B’town: ಪಾತ್ರಕ್ಕಾಗಿ ಬೆತ್ತಲೆ ಆಗುವುದು.. ನಗ್ನತೆ ಪ್ರಶ್ನೆಗೆ ನೇರವಾಗಿ ಉತ್ತರಿಸಿದ ನಟಿ
Team Udayavani, Jul 11, 2023, 1:16 PM IST
ಮುಂಬಯಿ: ʼರಾಕ್ ಸ್ಟಾರ್ʼ ಮೂಲಕ ಬಿಟೌನ್ ಗೆ ಬಂದ ನರ್ಗೀಸ್ ಫಕ್ರಿ ಸದ್ಯ ಓಟಿಟಿ ಎಂಟ್ರಿಗೆ ಸಿದ್ದರಾಗಿದ್ದಾರೆ. ಅವರು ಅಭಿನಯಿಸಿರುವ ʼ ತತ್ಲುಬಾಜ್ʼ ಓಟಿಟಿಯಲ್ಲಿ ಸ್ಟೀಮ್ ಆಗಲಿದ್ದು, ಇದರ ಪ್ರಚಾರದಲ್ಲಿ ನಟಿ ಬ್ಯುಸಿಯಾಗಿದ್ದಾರೆ.
ಇತ್ತೀಚೆಗೆ ಅವರು ನೀಡಿದ ಸಂದರ್ಶನದಲ್ಲಿ ಸಿನಿಮಾರಂಗದಲ್ಲಿ ಪ್ರಾಜೆಕ್ಟ್ ಗಾಗಿ ನಗ್ನತೆಯ ಪಾತ್ರವನ್ನು ಮಾಡುವುದರ ಕುರಿತು ತನ್ನ ಅಭಿಪ್ರಾಯವನ್ನು ತಿಳಿಸಿದ್ದಾರೆ.
ʼತತ್ಲುಬಾಜ್ʼ ಪ್ರಚಾರದ ಅಂಗವಾಗಿ ನರ್ಗೀಸ್ ಫಕ್ರಿ ʼಹಿಂದೂಸ್ತಾನ್ ಟೈಮ್ಸ್ʼ ಗೆ ಸಂದರ್ಶನವನ್ನು ನೀಡಿದ್ದಾರೆ. ಈ ವೇಳೆ ಸಂದರ್ಶನದಲ್ಲಿ ಒಂದು ಪ್ರಶ್ನೆಯನ್ನು ಕೇಳಲಾಗಿದೆ. ಸಿನಿಮಾದಲ್ಲಿ ಪಾತ್ರಕ್ಕಾಗಿ ಬೆತ್ತಲಾಗುವ ಸನ್ನಿವೇಶಗಳಿದ್ದರೆ ತಾವು ಏನು ಮಾಡುತ್ತೀರಿ? ಎಂದು ಕೇಳಲಾಗಿದೆ.
ಈ ಪ್ರಶ್ನೆಗೆ ನರ್ಗೀಸ್ ಫಕ್ರಿ ತನ್ನದೇ ಆದ ಅಭಿಪ್ರಾಯವನ್ನು ಹೇಳಿದ್ದಾರೆ. “ಒಂದು ಪ್ರಾಜೆಕ್ಟ್ ಗಾಗಿ ನಾನು ಯಾವತ್ತೂ ಬೆತ್ತಲಾಗುವುದಿಲ್ಲ. ನನಗೆ ನಗ್ನತೆಯಿಂದ ಸಮಸ್ಯೆಯಿದೆ” ಎಂದು ಒಂದೇ ಮಾತಿನಲ್ಲಿ ನಟಿ ಹೇಳಿದ್ದಾರೆ.
“ಪ್ರಾಜೆಕ್ಟ್ ನಲ್ಲಿ ಸಲಿಂಗಕಾಮಿ ಅಥವಾ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗುವ ಸನ್ನಿವೇಶಗಳಿದ್ದರೆ ನನ್ನಗೇನು ತೊಂದರೆಯಿಲ್ಲ. ಅಂಥ ಪಾತ್ರಗಳನ್ನು ಮಾಡುವುದು ನನ್ನ ಕೆಲಸದ ಒಂದು ಭಾಗವಷ್ಟೇ. ನಾನು ನಟನೆ ಮಾಡುತ್ತಿದ್ದೇನೆ ಹಾಗಾಗಿ ಅದು ಯಾವ ಸಮಸ್ಯೆಯೂ ಆಗುವುದಿಲ್ಲ” ಎಂದು ನಟಿ ಹೇಳಿದ್ದಾರೆ.
ಇದನ್ನೂ ಓದಿ: Aishwarya Rajinikanth: 2ನೇ ಮದುವೆಗೆ ರೆಡಿಯಾದ್ರಾ ರಜಿನಿ ಪುತ್ರಿ? ಆಪ್ತರಿಂದ ಸ್ಪಷ್ಟನೆ
ಓಟಿಟಿಯಲ್ಲಿನ ಬೋಲ್ಡ್ ಕಂಟೆಂಟ್ ಬಗ್ಗೆ ಮಾತನಾಡಿದ ಅವರು “ ಪ್ರೇಕ್ಷಕರು ಏನು ನೋಡಬೇಕು ಅಥವಾ ನೋಡಬಾರದೆನ್ನುವುದು ಅವರ ವೈಯಕ್ತಿಕ ಸ್ವತಂತ್ರಕ್ಕೆ ಬಿಟ್ಟ ವಿಚಾರ. ಅವರು ನೋಡುವುದಾದರೆ ನೋಡಲಿ ಇಲ್ಲದಿದ್ದರೆ ಅದನ್ನು ಬಿಡಲಿ. ವಿವಿಧ ವಿಧದ ಕಂಟೆಂಟ್ ಗಳು ಸಿಗುವುದೇ ಓಟಿಟಿ ಫ್ಲಾಟ್ ಫಾರ್ಮ್ ನ ವಿಶೇಷ” ಎಂದು ನಟಿ ಹೇಳಿದ್ದಾರೆ.
ನರ್ಗಿಸ್ ಫಕ್ರಿ ಇಮ್ತಿಯಾಜ್ ಅಲಿ ಅವರ ‘ರಾಕ್ಸ್ಟಾರ್ʼಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು, ನಂತರ ‘ಮೇನ್ ತೇರಾ ಹೀರೋ’, ‘ಹೌಸ್ಫುಲ್’ ಮತ್ತು ‘ಬಾಂಜೋ’ ಮುಂತಾದ ಚಿತ್ರಗಳಲ್ಲಿ ನಟಿಸಿದರು, ಇತ್ತೀಚೆಗೆ ಅವರು ʼಶಿವ ಶಾಸ್ತ್ರಿ ಬಲ್ಬೋವಾʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !