13 ವರ್ಷದ ಬಳಿಕ ಮತ್ತೆ ರೀ-ರಿಲೀಸ್‌ ಆಗುತ್ತಿದೆ “ಅವತಾರ್”‌ : ಹೊಸ ಟ್ರೇಲರ್‌ ಔಟ್

ಚಿತ್ರ ಥಿಯೇಟರ್‌ ರಿಲೀಸ್‌ ಆಗುತ್ತಿರುವುದಿಂದ ಕೆಲ ಓಟಿಟಿಯಲ್ಲಿ ಅವತಾರ್‌ ಚಿತ್ರದ ಸ್ಟ್ರೀಮಿಂಗ್ ನಿಲ್ಲಿಸಲಾಗಿದೆ

Team Udayavani, Aug 24, 2022, 3:33 PM IST

13 ವರ್ಷದ ಬಳಿಕ ಮತ್ತೆ ರೀ-ರಿಲೀಸ್‌ ಆಗುತ್ತಿದೆ “ಅವತಾರ್”‌ : ಹೊಸ ಟ್ರೇಲರ್‌ ಔಟ್

ಹೊಸದಿಲ್ಲಿ: 2009 ರಲ್ಲಿ ಹಾಲಿವುಡ್‌  ನಲ್ಲಿ ಸಂಚಲನ ಸೃಷ್ಟಿಸಿದ್ದ ಸೈನ್ಸ್‌ -ಫಿಕ್ಷನ್ ‘ಅವತಾರ್‌ʼ ಚಿತ್ರ ಮತ್ತೊಮ್ಮೆ ಥಿಯೇಟರ್‌ ನಲ್ಲಿ ಮರು ಬಿಡುಗಡೆಯಾಗಲು ಸಿದ್ಧತೆ ನಡೆಸಿದೆ.

ಅದ್ಧೂರಿ ತಂತ್ರಜ್ಞಾನ, ಎಡಿಟಿಂಗ್‌,‌ ಗ್ರಾಫಿಕ್ಸ್  ಛಾಯಗ್ರಹಣ,‌ ಸೌಂಡ್‌ ಎಫೆಕ್ಟ್‌ ಹೀಗೆ ಎಲ್ಲಾ ವಿಭಾಗದಲ್ಲೂ ಸಿನಿ ರಸಿಕರನ್ನು ಮೋಡಿ ಮಾಡಿ, ಥಿಯೇಟರ್‌ ನಲ್ಲಿ ಕೂರಿಸಿ, ಬೇರೆ ಲೋಕಕ್ಕೆ ಪಯಣ ಬೆಳೆಸಿದ್ದ ಜೇಮ್ಸ್‌ ಕ್ಯಾಮೆರಾನ್ ಅವರ ʼಅವತಾರ್‌ʼ ಚಿತ್ರ ಹಾಲಿವುಡ್‌ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಮ್ಯಾಜಿಕ್‌ ಮಾಡಿತ್ತು. ಚಿತ್ರ ಬಿಡುಗಡೆಯಾಗಿ 13 ವರ್ಷಗಳು ಕಳೆದಿವೆ. ಚಿತ್ರದ ಮುಂದಿನ ಭಾಗವೂ ಬಿಡುಗಡೆಗೆ ಸಿದ್ದವಾಗಿದೆ. ಆದರೆ ಮತ್ತೊಮ್ಮೆ ʼಅವತಾರ್‌ʼ  ಕಾಡಿನ ಲೋಕದ ಸಫಾರಿ ಮಾಡಿಸಲು ಥಿಯೇಟರ್‌ ಗೆ ಲಗ್ಗೆಯಿಡಲಿದೆ.

ಹಾಲಿವುಡ್‌ ಸ್ಟಾರ್‌ ಗಳಾದ ಸ್ಯಾಮ್ ವರ್ಥಿಂಗ್ಟನ್, ಜೊಯ್ ಸಲ್ಡಾನಾ, ಸ್ಟೀಫನ್ ಲ್ಯಾಂಗ್, ಜಿಯೋವಾನಿ ರಿಬಿಸಿ ಮುಂತಾದವರು ನಟಿಸಿದ್ದ ಅವತಾರ್‌ ಚಿತ್ರ 3 ಆಸ್ಕರ್‌ ಪ್ರಶಸ್ತಿಯೊಂದಿಗೆ ಹತ್ತು ಹಲವಾರು ವಿಭಾಗದಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಎರಡನೇ ಭಾಗದ ಮೊದಲು ನಿರ್ದೇಶಕ ಜೇಮ್ಸ್‌ ಕ್ಯಾಮೆರಾನ್‌ ಅವತಾರ್‌ ಮೊದಲ ಭಾಗವನ್ನು ಮತ್ತೊಮ್ಮೆ ಥಿಯೇಟರ್‌ ನಲ್ಲಿ ಮರು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.  4K ಮಾದರಿಯ ತಂತ್ರಜ್ಞಾನ ಹಾಗೂ ಗ್ರಾಫಿಕ್ಸ್‌ ಅಳವಡಿಸಿ ಚಿತ್ರ ಸೆಪ್ಟೆಂಬರ್‌ 23  ರಂದು ರೀ- ರಿಲೀಸ್‌ ಆಗಲಿದೆ. ಮತ್ತೊಮ್ಮೆ ಚಿತ್ರ ಥಿಯೇಟರ್‌ ರಿಲೀಸ್‌ ಆಗುತ್ತಿರುವುದಿಂದ ಕೆಲ ಓಟಿಟಿಯಲ್ಲಿ ಅವತಾರ್‌ ಚಿತ್ರದ ಸ್ಟ್ರೀಮಿಂಗ್ ನಿಲ್ಲಿಸಲಾಗಿದೆ. ಅಂದ ಹಾಗೆ ಚಿತ್ರ ರೀ- ರಿಲೀಸ್‌ ಆಗಿ ಎರಡು ವಾರ ಮಾತ್ರ ಥಿಯೇಟರ್‌ ನಲ್ಲಿರುತ್ತದೆ. ಚಿತ್ರದ ಹೊಸ ಟ್ರೇಲರ್‌ ಕೂಡ ರಿಲೀಸ್‌ ಮಾಡಲಾಗಿದೆ.

ಈ ಹಿಂದೆ ನಿರ್ದೇಶಕ ಜೇಮ್ಸ್‌ ಕ್ಯಾಮೆರಾನ್‌ ಅವತಾರ್‌ ಚಿತ್ರ ಒಟ್ಟು 5 ಭಾಗಗಳಾಗಿ ಬರಲಿದೆ ಎಂದು ಹೇಳಿದ್ದರು. ಅದರಂತೆ ಚಿತ್ರದ 2ನೇ ಭಾಗಕ್ಕೆ “ಅವತಾರ್ ​: ದಿ ವೇ ಆಫ್​ ವಾಟರ್​” ಎಂದು ಟೈಟಲ್‌ ಇಡಲಾಗಿದ್ದು, ಇದೇ ವರ್ಷ ಡಿಸೆಂಬರ್‌ 16 ರಂದು ಚಿತ್ರ ರಿಲೀಸ್‌ ಆಗಲಿದೆ ಎಂದು ಚಿತ್ರ ತಂಡ ಘೋಷಿಸಿದೆ.

 

 

ಟಾಪ್ ನ್ಯೂಸ್

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.