ಕಲಾವಿದರು ಬಿಝಿನೆಸ್ ಮಾಡಬಾರದೇ?


Team Udayavani, Apr 5, 2018, 1:24 PM IST

Ashwath-Neenasam-(17).jpg

ಅಶ್ವತ್ಥ್ ನೀನಾಸಂ ಪ್ರಮುಖ ಪಾತ್ರದಲ್ಲಿ ನಟಿಸಿರುವ “ಜಯಮಹಲ್‌’ ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಅಪಪ್ರಚಾರದಿಂದ ಕಳೆದೇ ಹೋಗಿದ್ದ ಅಶ್ವತ್ಥ್, ಈಗ ಕ್ರಮೇಣ ಒಂದಿಷ್ಟು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ “ಯೋಗಿ ದುನಿಯಾ’ದಲ್ಲಿ ಅವರಿಗೊಂದು ಒಳ್ಳೆಯ ಪಾತ್ರವಿತ್ತು. ದಲ್ಲದೆ “ಕೆಜಿಎಫ್’, “ಕಾನೂರಾಯಣ’, “ನರಗುಂದ ಬಂಡಾಯ’ ಸೇರಿದಂತೆ ಇನ್ನೊಂದಿಷ್ಟು ಚಿತ್ರಗಳಲ್ಲಿ ಅವರಿಗೆ ಒಳ್ಳೆಯ ಪಾತ್ರವಿದೆಯಂತೆ ಮತ್ತು ಅವರಿಗೂ ಈ ಚಿತ್ರಗಳ ಬಗ್ಗೆ ನಂಬಿಕೆ ಇದೆ.

ಎಲ್ಲಾ ಸರಿ, ಅದೇನೋ ಅಪಪ್ರಚಾರದಿಂದ ಕಳದೇ ಹೋಗಿದ್ದ ಅಂತ ಬರೆದಿದ್ರಲ್ಲ, ಅದೇನದು ಎಂಬ ಪ್ರಶ್ನೆ ಬರಬಹುದು. ಅದೇನೆಂದರೆ, ಅಶ್ವತ್ಥ್ ನಟನೆಯ ಜೊತೆಗೆ ಬನ್ನೂರು ಬಳಿ ಕೃಷಿ ಮಾಡಿಕೊಂಡಿದ್ದಾರೆ. ಒಂದಿಷ್ಟು ಹಸು ಸಾಕಿದ್ದಾರೆ. ಹಾಗಾಗಿ ಅವರು ಅದರಲ್ಲೇ ಬಿಝಿಯಾಗಿದ್ದಾರೆ ಮತ್ತು ಅವರು ನಟಿಸುವುದು ಕಷ್ಟ ಎಂಬ ಸುದ್ದಿ ಓಡಾಡಿಕೊಂಡಿತ್ತು. ಈ ಅಪಪ್ರಚಾರದಿಂದ ಅಶ್ವತ್ಥ್ ಒಂದಿಷ್ಟು ಚಿತ್ರಗಳನ್ನು ಮತ್ತು ಪಾತ್ರಗಳನ್ನು ಕಳೆದುಕೊಂಡರು.

ಈ ಕುರಿತು ಮಾತನಾಡುವ ಅವರು, “ನಮ್ಮಂಥವರಿಗೆ ಪ್ರತಿ ಚಿತ್ರವೂ ಒಂದು ಹೋರಾಟ, ಪ್ರತಿ ಚಿತ್ರವೂ ಅನ್ನ. ನಾನು ಸಿನಿಮಾಗಳಲ್ಲಿ ನಟಿಸುವುದಿಲ್ಲ ಅಂತ ಅಪಪ್ರಚಾರ ಮಾಡಿದರು. ನನಗೆ ಅಭಿನಯವೇ ಜೀವನ. ಅದರ ಜೊತೆಗೆ ಕೃಷಿ ಸಹ ಮಾಡಿಕೊಂಡಿದ್ದೀನಿ. ಇವತ್ತು ಯಾರೂ ಸಹ 365 ದಿನಗಳ ಕಾಲ ಬಿಝಿ ಇರುವುದಿಲ್ಲ. ದೊಡ್ಡ ದೊಡ್ಡ ಹೀರೋಗಳು ಸಹ ಬೇರೆ ಬೇರೆ ಬಿಝಿನೆಸ್‌ಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ನಟನೆ ಜೊತೆಗೆ ಚಾನಲ್‌ಗ‌ಳಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಇನ್ನು ಬಾಲಿವುಡ್‌ನ‌ಲ್ಲಿ ಎಲ್ಲರೂ ಒಂದಲ್ಲ ಒಂದು ಬಿಝಿನೆಸ್‌ ಇಟ್ಟುಕೊಂಡಿದ್ದಾರೆ. 

ನಟನೆ ಜೊತೆಗೆ ಅದನ್ನೂ ನೋಡಿಕೊಳ್ಳುತ್ತಾರೆ. ಇಷ್ಟಕ್ಕೂ ಯಾಕೆ ಮಾಡಬಾರದು ಹೇಳಿ?’ ಎಂದು ಪ್ರಶ್ನಿಸುತ್ತಾರೆ ಅವರು. “ನಿಜ ಹೇಳಬೇಕೆಂದರೆ, ಇದುವರೆಗೂ ಒಳ್ಳೆಯ ಪಾತ್ರಗಳು ಅಂತ ಬಂದಿದ್ದು ಕಡಿಮೆ. ಅಂತ ಪಾತ್ರಗಳು ಸಿಕ್ಕಾಗಲೂ, ನಾನು ಬಿಝಿ ಇದ್ದೀನಿ ಅಂತ ಅಪಪ್ರಚಾರ ನಡೆಯಿತು. ಒಳ್ಳೆಯ ಪಾತ್ರಗಳು ಸಿಕ್ಕರೆ ಮಧ್ಯರಾತ್ರಿ ಎದ್ದು ಬರುತ್ತೀನಿ. ಒಂದೊಳ್ಳೆಯ ಪಾತ್ರ ಅಂತ ಸಿಕ್ಕಾಗ, ನಮ್ಮ ತಂದೆ ತೀರಿಕೊಂಡಾಗಲೂ ಬಂದು ನಟಿಸಿದೆ. 

ಪಾತ್ರಕ್ಕೆ ಸಮಸ್ಯೆಯಾಗಬಹುದು ಅಂತ ತಲೆಯನ್ನೂ ಬೋಳಿಸಿಕೊಳ್ಳಲಿಲ್ಲ. ಒಳ್ಳೆಯ ಕಥೆ ಮತ್ತು ಪಾತ್ರ ಸಿಕ್ಕರೆ ಸಂಭಾವನೆ ಸಹ ಗೌಣ. ಮುಖ್ಯವಾಗಿ ಒಮ್ಮೆ ಸಂಪರ್ಕ ಮಾಡಬೇಕು. ನಾನು ಸಿಗುವುದಿಲ್ಲ ಅಂದರೆ, ಹಾಗೆಯೇ 180 ಚಿತ್ರಗಳನ್ನ ಮಾಡೋಕೆ ಆಯ್ತಾ? ಅದೆಲ್ಲಾ ಸುಳ್ಳು. ಇದರಿಂದ ನಟರ ಪರಂಪರೆಯೇ ಹಾಳಾಗುತ್ತೆ. ನಾನು ಬೆಂಗಳೂರಿನಲ್ಲೇ ಇರುತ್ತೀನಿ. ಇಲ್ಲಾಂದರೆ ಮೈಸೂರು. ಕೆಲಸ ಇದ್ದರೆ ಬಂದು ಹೋಗುತ್ತೀನಿ. ತೆಲುಗು-ತಮಿಳಿನವರಿಗೆ ನನ್ನ ನಂಬರ್‌ ಸಿಗಬಹುದು. ಇಲ್ಲಿನವರಿಗೆ ಯಾಕೆ ಸಿಗುವುದಿಲ್ಲ’ ಎಂಬ ಇನ್ನೊಂದು ಪ್ರಶ್ನೆಯನ್ನು ಅವರು ಬಿಡುತ್ತಾರೆ.

ಇನ್ನು “ಜಯಮಹಲ್‌’ ಚಿತ್ರವು “ಮಾತಂಗಿ’ ಹೆಸರಿನಲ್ಲಿ ತಮಿಳಿನಲ್ಲೂ ನಿರ್ಮಾಣವಾಗಿ ಬಿಡುಗಡೆಯಾಗುತ್ತಿದೆ. ಈ ಚಿತ್ರದ ನಂತರ ಪರಭಾಷೆಗಳಲ್ಲಿ ದೊಡ್ಡ ಬಾಗಿಲು ತೆರೆಯುವ ನಂಬಿಕೆ ಅವರಿಗಿದೆ. “ಇದುವರೆಗೂ ನಾನು ಬೇರೆ ಭಾಷೆಗಳಿಗೆ ಹೋಗಿರಲಿಲ್ಲ. ಈಗ ಇದೊಂದು ವೇದಿಕೆ ಆಗಬಹುದು. ಈ ಮಧ್ಯೆ ಕೆಲವು ಚಿತ್ರತಂಡಗಳಿಂದ ಮಾತುಕತೆ ನಡೆಯುತ್ತಿದೆ. ಎಲ್ಲಾ ಕೂಡಿ ಬಂದರೆ, ಪರಭಾಷೆಗಳಲ್ಲೂ ನಟಿಸುತ್ತೀನಿ. 

ಅದರಿಂದ ಇಲ್ಲಿ ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡಬಹುದು. ಅಲ್ಲಿ ಒಳ್ಳೆಯ ಅವಕಾಧ, ದುಡ್ಡು ಬಂದರೆ, ನನಗೇನು ಇಲ್ಲಿ ಅಪಾರ್ಟ್‌ಮೆಂಟ್‌ ತೆಗೆದುಕೊಳ್ಳುವ ಆಸೆ ಇಲ್ಲ. ಇಲ್ಲಿ ಇನ್ನೊಂದಿಷ್ಟು ಒಳ್ಳೆಯ ಕೆಲಸ ಮಾಡುವುದಕ್ಕೆ ಸ್ಫೂರ್ತಿ ಬರುತ್ತದೆ’ ಎನ್ನುತ್ತಾರೆ ಅವರು.

ಟಾಪ್ ನ್ಯೂಸ್

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

anna 2

Hate speech: ಅಣ್ಣಾಮಲೈ ವಿಚಾರಣೆಗೆ ತಡೆ ವಿಸ್ತರಣೆ

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

UGC

UGC;ಉಪನ್ಯಾಸಕರ ಅರ್ಹತಾ ಪರೀಕ್ಷೆ ಜೂ.18ಕ್ಕೆ

drowned

Kenya; ಭಾರೀ ಮಳೆಗೆ ಒಡೆದ ಡ್ಯಾಮ್‌: ಕನಿಷ್ಠ 40 ಸಾವು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.