ಸೂರಜ್‌ಗೌಡ ಈಗ ನಿರ್ದೇಶಕ


Team Udayavani, Jan 6, 2020, 12:30 PM IST

cinema-tdy-2

ಸೂರಜ್‌ ಗೌಡ ಅಭಿನಯದ “ನಿನ್ನ ಸನಿಹಕೆ’ ಚಿತ್ರ ಇನ್ನೇನು ಒಂದು ಸಾಂಗ್‌ ಮತ್ತು ಒಂದು ಫೈಟ್‌ ಚಿತ್ರೀಕರಿಸಿದರೆ ಚಿತ್ರೀಕರಣ ಪೂರ್ಣಗೊಳ್ಳಲಿದೆ. ಈಗ ಈ ಚಿತ್ರದ ಅಪ್‌ಡೇಟ್‌ ಏನೆಂದರೆ, ಸೂರಜ್‌ಗೌಡ ನಟನೆ ಜೊತೆಯಲ್ಲಿ ಇದೇ ಮೊದಲ ಸಲ ನಿರ್ದೇಶನಕ್ಕೂ ಇಳಿದಿದ್ದಾರೆ.

ಹೌದು, ಚಿತ್ರದಲ್ಲೊಂದು ಬದಲಾವಣೆ ಅಂದರೆ, ಸೂರಜ್‌ ಗೌಡ ನಿರ್ದೇಶಕರಾಗಿರೋದು. ಹಾಗಂತ, ನಿರ್ದೇಶನ ಮಾಡಲೇಬೇಕು ಅಂತ ಮಾಡಿದ್ದಲ್ಲ. ಆಕಸ್ಮಿಕ ಎಂಬಂತೆ ಅವರ ಪಾಲಿಗೆ ನಿರ್ದೇಶನದ ಜವಾಬ್ದಾರಿ ಬಂದಿದೆ. ಹಾಗಾದರೆ, ಸೂರಜ್‌ಗೌಡ ಹೀಗೆ ದಿಢೀರನೆ ನಿರ್ದೇಶಕರಾಗಲು ಕಾರಣವಿಷ್ಟೇ.

ಸುಮನ್‌ ಜಾದುಗಾರ್‌ ಅವರು “ನಿನ್ನ ಸನಿಹಕೆ’ ಚಿತ್ರ ನಿರ್ದೇಶಕರು. ಮೂರು ದಿನಗಳ ಕಾಲ ಅವರು ನಿರ್ದೇಶನವನ್ನೂ ಮಾಡಿದ್ದರು. ಆದರೆ, ಬೈಕ್‌ ಅಪಘಾತದಿಂದಾಗಿ ಅವರು ಕೈಗೆ ಪೆಟ್ಟು ತಿಂದು ವಿಶ್ರಾಂತಿ ಪಡೆಯಬೇಕಾಯಿತು. ಆದರೆ, ಚಿತ್ರಕ್ಕೆ ಎಲ್ಲಾ ತಯಾರುನಡೆದಿದ್ದರಿಂದ, ಅದನ್ನು ಸೂರಜ್‌ಗೌಡ ಅವರು ಮುಂದುವರೆಸಬೇಕು ಎಂಬ ಸೂಚನೆ ನಿರ್ಮಾಪಕರಿಂದ ಸಿಕ್ಕಿತು. ಸೂರಜ್‌ಗೌಡ ಅವರ ಕಥೆ ಆಗಿದ್ದರಿಂದ, ಅವರೂ ಸ್ಕ್ರಿಪ್ಟ್ನಲ್ಲಿ ತೊಡಗಿದ್ದರಿಂದ ಚಿತ್ರದ ಪ್ರತಿಯೊಂದು ಸೀನ್‌ ಬಗ್ಗೆಯೂ ಗೊತ್ತಿತ್ತು. ಕೊನೆಗೆ, ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಸೂರಜ್‌ಗೌಡ ಅವರೇ ಆ್ಯಕ್ಷನ್‌-ಕಟ್‌ ಹೇಳ್ಳೋಕೆ ಮುಂದಾದರು. ಹದಿನೈದು ದಿನಗಳ ಬಳಿಕ ನಿರ್ದೇಶಕ ಸುಮನ್‌ ಜಾದುಗಾರ್‌ ಬಂದು ಚಿತ್ರದ ಔಟ್‌ಪುಟ್‌ ನೋಡಿದಾಗ, ಖುಷಿಪಟ್ಟು, ಇದನ್ನು ಸೂರಜ್‌ಗೌಡ ಅವರೇ ಮುಂದುವರೆಸಲಿ, ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ ಅಂತ ಪ್ರೋತ್ಸಾಹಿಸಿದ್ದಾರೆ. ಹಾಗಾಗಿ, ಸೂರಜ್‌ಗೌಡ ಅವರೇ ಚಿತ್ರವನ್ನು ನಿರ್ದೇಶಿಸುವಂತಾಗಿದೆ.  ನಿರ್ದೇಶನ ಕುರಿತು ಹೇಳುವ ಸೂರಜ್‌ಗೌಡ, “ಮೊದಲ ಸಲ ನಿರ್ದೇಶನ ಮಾಡಿದ್ದೇನೆ. ಹಾಗಂತ ಯಾವುದೇ ಯೋಚನೆ ಇರಲಿಲ್ಲ. ಸಿನಿಮಾ ಬಗ್ಗೆ ತಿಳಿದಿತ್ತು. ಫಿಲ್ಮ್ ಮೇಕಿಂಗ್‌ ಹೇಗೆ ಅನ್ನುವುದು ಗೊತ್ತಿತ್ತು. ಸ್ಕ್ರಿಪ್ಟ್ ನನ್ನದೇ ಆಗಿದ್ದರಿಂದ ಅನಿವಾರ್ಯವಾಗಿ ಆ್ಯಕ್ಷನ್‌-ಕಟ್‌ ಹೇಳಬೇಕಾಯಿತು. ಕೆಲಸ ಸಾರ್ಥಕ ಎನಿಸಿದೆ. ಎಲ್ಲರಿಗೂ ಚಿತ್ರದ ಮೇಲೆ ನಂಬಿಕೆಯೂ ಬಂದಿದೆ. ನಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಚೆನ್ನಾಗಿ ಮೂಡಿಬಂದಿದೆ. ಧನ್ಯಾ ರಾಮ್‌ಕುಮಾರ್‌ ಅವರು ತುಂಬಾನೇ ಚೆನ್ನಾಗಿ ನಟಿಸಿದ್ದಾರೆ. ಸಿನಿಮಾ ನೋಡಿದವರು ಅವರ ಮೊದಲ ಚಿತ್ರವಿದು ಎಂದು ಹೇಳುವುದಿಲ್ಲ. ಅವರಿಗಿಲ್ಲಿ ನಟನೆಗೆ ಸಾಕಷ್ಟು ಸ್ಕೋಪ್‌ ಇದೆ. ಕಷ್ಟಪಟ್ಟು ಎನ್ನುವುದಕ್ಕಿಂತ ಇಷ್ಟಪಟ್ಟು ಚಿತ್ರ ಮಾಡಿದ್ದೇವೆ. ಒಳ್ಳೆಯ ಟೀಮ್‌ ಜೊತೆಗಿತ್ತು. ಹಾಗಾಗಿ ಎಲ್ಲೂ ಸಮಸ್ಯೆ ಆಗಿಲ್ಲ’ ಎನ್ನುವ ಸೂರಜ್‌ ಗೌಡ, ಏಪ್ರಿಲ್‌ 24ರಂದು ಡಾ.ರಾಜಕುಮಾರ್‌ ಅವರ ಹುಟ್ಟುಹಬ್ಬಕ್ಕೆ ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆ. ಆ ಬಗ್ಗೆ ಚರ್ಚೆ ನಡೆಯುತ್ತಿದೆ’ ಎನ್ನುತ್ತಾರೆ.

ಟಾಪ್ ನ್ಯೂಸ್

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Cinema; ರಾಜ್ಯಾದ್ಯಂತ “ಸಾಂಕೇತ್‌’ ಸಿನೆಮಾ ತೆರೆಗೆ

Kannada Cinema; ರಾಜ್ಯಾದ್ಯಂತ “ಸಾಂಕೇತ್‌’ ಸಿನೆಮಾ ತೆರೆಗೆ

Sandalwood; ಶೀಘ್ರದಲ್ಲಿ ತೆರೆಗೆ ಬರುತ್ತಿದೆ ‘ಕಬಂಧ’

Sandalwood; ಶೀಘ್ರದಲ್ಲಿ ತೆರೆಗೆ ಬರುತ್ತಿದೆ ‘ಕಬಂಧ’

bheema

Duniya Vijay; ‘ಭೀಮ’ನಿಗಾಗಿ ತೆರೆಯಲಿದೆ ಮುಚ್ಚಿದ 18 ಚಿತ್ರಮಂದಿರ

Kannada Movies: ಹಿಟ್‌ ರೇಟ್‌ ಮೇಲೆ; ಸ್ಯಾಟಲೈಟ್‌, ಓಟಿಟಿಯ ಹೊಸ ಧೋರಣೆ

Kannada Movies: ಹಿಟ್‌ ಮೇಲೆ ರೇಟ್‌; ಸ್ಯಾಟಲೈಟ್‌, ಓಟಿಟಿಯ ಹೊಸ ಧೋರಣೆ

Sandalwood; ಕನ್ನಡದಲ್ಲಿ ಇಂದು ತೆರೆಗೆ ಬರುತ್ತಿದೆ ನಾಲ್ಕು ಚಿತ್ರಗಳು

Sandalwood; ಕನ್ನಡದಲ್ಲಿ ಇಂದು ತೆರೆಗೆ ಬರುತ್ತಿದೆ ನಾಲ್ಕು ಚಿತ್ರಗಳು

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.