ಅಪೂರ್ವ ಅನುಭವ: ದೈವ ನರ್ತಕರೊಂದಿಗೆ ‘ಕಾಂತಾರ’ ವೀಕ್ಷಿಸಿ ಸಚಿವ ಕೋಟ
Team Udayavani, Oct 26, 2022, 3:25 PM IST
ಕುಂದಾಪುರ : ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ದೈವ ನರ್ತಕರು ಮತ್ತು ದರ್ಶನ ಪಾತ್ರಿಗಳೊಂದಿಗೆ ಭೂತಾರಾಧನೆಯ ಮಹತ್ವ ಸಾರಿರುವ ‘ಕಾಂತಾರ’ ಚಿತ್ರವನ್ನು ಬುಧವಾರ ವೀಕ್ಷಿಸಿ ಸಂಭ್ರಮಿಸಿದರು.
ಸಿನಿಮಾ ವೀಕ್ಷಿಸಲು ಸಚಿವರು ಕೋಟೇಶ್ವರ ಭಾರತ್ ಚಿತ್ರಮಂದಿರಕ್ಕೆ ತೆರಳಿದಾಗ ದೈವ ನರ್ತಕರು ಮತ್ತು ದರ್ಶನ ಪಾತ್ರಿಗಳು ಪ್ರೀತಿಯಿಂದ ಸ್ವಾಗತಿಸಿದರು.
‘ನಟ, ನಿರ್ದೇಶಕ ರಿಷಬ್ ಶೆಟ್ಟಿಯವರ ಕಾಂತಾರ ಚಿತ್ರವು ಅದ್ಭುತವಾಗಿ ಮೂಡಿಬಂದಿದೆ. ನಮ್ಮ ನಾಡಿನ ದೈವಾರಾಧನೆ, ಕಂಬಳ ಸಹಿತ ಜನಪದ ಸೊಗಡನ್ನು ಅಚ್ಚೊತ್ತಿದಂತೆ ತೆರೆಮೇಲೆ ತಂದಿರುವ ತಂಡಕ್ಕೆ ಅಭಿನಂದನೆಗಳು.ಶುಭವಾಗಲಿ’ ಎಂದು ಕೋಟ ಶ್ರೀನಿವಾಸ್ ಪೂಜಾರಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
‘ನನ್ನೂರಿನ ಯುವಕ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಚಿತ್ರವನ್ನು ನನ್ನ ಇಲಾಖೆಗೆ ಸಂಬಂಧ ಪಟ್ಟಿರುವ ಹಿನ್ನಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ದೈವ ನರ್ತಕರೊಂದಿಗೆ ಚಿತ್ರ ವೀಕ್ಷಿಸಿದ್ದೇನೆ’ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.
‘ಕಾಂತಾರ ನೋಡಿ ಬಂದೆ.ನೂರಕ್ಕೂ ಹೆಚ್ಚು ದೈವ ನರ್ತಕರಾದ ಪಾಣಾರ ಯಾನೆ ನಲಿಕೆ ಮತ್ತು ಪಂಬದರು ಇತರ ದೈವಗಳ ಪಾತ್ರಿಗಳು ಚಿತ್ರಮಂದಿರದಲ್ಲಿ ನನ್ನೊಡನೆ ಇದ್ದರು.ಕಾಂತಾರ ಕಲಾವಿದರೊಂದಿಗೆ ಸಿನಿಮಾ ವೀಕ್ಷಿಸಿದ್ದೊಂದು ಅಪೂರ್ವ ಅನುಭವ’ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಟ್ವೀಟ್ ಮಾಡಿದ್ದಾರೆ.
ಚಿತ್ರದಲ್ಲಿಫಾರೆಸ್ಟ್ ಗಾರ್ಡ್ ಪಾತ್ರದಲ್ಲಿ ಗಮನ ಸೆಳೆದ ನಟ ರಘು ಪಾಂಡೇಶ್ವರ ಅವರೂ ಆಗಮಿಸಿದ್ದರು. ಅವರನ್ನು ಅಭಿನಂದಿಸಲಾಯಿತು.
ಇಂದು ಕಾಂತಾರ ಸಿನಿಮಾ ವೀಕ್ಷಿಸಲು ಕುಂದಾಪುರದ ಭಾರತ್ ಚಿತ್ರಮಂದಿರಕ್ಕೆ ತೆರಳಿದಾಗ ಪ್ರೀತಿಯಿಂದ ಸ್ವಾಗತಿಸಿದ ದೈವ ನರ್ತಕರು ಮತ್ತು ದರ್ಶನ ಪಾತ್ರಿಗಳು. ನಿಮ್ಮ ಪ್ರೀತಿಗೆ ನಾನು ಸದಾ ಋಣಿಯಾಗಿದ್ದೇನೆ. pic.twitter.com/37RML5BsZk
— Kota Shrinivas Poojari (@KotasBJP) October 26, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
D.K,Udupi ಸಿಎನ್ಜಿ ಇಂಧನ ಕೊರತೆ: ಬಂಕ್ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು
Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ
Kundapura ಕಾರು ಡಿವೈಡರ್ ಏರಿ ಪಲ್ಟಿ; ಮೂವರಿಗೆ ಗಾಯ
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು