ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ
Team Udayavani, Jan 12, 2019, 6:14 AM IST
ಕನ್ನಡ ಚಿತ್ರರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರತಿವರ್ಷ ನೀಡಲಾಗುವ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 2018ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದೆ. ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 42ನೇ ವಾರ್ಷಿಕೋತ್ಸವದ ಅಂಗವಾಗಿ ನಡೆಯುತ್ತಿರುವ 18ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಇದಾಗಿದ್ದು, ಇದೇ ಜ. 25ರ ಶುಕ್ರವಾರ ಸಂಜೆ 5.30ಕ್ಕೆ ಚಾಮರಾಜಪೇಟೆಯ ಕರ್ನಾಟಕ ಚಲನಚಿತ್ರ ಕಲಾದರ ಸಂಘದ ಆಡಿಟೋರಿಯಂನಲ್ಲಿ ನಡೆಯಲಿದೆ.
ಹಿರಿಯ ಪ್ರಚಾರಕರ್ತ ದಿವಂಗತ ಡಿ.ವಿ ಸುಧೀಂದ್ರ ತಮ್ಮ ಸಂಸ್ಥೆಗೆ 25ವರ್ಷ ತುಂಬಿದ ಸಂದರ್ಭದಲ್ಲಿ ಚಿತ್ರರಂಗದ ಅನ್ನದಾತರಾದ ನಿರ್ಮಾಪಕರಿಗೆ ಮತ್ತು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ನೀಡುವ ಪರಿಪಾಠ ಆರಂಭಿಸಿದರು. ಎರಡು ಪ್ರಶಸ್ತಿಗಳೊಂದಿಗೆ ಆರಂಭವಾದ ಈ ಪ್ರಶಸ್ತಿಯ ಸಂಖ್ಯೆ ಈಗ 11ಕ್ಕೆ ಏರಿದೆ. ಪ್ರಸ್ತುತ ಈ ಸಂಸ್ಥೆಯನ್ನು ಸುಧೀಂದ್ರ ವೆಂಕಟೇಶ್, ಸುನೀಲ್ ಹಾಗೂ ವಾಸುದೇವ್ ಮುನ್ನಡೆಸಿಕೊಂಡು ಬರುತ್ತಿದ್ದಾರೆ.
ಪ್ರಶಸ್ತಿ ವಿವರ ಹೀಗಿದೆ
* ರಾಕ್ಲೈನ್ ವೆಂಕಟೇಶ್, ನಿರ್ಮಾಪಕ (ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ)
* ಬನ್ನಂಜೆ ಗೋವಿಂದಾಚಾರ್, ಹಿರಿಯ ಪತ್ರಕರ್ತರು (ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ)
* ಎಸ್. ಜಾನಕಿ, ಹಿರಿಯ ಗಾಯಕಿ (“ಡಾ. ರಾಜಕುಮಾರ್ ಪ್ರಶಸ್ತಿ’)
* ಪಿ.ವಾಸು, ಹಿರಿಯ ನಿರ್ದೇಶಕ (“ಆರ್.ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ’)
* ಆರೂರು ಸತ್ಯಭಾಮ, ಹಿರಿಯ ನಟಿ (ಶ್ರೀಮತಿ ಜಯಮಾಲ ಎಚ್.ಎಂ ರಾಮಚಂದ್ರ ಪ್ರಶಸ್ತಿ)
* ವಾಸುಕಿ ವೈಭವ್, ಸಂಗೀತ ನಿರ್ದೇಶಕ (ಉತ್ತಮ ಸಂಗೀತ ನಿರ್ದೇಶನ )
* ರಿಷಭ್ ಶೆಟ್ಟಿ, ನಟ, ನಿರ್ದೇಶಕ (ಉತ್ತಮ ಕಥೆ)
* ಬಿ.ಎ.ಮಧು, ಹಿರಿಯ ಸಂಭಾಷಣೆಕಾರ (ಅತ್ಯುತ್ತಮ ಸಂಭಾಷಣೆ )
* ಕಾರ್ತಿಕ್ ಸರಗೂರು, ನಿರ್ದೇಶಕ (ಅತ್ಯುತ್ತಮ ಚೊಚ್ಚಲ ನಿರ್ದೇಶನ)
* ಚಂಪಾ ಶೆಟ್ಟಿ, ನಿರ್ದೇಶಕಿ (ಅತ್ಯುತ್ತಮ ಚೊಚ್ಚಲ ನಿರ್ದೇಶನ))
* ಕೆ.ಕಲ್ಯಾಣ, ಗೀತಸಾಹಿತಿ (ಉತ್ತಮ ಗೀತರಚನೆ)
* ದೊಡ್ಡಣ್ಣ, ಹಿರಿಯ ನಟ (ಪತ್ರಕರ್ತ ಸಿ. ಸೀತಾರಾಂ ಸ್ಮರಣಾರ್ಥ ಪ್ರಶಸ್ತಿ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!