![1-assam](https://www.udayavani.com/wp-content/uploads/2024/07/1-assam-415x233.jpg)
ಸೂರಿ ಪಾಪ್ಕಾರ್ನ್ ಮತ್ತು ರಗಡ್ಟೀಸರ್
Team Udayavani, Jan 8, 2020, 10:19 AM IST
![cinema-tdy-2](https://www.udayavani.com/wp-content/uploads/2020/01/cinema-tdy-2-1-620x349.jpg)
ಸೂರಿ ನಿರ್ದೇಶನದ “ಪಾಪ್ಕಾರ್ನ್ ಮಂಕಿ ಟೈಗರ್’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನೋಡಿದವರಿಗೆ ಇಡೀ ಚಿತ್ರದಲ್ಲಿ ಸೂರಿ ಸ್ಟೈಲ್ ಎದ್ದು ಕಾಣುತ್ತದೆ. ಅದರಲ್ಲೂ ಟೀಸರ್ ಸಿಕ್ಕಾಪಟ್ಟೆ ರಗಡ್ ಆಗಿದ್ದು, ಸೂರಿ ಸಿನಿಮಾಗಳನ್ನು ಇಷ್ಟಪಡುವವರಿಗೆ ಇದು ಹೇಳಿಮಾಡಿಸಿದ ಸಿನಿಮಾವಾಗಲಿದೆ ಎಂಬ ಮಾತು ಈಗಾಗಲೇ ಕೇಳಿಬರುತ್ತಿದೆ. ಸದ್ಯ ಟ್ರೆಂಡಿಂಗ್ನಲ್ಲೂ “ಪಾಪ್ ಕಾರ್ನ್ ಮಂಕಿ ಟೈಗರ್’ ಸದ್ದು ಮಾಡುತ್ತಿದೆ.
ಹೊಸ ಗೆಟಪ್ನಲ್ಲಿ ಧನಂಜಯ್ ಕಾಣಿಸಿಕೊಂಡಿದ್ದು, ಅವರ ಪಾತ್ರದ ಬಗ್ಗೆ ಅಭಿಮಾನಿಗಳ ಕುತೂಹಲ ಹೆಚ್ಚುವಂತಿದೆ. ಟೀಸರ್ ಹಾಗೂ ರಗಡ್ ಮೇಕಿಂಗ್ ಬಗ್ಗೆ ಮಾತನಾಡುವ ಸೂರಿ, ಚಿತ್ರದ ಸಬೆjಕ್ಟ್ ಹಾಗಿದೆ. ಅದಕ್ಕೆ ತಕ್ಕಂತೆ ಮೇಕಿಂಗ್ ಮಾಡಿದ್ದೇವೆ. ಒಬ್ಬ ವ್ಯಕ್ತಿಯೊಳಗಿನ ಪ್ರೀತಿ-ಪ್ರೇಮ, ಭಯ, ಅಸಹನೆ, ಆಕ್ರೋಶ, ಆನಂದ, ಎಲ್ಲವನ್ನೂ ಇದರಲ್ಲಿ ಕಟ್ಟಿಕೊಡಬೇಕಾಗಿತ್ತು. ಹಾಗಾಗಿ ಅದೆಲ್ಲದರ ಝಲಕ್ ಅನ್ನು ಟೀಸರ್ನಲ್ಲಿ ನೋಡಬಹುದು. ಸಿನಿಮಾದಲ್ಲಿ ಅದೆಲ್ಲದಕ್ಕೂ ಉತ್ತರ ಸಿಗುತ್ತದೆ. ಪ್ರತಿ ದೃಶ್ಯ, ಸನ್ನಿವೇಶಗಳು ಕಾಡುತ್ತ ಸಾಗುತ್ತದೆ’ ಎನ್ನುತ್ತಾರೆ.
ಈಗಾಗಲೇ ರಿಲೀಸ್ ಅಗಿರುವ ಪೋಸ್ಟರ್, ಫಸ್ಟ್ಲುಕ್ ಎಲ್ಲದಕ್ಕೂ ಬಿಗ್ ರೆಸ್ಪಾನ್ಸ್ ಸಿಗುತ್ತಿದೆ. ಈ ಖುಷಿ ಸೂರಿಗಿದೆ. “ಇತ್ತೀಚೆಗಷ್ಟೇ ಪಬ್ಲಿಸಿಟಿಯ ಭಾಗವಾಗಿ ಟೀಸರ್ ಕೂಡ ರಿಲೀಸ್ ಮಾಡಿದ್ದೇವೆ. ಅದಕ್ಕೂ ಒಳ್ಳೆಯ ರೆಸ್ಪಾನ್ಸ್ ಸಿಗ್ತಿದೆ. ಈಗ ಸಿಗುತ್ತಿರುವ ರೆಸ್ಪಾನ್ಸ್ ಮತ್ತಷ್ಟು ಶಕ್ತಿ ಕೊಡುತ್ತಿದೆ. ಅದರಿಂದ ಮತ್ತೆ ಹೊಸದೇನಾದ್ರೂ ಮಾಡುತ್ತೇನೆ’ ಎನ್ನುತ್ತಾರೆ. ಈ ಚಿತ್ರವನ್ನು ಸುಧೀರ್ ಕೆ.ಎಂ ನಿರ್ಮಿಸಿದ್ದಾರೆ. ಜನವರಿ ಕೊನೆಗೆ ಅಥವಾ ಫೆಬ್ರವರಿಗೆ ರಿಲೀಸ್ ಮಾಡುವ ಪ್ಲಾನ್ ಚಿತ್ರತಂಡದ್ದು.
ಟಾಪ್ ನ್ಯೂಸ್
![1-assam](https://www.udayavani.com/wp-content/uploads/2024/07/1-assam-415x233.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![1-assam](https://www.udayavani.com/wp-content/uploads/2024/07/1-assam-150x84.jpg)
UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್?
![New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್ ಗ್ಯಾಂಗ್’](https://www.udayavani.com/wp-content/uploads/2024/07/POLICE-5-12-150x79.jpg)
New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್ ಗ್ಯಾಂಗ್’
![1-kanwar-msid](https://www.udayavani.com/wp-content/uploads/2024/07/1-kanwar-msid-150x84.jpg)
Uttara Khand; ಕನ್ವರ್ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!
![court](https://www.udayavani.com/wp-content/uploads/2024/07/court-7-150x83.jpg)
Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!
![robbers](https://www.udayavani.com/wp-content/uploads/2024/07/robbers-1-150x89.jpg)
Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.