಜ್‌ ಸೂರ್ಯ ಮಾತು.

ಅದೆಲ್ಲಾ ಸರಿ, ಕನ್ನಡದ ಯಾರೆಲ್ಲಾ ನಟಿಯರನ್ನು ಸಂಪರ್ಕಿಸಿದ್ದೀರಿ ಎಂಬ ಪ್ರಶ್ನೆಗೆ, ಎಲ್ಲರ ಹೆಸರನ್ನು ಹೇಳಲು ಆಗಲ್ಲ. ಆದರೆ, ಆಡಿಷನ್‌ನಲ್ಲಿ ಕನ್ನಡದ ಹೊಸ ಪ್ರತಿಭೆಗಳ್ಯಾರು ಮಾಡುವುದಿಲ್ಲ ಎಂದಿದ್ದು ನಿಜ. ಆ ಸಾಲಿನಲ್ಲಿ ಸಂಯುಕ್ತ ಹೆಗ್ಡೆ ಅವರೂ ಇದ್ದರು’ ಎಂಬುದು ರಾಜ್‌ ಸೂರ್ಯ ಅವರ ಮಾತು.

ಅದೇನೆ ಇರಲಿ, ಸಂಯುಕ್ತ ಹೆಗ್ಡೆ ಲಿಪ್‌ಲಾಕ್‌ ಸೀನ್‌ ಮಾಡಲ್ಲ ಅಂದಿದ್ದು ಓಕೆ, ಅದರಲ್ಲೂ “ಮೈ ನೇಮ್‌ ಈಸ್‌ ರಾಜಾ’ ಎಂಬ ಶೀರ್ಷಿಕೆಯೇ ಕೇಳಲು ಖುಷಿಯಾಗಿರುವಾಗ, ಆ ಚಿತ್ರದಲ್ಲಿ ಅಷ್ಟೊಂದು ಲಿಪ್‌ಲಾಕ್‌ ಸೀನ್‌ಗಳು ಬೇಕಿತ್ತಾ? ಈ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ.

ಕೊನೆಗೆ ಮುಂಬೈ ಮೂಲದ ಇಬ್ಬರು ಹೊಸ ಪ್ರತಿಭೆಗಳನ್ನು ಒಪ್ಪಿಸಿ, ಚಿತ್ರೀಕರಣ ಮಾಡಲಾಗಿದೆ ಎಂಬುದು ಚಿತ್ರತಂಡದ ಹೇಳಿಕೆ. ಅಂದಹಾಗೆ, ಮುಂಬೈನ ಆಕರ್ಷಕ ಹಾಗು ನಸ್ರಿನ್‌ ನಾಯಕಿಯರಾಗಿ ನಟಿಸಿದ್ದು, ಅವರಿಗೆ ಇದು ಮೊದಲ ಚಿತ್ರ. ಈ ಪೈಕಿ ಯಾರು ಲಿಪ್‌ಲಾಕ್‌ ಸೀನ್‌ ಒಪ್ಪಿ ಬಂದಿದ್ದಾರೆ ಎಂಬುದಕ್ಕೆ ಸಿನಿಮಾ ಬರುವವರೆಗೆ ಕಾಯಲೇಬೇಕು.

ಟಾಪ್ ನ್ಯೂಸ್

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

21

Rachana inder: ಮರ್ಡರ್‌ ಮಿಸ್ಟರಿ 4 ಎನ್‌ 6

Sandalwood: ರಿಲಯನ್ಸ್‌ ತೆಕ್ಕೆಗೆ ʼಜಡ್ಜ್ ಮೆಂಟ್‌ʼ

Sandalwood: ರಿಲಯನ್ಸ್‌ ತೆಕ್ಕೆಗೆ ʼಜಡ್ಜ್ ಮೆಂಟ್‌ʼ

Sandalwood: ಸ್ಪಂದನಾ ಇದ್ದಿದ್ದರೆ ಬಹಳ ಖುಷಿಪಡುತ್ತಿದ್ದಳು.. ವಿಜಯ ರಾಘವೇಂದ್ರ ಭಾವುಕ

Sandalwood: ಸ್ಪಂದನಾ ಇದ್ದಿದ್ದರೆ ಬಹಳ ಖುಷಿಪಡುತ್ತಿದ್ದಳು.. ವಿಜಯ ರಾಘವೇಂದ್ರ ಭಾವುಕ

ಕೊರಗಜ್ಜ, ಕಲ್ಲುರ್ಟಿ ದೈವಗಳಿಗೆ ‘ಫಸ್ಟ್ ಲುಕ್’ ತೋರಿಸಿ ಅನುಮತಿ ಪಡೆದ ‘ಕೊರಗಜ್ಜ’ ಚಿತ್ರತಂಡ

ಕೊರಗಜ್ಜ, ಕಲ್ಲುರ್ಟಿ ದೈವಗಳಿಗೆ ‘ಫಸ್ಟ್ ಲುಕ್’ ತೋರಿಸಿ ಅನುಮತಿ ಪಡೆದ ‘ಕೊರಗಜ್ಜ’ ಚಿತ್ರತಂಡ

Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್‌ʼ

Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್‌ʼ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.