Negative review ನೀಡಿದ 7 ವ್ಲಾಗರ್ಗಳ ವಿರುದ್ಧ ದೂರು ದಾಖಲಿಸಿದ ʼಬಾಂದ್ರಾʼ ಚಿತ್ರತಂಡ
Team Udayavani, Nov 16, 2023, 12:49 PM IST
ಕೊಚ್ಚಿ: ಇತ್ತೀಚೆಗೆ ಮಾಲಿವುಡ್ ಸಿನಿಮಾವೊಂದಕ್ಕೆ ನೆಗೆಟಿಬ್ ರಿವ್ಯೂ ನೀಡಿದ ಕಾರಣಕ್ಕೆ ಯೂಟ್ಯೂಬರ್ಸ್ ಹಾಗೂ ವ್ಲಾಗರ್ ಗಳ ವಿರುದ್ಧ ಚಿತ್ರತಂಡವೊಂದು ದೂರು ದಾಖಲಿಸಿತ್ತು. ಇದೀಗ ಮತ್ತೊಂದು ಚಿತ್ರತಂಡ ಇಂಥದ್ಧೇ ಪ್ರಕರಣವನ್ನು ದಾಖಲಿಸಿದೆ.
ನಟ ದಿಲೀಪ್ ಹಾಗೂ ತಮನ್ನಾ ಅಭಿನಯದ ʼಬಾಂದ್ರಾʼ ಇತ್ತೀಚೆಗೆ ರಿಲೀಸ್ ಆಗಿದೆ. ಈ ಸಿನಿಮಾ ಮಾಲಿವುಡ್ ನ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದಾಗಿದೆ. ಅರುಣ್ ಗೋಪಿ ನಿರ್ದೇಶನದ ಈ ಸಿನಿಮಾ ನಿರೀಕ್ಷೆಗೆ ತಕ್ಕ ಪ್ರತಿಕ್ರಿಯೆ ಪಡೆಯುವಲ್ಲಿ ವಿಫಲವಾಗಿದೆ. ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸಿನಿಮಾ ತಾಂತ್ರಿಕವಾಗಿ ಸಿನಿಮಾ ಸದ್ದು ಮಾಡಿದ್ದು, ಸ್ಕ್ರಿಪ್ಟ್ ವಿಚಾರವಾಗಿ ನೆಗೆಟಿವ್ ಅಭಿಪ್ರಾಯವನ್ನು ಪಡೆದುಕೊಂಡಿದೆ.
ಸಿನಿಮಾದ ನಿರ್ಮಾಣ ಸಂಸ್ಥೆಯಾಗಿರುವ ಅಜಿತ್ ವಿನಾಯಕ ಫಿಲಂಸ್ ಸಿನಿಮಾದ ಬಗ್ಗೆ ನೆಗೆಟಿವ್ ರಿವ್ಯೂ ನೀಡಿದ್ದಕ್ಕಾಗಿ 7 ಯೂಟ್ಯೂಬ್ ವ್ಲಾಗರ್ಗಳ ವಿರುದ್ಧ ತಿರುವನಂತಪುರಂ ಜುಡಿಷಿಯಲ್ ಫಸ್ಟ್ ಕ್ಲಾಸ್ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ದೂರು ದಾಖಲಿಸಿದ್ದಾರೆ.
ಸಿನಿಮಾ ರಿಲೀಸ್ ಆದ ಮೂರು ದಿನಗಳಲ್ಲಿ ಯೂಟ್ಯೂಬ್ ವ್ಲಾಗರ್ಸ್ ಗಳಾದ ಅಶ್ವಂತ್ ಕೋಕ್, ಉನ್ನಿ ವ್ಲಾಗ್ಸ್, ಶಿಹಾಬ್, ಶಾಜ್ ಮೊಹಮ್ಮದ್, ಅರ್ಜುನ್, ಶಿಜಾಜ್ ಟಾಕ್ಸ್, ಮತ್ತು ಸಾಯಿ ಕೃಷ್ಣ ಸಿನಿಮಾದ ಬಗ್ಗೆ ನೆಗೆಟಿವ್ ರಿವ್ಯೂ ನೀಡಿದ್ದಾರೆ. ಇದರಿಂದ ನಮ್ಮ ಚಿತ್ರಕ್ಕೆ ಕೋಟಿ ರೂಪಾಯಿಗಳ ನಷ್ಟ ಆಗಿದೆ ಎಂದು ನಿರ್ಮಾಣ ಸಂಸ್ಥೆ ದೂರಿನಲ್ಲಿ ಹೇಳಿದೆ.
ವ್ಲಾಗರ್ಗಳ ಕ್ರಮಕೈಗೊಳ್ಳುವಂತೆ ತಿರುವನಂತಪುರಂ ಪೊಲೀಸ್ ಕಮಿಷನರ್ಗೆ ಸೂಚನೆ ನೀಡಬೇಕು ಎಂದು ನಿರ್ಮಾಣ ಸಂಸ್ಥೆ ಒತ್ತಾಯಿಸಿದೆ ಎಂದು ಕೇರಳ ಕೌಮುದಿ ವರದಿ ಮಾಡಿದೆ.
ʼಬಾಂದ್ರಾʼ ದಲ್ಲಿ ದಿಲೀಪ್, ತಮನ್ನಾ ಲೀನಾ, ಮಮತಾ ಮೋಹನ್ದಾಸ್, ಡಿನೋ ಮೋರಿಯಾ, ಕಲಾಭವನ್ ಶಾಜೋನ್ ಮುಂತಾದವರು ನಟಿಸಿದ್ದಾರೆ. ನ.10 ರಂದು ಸಿನಿಮಾ ರಿಲೀಸ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ