Ajith Kumar: “ಅಜಿತ್ ನನಗೆ ಮೋಸ ಮಾಡಿದ್ದಾರೆ..” ಥಲಾ ವಿರುದ್ಧ ಗುಡುಗಿದ ನಿರ್ಮಾಪಕ
Team Udayavani, Jul 11, 2023, 10:10 AM IST
ಚೆನ್ನೈ: ಕಾಲಿವುಡ್ ಸೂಪರ್ ಸ್ಟಾರ್ ಅಜಿತ್ ಕುಮಾರ್ ಅವರಿಗೆ ದೊಡ್ಡ ಅಭಿಮಾನಿಗಳ ವರ್ಗವೇ ಇದೆ. ಸದ್ಯ ಅಭಿಮಾನಿಗಳು ಅವರ ಮುಂದಿನ ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ.
ಈ ನಡುವೆ ನಿರ್ಮಾಪಕರೊಬ್ಬರು ಅಜಿತ್ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ. ಕಮಲ್ ಹಾಸನ್ ಅವರ ʼವೆಟ್ಟೈಯಾಡು ವಿಲಾಯಡುʼ ಮತ್ತುʼ ಇಂದ್ರಲೋಹತ್ತಿಲ್ ನಾ ಅಳಗಪ್ಪನ್ʼ ಚಿತ್ರಗಳನ್ನು ನಿರ್ಮಿಸಿರುವ ಮಾಣಿಕ್ಕಂ ನಾರಾಯಣನ್ ಅವರು ನಟ ಅಜಿತ್ ಅವರ ವಿರುದ್ಧ ಹಣಕಾಸಿನ ವಿಚಾರವಾಗಿ ಕೆಲ ಆರೋಪಗಳನ್ನು ಮಾಡಿದ್ದಾರೆ.
“ಈ ಹಿಂದೆ ಅಜಿತ್ ಅವರು ನನ್ನ ಬಳಿ ಅವರ ತಂದೆ – ತಾಯಿಯನ್ನು ಮಲೇಷ್ಯಾಕ್ಕೆ ಕಳುಹಿಸಬೇಕೆಂದು ಹಣವನ್ನು ಪಡೆದುಕೊಂಡಿದ್ದರು. ಆ ವೇಳೆ ಅವರು ನನಗಾಗಿ ಸಿನಿಮಾ ಮಾಡುತ್ತೇನೆ. ಅಲ್ಲಿ ನಾವು ಸಂಭಾವನೆಯಲ್ಲಿ ಈ ಹಣವನ್ನು ಅಡೆಸ್ಟ್ ಮಾಡಿಕೊಳ್ಳುವ ಎಂದಿದ್ದರು. ಆದರೆ ಇಲ್ಲಿಯವರೆಗೆ ಅವರು ಹಣವನ್ನು ಹಿಂದಿರುಗಿಸಲಿಲ್ಲ ಹಾಗೂ ನನಗಾಗಿ ಚಿತ್ರವನ್ನೂ ಮಾಡಲಿಲ್ಲ. ಇಷ್ಟು ವರ್ಷಗಳಲ್ಲಿ ಅವನು ಇದರ ಬಗ್ಗೆ ಮಾತನಾಡಲಿಲ್ಲ, ಅವರು ತನ್ನನ್ನು ತಾನು ಸಂಭಾವಿತ ಎಂದು ಕರೆಯುತ್ತಾರೆ, ಆದರೆ ಅವರಲ್ಲ” ಎಂದು ನಟನ ವಿರುದ್ಧ ಮಾಧ್ಯಮಗಳ ಮುಂದೆಯೇ ಕಿಡಿಕಾಡಿದ್ದಾರೆ.
“ಅಜಿತ್ ಅವರ ಪತ್ನಿ ಶಾಲಿನಿ ಅವರು ನನಗೆ ಹಲವು ವರ್ಷಗಳ ಹಿಂದೆ ಉತ್ತಮ ಸ್ನೇಹಿತೆ ಆಗಿದ್ದರು. ಅವರು ಒಳ್ಳೆಯ ವ್ಯಕ್ತಿಯೂ ಹೌದು. ಅವರದು ಉತ್ತಮ ಕುಟುಂಬ. ಇಂದು ಅಜಿತ್ ಒಂದು ಸಿನಿಮಾಕ್ಕೆ 50 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಇಂಥವರು ಜನರಿಗೆ ಮೋಸ ಮಾಡುವ ಅವಶ್ಯಕತೆ ಏನಿದೆ? ಎಎಮ್ ರತ್ನಂ ಅವರಂತಹ ಕೆಲವು ನಿರ್ಮಾಪಕರು ಅಜಿತ್ ಚಿತ್ರಗಳನ್ನು ನಿರ್ಮಿಸುವ ಮೂಲಕ ಬಹಳಷ್ಟು ಹಣವನ್ನು ಕಳೆದುಕೊಂಡಿದ್ದಾರೆ. ಆದರೆ ಅಜಿತ್ ಎಂದಿಗೂ ಅವರ ಪರವಾಗಿ ನಿಂತಿಲ್ಲ” ಎಂದು ನಿರ್ಮಾಪಕರು ಹೇಳಿದರು.
ಮಾಣಿಕ್ಕಂ ನಾರಾಯಣನ್ ಅಜಿತ್ ಅವರ ಮೇಲೆ ಆರೋಪಗಳನ್ನು ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಇದೇ ವಿಚಾರವಾಗಿ ಅವರು ಆರೋಪಗಳನ್ನು ಮಾಡಿದ್ದಾರೆ. ಆದರೆ ಇದುವರೆಗೆ ನಟನಿಂದ ಯಾವ ಹೇಳಿಕೆಯೂ ಬಂದಿಲ್ಲ.
ನಟ ಅಜಿತ್ ಸದ್ಯ ಮಾಗಿಜ್ ತಿರುಮೇನಿಯ ಅವರ ʼವಿದಾ ಮುಯಾರ್ಚಿʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಪ್ರಿ ಪ್ರೊಡಕ್ಷನ್ ವರ್ಕ್ ಚಾಲ್ತಿಯಲ್ಲಿದ್ದು,ಪಾತ್ರ ವರ್ಗದ ಬಗ್ಗೆ ಶೀಘ್ರದಲ್ಲಿ ಮಾಹಿತಿ ಹೊರ ಬೀಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
MUST WATCH
ಹೊಸ ಸೇರ್ಪಡೆ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ