ತುನಿಶಾ, ವೈಶಾಲಿ, ಪಲ್ಲವಿ.. 2022 ರಲ್ಲಿ ಪ್ರೀತಿಯಲ್ಲೇ ಅಂತ್ಯ ಕಂಡ ಕಿರುತೆರೆ ನಟಿಯರು ಇವರು..
Team Udayavani, Dec 27, 2022, 11:10 AM IST
ಮುಂಬಯಿ: ತುನಿಶಾ ಶರ್ಮಾಳ ಘಟನೆ ಹಿಂದಿ ಕಿರುತೆರೆ ಲೋಕಕ್ಕೆ ಆಘಾತ ನೀಡಿದೆ. ನಗುಮುಖದಿಂದ ಎಲ್ಲರೊಂದಿಗೆ ಆತ್ಮೀಯವಾಗಿ ಸೆಟ್ ನಲ್ಲಿರುತ್ತಿದ್ದ ತುನಿಶಾ ಅದೇ ಸೆಟ್ ನಲ್ಲಿ ನೇಣಿಗೆ ಶರಣಾಗಿ ಎಲ್ಲರನ್ನೂ ದುಃಖದ ಮಡುವಿಗೆ ದೂಡಿದ್ದಾರೆ. ಟಿವಿ ಲೋಕದ ತಾರೆಯರು ಈ ರೀತಿ ಹೆಜ್ಜೆಯಿಟ್ಟು ಜೀವನವನ್ನು ಮುಗಿಸಿರುವುದು ಇದೇ ಮೊದಲಲ್ಲ. 2022 ರಲ್ಲಿ ಬಣ್ಣದ ಲೋಕದಿಂದ ಮರೆಯಾಗಿ, ಇಹಲೋಕ ತ್ಯಜಿಸಿದ ನಟಿಯರ ಪಟ್ಟಿ ಇಲ್ಲಿದೆ…
ವೈಶಾಲಿ ಠಕ್ಕರ್ : ನೀವು ಹಿಂದಿ ಧಾರಾವಾಹಿಗಳನ್ನು ನೋಡುತ್ತಿದ್ದರೆ, ವೈಶಾಲಿ ಅವರನ್ನು ಖಂಡಿತವಾಗಿಯೂ ನೋಡಿರುತ್ತೀರಿ, ಹಿಂದಿಯ ಜನಪ್ರಿಯ ʼಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈʼ ಸೀರಿಯಲ್ ನಲ್ಲಿ ನಟಿಸುತ್ತಿದ್ದ ನಟಿ 2022 ರಲ್ಲಿ ಇಂದೋರ್ ನಲ್ಲಿನ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದರು. ಇವರ ಸಾವಿಗೆ ಮಾಜಿ ಗೆಳೆಯ ರಾಹುಲ್ ನವಲನ್ ಕಾರಣವೆಂದು ಆರೋಪ ಕೇಳಿ ಬಂದಿತ್ತು.
ಪಲ್ಲವಿ ದೇ: 25 ವರ್ಷದ ಪಲ್ಲವಿ ದೇ ಬಂಗಾಳಿ ಬಣ್ಣದ ಲೋಕದಲ್ಲಿ ಜನಪ್ರಿಯ ಹೆಸರು. “ಮೊನು ಮಾನೆ ನಾ” (Mon Mane Na) ಸೀರಿಯಲ್ ನಲ್ಲಿ ಪ್ರಧಾನ ಪಾತ್ರ ಮಾಡುತ್ತಿದ್ದರು. ಅಪಾರ ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿದ ಅವರು, 2022 ರ ಮೇನಲ್ಲಿ ದುರಂತ ಅಂತ್ಯ ಕಂಡಿದ್ದರು. ಈ ಪ್ರಕರಣದಲ್ಲಿ ಪಲ್ಲವಿ ಅವರ ಗೆಳಯ ಸಾಗ್ನಿಕ್ ಚಕ್ರವರ್ತಿ ಅವರನ್ನು ಬಂಧಿಸಲಾಗಿತ್ತು.
ಬಿದಿಶಾ ಡಿ ಮಜುಂದಾರ್: 21 ವರ್ಷದ ಬಿದಿಶಾ ಮಾಡೆಲ್ ಹಾಗೂ ನಟಿಯಾಗಿ ಖ್ಯಾತಿಯಾಗಿದ್ದರು. ಇದೇ ವರ್ಷದ ಮೇ 25 ರಂದು ಸಂಜೆ ಕೋಲ್ಕತ್ತಾದ ಅಪಾರ್ಟ್ ಮೆಂಟ್ ವೊಂದರಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದರು. ಈ ವೇಳೆ ಪೊಲೀಸರಿಗೆ ಸಾವಿಗೆ ಇರುವ ಕಾರಣವನ್ನು ಬರೆದಿರುವ ಪತ್ರ ಲಭ್ಯವಾಗಿತ್ತು. ಗೆಳೆಯ ಅಭಿನವ್ ಬೇರಾ ಅವರೊಂದಿಗೆ ಬ್ರೇಕಪ್ ಈ ಘಟನೆಗೆ ಕಾರಣವೆಂದು ತನಿಖೆಯಲ್ಲಿ ಬಯಲಾಗಿತ್ತು.
ಮಂಜುಷಾ ನಿಯೋಗಿ: ನಟಿ ಹಾಗೂ ಮಾಡೆಲ್ ಆಗಿ ಹೆಸರುಗಳಿಸಿದ್ದ ಮಂಜುಷಾ ನಿಯೋಗಿ 2022ರ ಮೇ 27 ರಂದು ಕೋಲ್ಕತ್ತಾದ ನಿವಾಸದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಪ್ರಕರಣಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲವಾದರೂ ಮಂಜುಷಾ ಅವರ ತಾಯಿ ನನ್ನ ಮಗಳು ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಿದ್ದರು.
ರಶ್ಮಿರೇಖಾ ಓಜಾ: ಒಡಿಯಾ ಧಾರಾವಾಹಿ ʼಕಮಿತಿ ಕಭಿ ಕಹಾʼನಲ್ಲಿ ನಟಿಸಿ ಖ್ಯಾತಿಯಾಗಿದ್ದ ರಶ್ಮಿರೇಖಾ ಭುವನೇಶ್ವರ್ ನಲ್ಲಿ ಸಾವಿಗೀಡಾಗಿದ್ದರು. ಈ ಘಟನೆಯ ಹಿಂದೆ ರಶ್ಮಿ ಅವರ ಗೆಳೆಯ ಸಂತೋಷ ಪತ್ರ ಅವರ ಹೆಸರು ಕೇಳಿ ಬಂದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್