Adipurush ಸಿನಿಮಾ: 5 ಸಂಭಾಷಣೆ ಬದಲು
Team Udayavani, Jun 19, 2023, 8:00 AM IST
ಮುಂಬೈ: “ಆದಿಪುರುಷ್’ ಸಿನಿಮಾದಲ್ಲಿ ಹನುಮಂತ ಪಾತ್ರಧಾರಿಯ ಸಂಭಾಷಣೆಗೆ ಸಂಬಂಧಿಸಿ ಸಾರ್ವಜನಿಕರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಸಂಭಾಷಣೆಗಳನ್ನು ಬದಲಾಯಿಸಲು ಚಿತ್ರತಂಡ ನಿರ್ಧರಿಸಿದೆ.
ಇದು ಮೂಲ ರಾಮಾಯಣ ಮತ್ತು ಜನರ ಭಾವನೆಗಳಿಗೆ ಧಕ್ಕೆ ತರಲಿದೆ ಎಂಬುದನ್ನು ಅರಿತ ಚಿತ್ರತಂಡ, ಸಿನಿಮಾದಲ್ಲಿ ಹನುಮಾನ್ ಪಾತ್ರಧಾರಿಯ ಐದು ಸಂಭಾಷಣೆಗಳನ್ನು ಬದಲಿಸಲಿದೆ.
“ನಮ್ಮ ಗುರಿಯು ಸನಾತನ ಪರಂಪರೆಯ ನಿಜವಾದ ಹೀರೋಗಳನ್ನು ಯುವಜನರಿಗೆ ಪರಿಚಯಿಸುವುದಾಗಿದೆ. ಕೆಲ ಸಂಭಾಷಣೆಗಳು ಜನರಿಗೆ ಇಷ್ಟವಾಗದಿದ್ದರೆ, ಅದನ್ನು ಬದಲಿಸುವುದು ನಮ್ಮ ಕರ್ತವ್ಯ,’ ಎಂದು ಚಿತ್ರದ ಸಂಭಾಷಣೆಕಾರ ಮನೋಜ್ ಮುನ್ತಾಶಿರ್ ಹೇಳಿದ್ದಾರೆ.
ಚಿತ್ರದಲ್ಲಿ ಲಂಕಾ ದಹನದ ವೇಳೆ ಹನುಮಂತನಾಡುವ, “ಎಣ್ಣೆ ನಿಮ್ಮ ಅಪ್ಪನದು. ಅಗ್ನಿ ನಿಮ್ಮ ಅಪ್ಪನದು. ಹೀಗಾಗಿ ಸುಡುವುದು ಕೂಡ ನಿಮ್ಮ ಅಪ್ಪನದ್ದೇ’ ಎಂಬ ಮಾತಿಗೂ ಕತ್ತರಿ ಬೀಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ