ಬಾಹುಬಲಿಗಾಗಿ 18 ಕೋಟಿ brand endorsement ಕೈಬಿಟ್ಟ ಪ್ರಭಾಸ್‌ !


Team Udayavani, May 13, 2017, 4:47 PM IST

Prabhas-700.jpg

ಹೊಸದಿಲ್ಲಿ : ಎಸ್‌ ಎಸ್‌ ರಾಜಮೌಳಿ ಅವರ ಬಾಹುಬಲಿ 2 : ದಿ ಕನ್‌ಕ್ಲೂಶನ್‌ ಚಿತ್ರ ಜಾಗತಿಕ ಬಾಕ್ಸ್‌ ಆಫೀಸ್‌ ಚಿಂದಿ ಉಡಾಯಿಸುತ್ತಿದೆ; ಬಿಡುಗಡೆಗೊಂಡ ಹತ್ತೇ ದಿನಗಳ ಒಳಗೆ 1,000 ಕೋಟಿ ರೂ. ಗಳಿಸಿ ಇನ್ನಷ್ಟು ಹೊಸ ದಾಖಲೆಗಳನ್ನು ಮಾಡುವತ್ತ ಮುನ್ನುಗ್ಗುತ್ತಿರುವ ಭಾರತಿಯ ಚಿತ್ರರಂಗದ ಮಹೋನ್ನತ ಚಿತ್ರರತ್ನವೆಂಬ ಹೆಗ್ಗಳಿಕೆಗೆ ಬಾಹುಬಲಿ ಪಾತ್ರವಾಗಿರುವುದು ಈಗ ಎಲ್ಲರಿಗೂ ತಿಳಿದಿರುವ ಸಂಗತಿ.

ಬಾಹುಬಲಿ ಚಿತ್ರದ ತೆರೆಯ ಹಿಂದಿನ ಸೂಪರ್‌ ಹೀರೊ ರಾಜಮೌಳಿ ಮತ್ತು ತೆರೆಯ ಮೇಲಿನ ಸೂಪರ್‌ ಹೀರೋ ಪ್ರಭಾಸ್‌ ಎನ್ನುವುದು ಈಗ ಜಗಜ್ಜಾಹೀರಾಗಿದೆ. ಚಿತ್ರದಲ್ಲಿ ಪ್ರಭಾಸ್‌ ನೀಡಿರುವ ಅಭಿನಯ ಅಪ್ರತಿಮವಾದದ್ದು. ಎಲ್ಲ ಭಾಷೆಗಳ ಚಿತ್ರಪ್ರೇಮಿಗಳು ಬಾಹುಬಲಿಯನ್ನು ಮೆಚ್ಚಿಕೊಂಡಷ್ಟೇ ನಟ ಪ್ರಭಾಸ್‌ ಅವರನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ; ಅವರ ನಟನಾ ವೈಖರಿಯನ್ನು ಕಂಡು ಮಂತ್ರಮುಗ್ಧರಾಗಿದ್ದಾರೆ. 

ರಾಜಮೌಳಿ ಅವರ ಪ್ರಕಾರ ಪ್ರಭಾಸ್‌ ಒಬ್ಬ ಅಪ್ರತಿಮ, ದಢ ಸಂಕಲ್ಪದ, ನಿಗರ್ವಿ ಕಲಾವಿದ. ಬಾಹುಬಲಿ ಚಿತ್ರಕ್ಕಾಗಿ ತಮ್ಮ ತಾರಾ ಬದುಕಿನ ಐದು ಅತ್ಯಮೂಲ್ಯ ವರ್ಷಗಳನ್ನು ಸಂಪೂರ್ಣವಾಗಿ ಧಾರೆ ಎರೆದಿದ್ದಾರೆ.

ಈ ಐದು ವರ್ಷಗಳಲ್ಲಿ ಪ್ರಭಾಸ್‌ ತಮ್ಮ ಪಾಲಿಗೆ ಬಂದ ಯಾವುದೇ ಇತರ ಅವಕಾಶಗಳನ್ನು ಸ್ವೀಕರಿಸಿಲ್ಲ; ಮಾತ್ರವಲ್ಲದೆ ಸುಮಾರು 18 ಕೋಟಿ ರೂ.ಗಳ ಕಮರ್ಶಿಯಲ್‌ ಎಂಡೋರ್‌ಸ್‌ಮೆಂಟ್‌ ಅವಕಾಶಗಳನ್ನು ಕೂಡ ಬಿಟ್ಟು ಕೊಟ್ಟಿದ್ದಾರೆ. ಯಾವ ಕಾರಣಕ್ಕೂ ತನ್ನ ಮನಸ್ಸು ಬೇರೆಡೆಗೆ ಹರಿಯದೇ ಸಂಪೂರ್ಣವಾಗಿ ಬಾಹುಬಲಿ ನಿರ್ಮಾಣಕ್ಕೆ ಮುಡಿಪಾಗಿರಬೇಕು, ಅದರಲ್ಲೇ ಮನಸ್ಸು ಸಂಪೂರ್ಣವಾಗಿ ಕೇಂದ್ರೀಕೃತವಾಗಿರಬೇಕು ಎಂಬುದು ಪ್ರಭಾಸ್‌ ಸಂಕಲ್ಪವಾಗಿತ್ತು. 

ಎಷ್ಟೋ ವೇಳೆ ಪ್ರಭಾಸ್‌ ಕೈಯಲ್ಲಿ ಖರ್ಚಿಗೆ ದುಡ್ಡು ಕೂಡ ಇರುತ್ತಿರಲಿಲ್ಲ. ಆದರೂ ಅವರು ತಮ್ಮ ಆ ಸ್ಥಿತಿಯನ್ನು ಯಾರಲ್ಲೂ ಹೇಳಿಕೊಳಲಿಲ್ಲ. ಮೇಲಾಗಿ ತಮ್ಮ ಮ್ಯಾನೇಜರ್‌ಗೆ ಪ್ರಭಾಸ್‌, ಬಾಹುಬಲಿ ಮುಗಿಯುವ ತನಕ ಬೇರೆ ಯಾವುದೇ ಅಸೈನ್‌ಮೆಂಟ್‌, ಎಂಡೋರ್‌ಸ್‌ಮೆಂಟ್‌ಗಳನ್ನು ತೆಗೆದುಕೊಳ್ಳಕೂಡದು ಎಂದು ಪದೇ ಪದೇ ಹೇಳುತ್ತಿದ್ದರು.

ಬಾಹುಬಲಿ ತಂಡದ ಬಹುತೇಕ ಕಲಾವಿದರು ಹೆಚ್ಚುವರಿ ಹಣ ಸಂಪಾದಿಸುವ ಬೇರೆ ಬೇರೆ ಅಸೈನ್‌ಮೆಂಟ್‌ಗಳನ್ನು ಆಫ‌ರ್‌ಗಳನ್ನು ಪಡೆಯುತ್ತಿದ್ದರು; ಆದರೆ ಪ್ರಭಾಸ್‌ ತನ್ನ ಕಾಲಬುಡಕ್ಕೆ ಹರಿದುಬಂದ ಅಂತಹ ಯಾವುದೇ ಅವಕಾಶಗಳನ್ನು ಸ್ವೀಕರಿಸಲಿಲ್ಲ; ಪ್ರಭಾಸ್‌ ಅವರಂತಹ ಕಟಿಬದ್ಧ ಕಲಾವಿದರು ಅತ್ಯರೂಪ !

ಇಂದು ಬಾಹುಬಲಿ ಅಸಾಧಾರಣ ಯಶಸ್ಸಿನ ಫ‌ಲವಾಗಿ ಪ್ರಭಾಸ್‌ಗೆ ಹಲವಾರು ಬಾಲಿವುಡ್‌ ಅವಕಾಶಗಳು ಹರಿದು ಬರುತ್ತಿವೆ. ಪ್ರಭಾಸ್‌ ಸದ್ಯದಲ್ಲೇ ಬಾಲಿವುಡ್‌ ಸೂಪರ್‌ ಹೀರೋ ಆಗಬಹುದು ಎನ್ನುತ್ತಾರೆ ರಾಜಮೌಳಿ.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.