ಚಾನಲ್‌ಗೆ ವ್ಯಕ್ತಿ ಮುಖ್ಯ; ಕಾನ್ಸೆಪ್ಟ್ ಅಲ್ಲ


Team Udayavani, Apr 5, 2018, 1:42 PM IST

Ravikiran-(4).jpg

1) ರವಿಕಿರಣ್‌ ಯಾಕೆ ಮುಂಚಿನಂತೆ ಕಿರುತೆರೆಯಲ್ಲಿ ಧಾರಾವಾಹಿಗಳನ್ನು ನಿರ್ದೇಶಿಸುತ್ತಿಲ್ಲ?
2) ರವಿಕಿರಣ್‌ ಯಾಕೆ ಇತ್ತೀಚೆಗೆ ಯಾವುದೇ ಧಾರಾವಾಹಿಗಳಲ್ಲಿ ಪಾತ್ರ ಮಾಡುತ್ತಿಲ್ಲ?
3) ಕಿರುತೆರೆಯಲ್ಲಿ ಅಷ್ಟೊಂದು ಧಾರಾವಾಹಿಗಳನ್ನು ನಿರ್ದೇಶನ ಮಾಡಿರುವ ರವಿಕಿರಣ್‌, ಚಿತ್ರ ನಿರ್ದೇಶಿಸುವ ಮನಸ್ಸೇಕೆ ಮಾಡಿಲ್ಲ?
ಈ ಮೂರು ಪ್ರಶ್ನೆಗಳು ಬರುವುದು ಸಹಜ. ಏಕೆಂದರೆ, ಒಂದು ಕಾಲದಲ್ಲಿ ಕಿರುತೆರೆಯ ದೊಡ್ಡ ಹೆಸರಾದ ರವಿಕಿರಣ್‌ ಇತ್ತೀಚೆಗೆ ಅಷ್ಟಾಗಿ ತೆರೆಯ ಮೇಲೂ ಕಾಣಿಸುತ್ತಿಲ್ಲ. ಇನ್ನು ನಿರ್ಮಾಣ-ನಿರ್ದೇಶನದ ಸುದ್ದಿಯೂ ಇಲ್ಲ. ಅಪರೂಪಕ್ಕೆಂಬಂತೆ “ಮದುವೆ ದಿಬ್ಬಣ’ ಎಂಬ ಚಿತ್ರದಲ್ಲಿ ಅವರು ನಟಿಸಿದ್ದು, ಆ ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಅವರು ಸಿಕ್ಕ ಸಂದರ್ಭದಲ್ಲಿ, ಅವರೆದುರು ಈ ಮೂರು ಪ್ರಶ್ನೆಗಳನ್ನು ಇಡಲಾಯಿತು. ಈ ಪ್ರಶ್ನೆಗಳಿಗೆ ಅವರೇನಂತಾರೆ ಗೊತ್ತಾ? ಮೂರು ಪ್ರಶ್ನೆಗಳಿಗೆ ಮೂರು ಉತ್ತರಗಳು ಇಲ್ಲಿವೆ.

1) ಕಳೆದ ಎರಡು ವರ್ಷಗಳಲ್ಲಿ ಎಲ್ಲಾ ಚಾನಲ್‌ಗ‌ಳಿಗೂ ಹೋಗಿ ಭೇಟಿ ಮಾಡಿ ಬಂದಿದ್ದೇನೆ. ಎಲ್ಲರೂ ಕಾನ್ಸೆಪ್ಟ್ ಕೇಳುತ್ತಾರೆ. ನಿಜ ಹೇಳಬೇಕೆಂದರೆ, ಇಲ್ಲಿ ಕಾನ್ಸೆಪ್ಟ್ ಮುಖ್ಯ ಅಲ್ಲ. ನಿಮಗೆ ಕೊಡಬೇಕು ಅಂದರೆ ಕೊಟ್ಟೇ ಕೊಡುತ್ತಾರೆ. ಇಲ್ಲವಾದರೆ, 50 ಕಾನ್ಸೆಪ್ಟ್ ಕೊಟ್ಟರೂ ಓಕೆ ಆಗುವುದಿಲ್ಲ. ನಮ್ಮ ಕೇಸ್‌ನಲ್ಲಿ ಆಗುತ್ತಿರುವುದೂ ಅದೇ. ಕೆಲವರಿಗೆ ಮೂರ್ಮೂರು ಧಾರಾವಾಹಿಗಳನ್ನು ಮಾಡೋಕೆ ಅವಕಾಶ ಸಿಗುತ್ತದೆ. ಆದರೆ, ನಮಗೆ ಸಿಗುವುದಿಲ್ಲ. ಯಾಕೆ ಅಂತ ನನಗೆ ಗೊತ್ತಿಲ್ಲ.

 ನನ್ನ “ಶಕ್ತಿ’ ಧಾರಾವಾಹಿಯ 545 ಎಪಿಸೋಡುಗಳು ಪ್ರಸಾರವಾಗಿದ್ದವು. “ಬದುಕು’ ಧಾರಾವಾಹಿ 13 ವರ್ಷ ಪ್ರಸಾರವಾಗಿತ್ತು. ಇಷ್ಟೆಲ್ಲಾ ಆದರೂ ನಮಗೆ ನಿರ್ದೇಶನ ಮಾಡೋಕೆ ಅವಕಾಶ ಇಲ್ಲ. 50 ಎಪಿಸೋಡುಗಳು ಪ್ರಸಾರ ಮಾಡಿ, ಚೆನ್ನಾಗಿಲ್ಲ ಎಂದರೆ ದುಡ್ಡು ಕೊಡಬೇಡಿ ಅಂತಲೂ ಹೇಳಿದ್ದೇನೆ. ಸೋತರೆ ಸಂಪೂರ್ಣ ನಷ್ಟ ನನಗೇ ಇರಲಿ, ಗೆದ್ದರೆ ದುಡ್ಡು ಕೊಡಿ ಅಂತ ಸ್ಪಷ್ಟಪಡಿಸಿದ್ದೇನೆ. ಆದರೂ ಯಾಕೋ ಯಾರೂ ಅವಕಾಶ ಕೊಡುವ ಮನಸ್ಸು ಮಾಡುತ್ತಿಲ್ಲ.

2) ಇದು ನನ್ನೊಬ್ಬನ ಕಥೆಯಲ್ಲಿ. ಕಿರುತೆರೆಯ ಸಾಕಷ್ಟು ಕಲಾವಿದರ ಸಮಸ್ಯೆ ಇದು. ಇವತ್ತು ಕಿರುತೆರೆಯಲ್ಲಿ ಸಾಕಷ್ಟು ಕಲಾವಿದರಿದ್ದಾರೆ. ವಿಚಿತ್ರ ಎಂದರೆ ಅವರ್ಯಾರಿಗೂ ಸರಿಯಾದ ಕೆಲಸ ಇಲ್ಲ. ಇವತ್ತು ಒಂದು ಧಾರಾವಾಹಿ ಮಾಡಿದರೆ, ಅವರು ಫಿನಿಶ್‌ ಎನ್ನುವಂತಾಗಿದೆ. ಏಕೆಂದರೆ, ಪ್ರತಿ ಧಾರಾವಾಹಿಯಲ್ಲೂ ಹೊಸಬರು ಬರುತ್ತಲೇ ಇದ್ದಾರೆ. ಒಮ್ಮೆ ಒಬ್ಬರು ಒಂದು ಧಾರಾವಾಹಿಯಲ್ಲಿ ನಟಿಸಿದರೆ, ಪುನಃ ಅವರಿಗೆ ಕೆಲಸ ಸಿಗುವುದು ಕಷ್ಟ. ಇವತ್ತು ಅದೆಷ್ಟು ಹಿರಿಯ ಕಲಾವಿದರು ಸುಮ್ಮನೆ ಕೂತಿದ್ದಾರೆ ಗೊತ್ತಾ? 

ಏನಿಲ್ಲವೆಂದರೂ, 500 ಪೋಷಕ ಕಲಾವಿದರು ಸಿಗುತ್ತಾರೆ. ಅವರೆಲ್ಲರಿಗೂ ಕೆಲಸ ಕೊಡಬಹುದು ಮತ್ತು ಎಲ್ಲರಿಗೂ ಕೆಲಸ ಇದೆ. ಏಕೆಂದರೆ, ಒಂದು ಮನೆಯ ಕಥೆ ಎಂದರೆ ಅಲ್ಲಿ ಅಜ್ಜ, ಅಜ್ಜಿ, ದೊಡ್ಡಪ್ಪ, ಚಿಕ್ಕಪ್ಪ ಅಂತ ಎಲ್ಲರೂ ಇರುತ್ತಾರೆ. ಬರೀ ನಾಯಕ-ನಾಯಕಿಯನ್ನೇ ಎಷ್ಟು ಅಂತ ತೋರಿಸೋಕೆ ಆಗುತ್ತೆ? ಸೀನಿಯರ್‌ಗಳಿಗೂ ಕೆಲಸ ಕೊಡಿ. ಇವತ್ತು ಒಂದು ದಿನಕ್ಕೆ ಎಲ್ಲಾ ಚಾನಲ್‌ಗ‌ಳಿಂದ 60 ಧಾರಾವಾಹಿಗಳು ಪ್ರಸಾರವಾಗುತ್ತಿದೆ. ಒಂದು ಧಾರಾವಾಹಿಯಲ್ಲಿ ಇಬ್ಬರು ಅಂತಿಟ್ಟುಕೊಂಡರೂ, 120 ನರಿಗೆ ಕೆಲಸ ಸಿಕ್ಕಂತಾಗುತ್ತದೆ. ಆದರೆ, ಕೆಲಸ ಕೊಡುವ ಮನಸ್ಸು ಮಾಡುತ್ತಿಲ್ಲ. ಇದರಿಂದ ಬಹಳಷ್ಟು ಕಲಾವಿದರಿಗೆ ಸಮಸ್ಯೆಯಾಗುತ್ತಿದೆ. ಹಣಕಾಸಿನ ಸಮಸ್ಯೆ ಎಷ್ಟೋ ಜನರನ್ನು ಕಾಡುತ್ತಿದೆ
.
3) ಕಳೆದ 10 ವರ್ಷಗಳಿಂದ ಸಿನಿಮಾ ಮಾಡಬೇಕು ಅಂತ ನನಗೂ ಆಸೆ ಇದೆ. ಸಿನಿಮಾ ಮಾಡಿ ಫ‌ಸ್ಟ್‌ ಕಾಪಿ ತರಬಹುದು. ಆಮೇಲೇನು ಅಂತ ನೆನಪಿಸಿಕೊಂಡರೆ ಭಯ ಆಗುತ್ತದೆ. ಮುಂಚೆ ಮಿನಿಮಮ್‌ ಗ್ಯಾರಂಟಿ ಅಂತ ಇತ್ತು. ಈಗ ಎಲ್ಲವೂ ಬದಲಾಗಿದೆ. ಸಿಕ್ಕಾಪಟ್ಟೆ ಚಿತ್ರಗಳು ಬರುತ್ತಿವೆ. ಅವು ಬಿಡುಗಡೆಯಾಗುವುದೇ ಗೊತ್ತಾಗುತ್ತಿಲ್ಲ. “ಮದುವೆ ದಿಬ್ಬಣ’ ಚಿತ್ರದ ಶೂಟಿಂಗ್‌ಗೆ ಮಳವಳ್ಳಿಗೆ ಹೋದಾಗ, ಅಲ್ಲಿ ಐದಾರು ತಂಡದವರು ಚಿತ್ರಗಳನ್ನು ಮಾಡುತ್ತಿದ್ದರು. ಎಲ್ಲರೂ ಹೊಸಬರೇ. 

5ಡಿ ಕ್ಯಾಮೆರಾಗಳನ್ನಿಟ್ಟುಕೊಂಡು ಕಡಿಮೆ ಬಜೆಟ್‌ನಲ್ಲಿ ಚಿತ್ರ ಮಾಡುತ್ತಿದ್ದರು. ಒಂದು ಕಾಲದಲ್ಲಿ ಸಿನಿಮಾ ಅಂದರೆ “ಲಾರ್ಜರ್‌ ದ್ಯಾನ್‌ ಲೈಫ್’ ಅಂತ ಇತ್ತು. ಈಗ ಹಾಗೇನಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಇತ್ತೀಚೆಗೆ ಯಾರು ದೊಡ್ಡ ದುಡ್ಡು ಮಾಡಿದ್ದಾರೆ ಹೇಳಿ? ಯಾರೂ ಇಲ್ಲ. ಸಿನಿಮಾ ಮಾಡಿಬಿಡಬಹುದು. ಸ್ನೇಹಿತರೊಂದಿಷ್ಟು ಜನ ಸೇರಿಕೊಂಡು, ಒಬ್ಬೊಬ್ಬರು 10 ಲಕ್ಷ ಅಂತ ಹಾಕಿದರೂ ಸಿನಿಮಾ ಆಗೋದು ಕಷ್ಟ ಅಲ್ಲ. ನನ್ನ ಸ್ನೇಹಿತರೇ ಹೇಳುತ್ತಾರೆ. ಅವರು ಕೊಡುವ ಹಣ ಸರಿಯಾಗಿ ಬಳಕೆಯಾಗಬೇಕು. ಹಾಕಿ ಏನೂ ಬರಲಿಲ್ಲ ಎಂದರೆ ಹೇಗೆ? ಅದೇ ಕಾರಣಕ್ಕೆ ಬೇಡ ಅಂತ ಸುಮ್ಮನೆ ಉಳಿದುಬಿಟ್ಟಿದ್ದೇನೆ.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.