ಬಟ್ಟೆ ಅಡ್ಜೆಸ್ಟ್ ಮಾಡಿದ್ದನ್ನು ಝೂಮ್ ಮಾಡಿ ತೋರಿಸಿದ ಪಾಪಾರಾಜಿ ಮೇಲೆ ನಟಿ ಆಯೀಷಾ ಗರಂ
Team Udayavani, Apr 4, 2024, 3:22 PM IST
ಮುಂಬಯಿ: ಬಿಗ್ ಬಾಸ್ 17 ಖ್ಯಾತಿಯ ನಟಿ ಆಯೀಷಾ ಖಾನ್ ಬಾಲಿವುಡ್ ಮಾಧ್ಯಮಗಳ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಸ್ಟೋರಿಗಳನ್ನು ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ನಲ್ಲಿ ಸೆಲೆಬ್ರಿಟಿ ಫೋಟೋಗ್ರಾಫಿಗಳಿರುತ್ತಾರೆ. ಇವರನ್ನು ಪಾಪರಾಜಿಗಳೆಂದು ಕರೆಯುತ್ತಾರೆ. ಈ ಪಾಪರಾಜಿಗಳು ಕೆಲವೊಮ್ಮೆ ಸೆಲೆಬ್ರಿಟಿಗಳಿಗೆ ತಲೆನೋವಾಗುತ್ತಾರೆ. ಆದರೆ ಸೆಲೆಬ್ರಿಟಿಗಳ ಬೇರೆ ಬೇರೆ ಭಂಗಿಗಳನ್ನು ಕ್ಲಿಕ್ಕಿಸಿ ಸೋಶಿಯಲ್ ಮೀಡಿಯಾದಲ್ಲಿ ಪಾಪಾರಾಜಿ ಅಪ್ಲೋಡ್ ಮಾಡುತ್ತಾರೆ.
ಪಾಪರಾಜಿಗಳ ಈ ವರ್ತನೆಗೆ ಅನೇಕ ಸೆಲೆಬ್ರಿಟಿಗಳು ಗರಂ ಆಗುವುದುಂಟು. ಬಿಗ್ ಬಾಸ್ ಖ್ಯಾತಿ ಆಯೀಷಾ ಖಾನ್ ಇತ್ತೀಚೆಗೆ ಪಾಪಾರಾಜಿಗಳ ಮೇಲೆ ಹರಿಹಾಯ್ದಿದ್ದಾರೆ.
ತಾವು ಬಟ್ಟೆ ಸರಿ ಮಾಡುವ ವೇಳೆ ಝೂಮ್ ಮಾಡಿ ಫೋಟೋ ಹಾಗೂ ವಿಡಿಯೋಗಳನ್ನು ಸೆರೆಹಿಡಿಯುವ ಮಾಧ್ಯಮಗಳ ವಿರುದ್ಧ ಆಯೀಷಾ ಖಾನ್ ಗರಂ ಆಗಿದ್ದಾರೆ.
“ಈ ಆ್ಯಂಗಲ್ ಯಾವುವು? ನೀವು ಎಲ್ಲಿ ಜೂಮ್ ಮಾಡುತ್ತಿದ್ದೀರಿ? ಕೆಲವು ಮಾಧ್ಯಮ ಸಂಸ್ಥೆಗಳಲ್ಲಿ ಏನು ತಪ್ಪಾಗಿದೆ? ಒಬ್ಬ ಮಹಿಳೆ ತನಗೆ ಯಾವ ಹೆದರಿಕೆ ಇಲ್ಲದೆ ಬಟ್ಟೆ ಹಾಕುವ ಹಾಗಿಲ್ವಾ. ಯಾವ ಆ್ಯಂಗಲ್ ನಿಂದ ಯಾವಾಗ ಬೇಕಾದರೂ ಫೋಟೋ ಸೆರೆಹಿಡಿಯುತ್ತಾರೆ ಅನ್ನೋದು ಗೊತ್ತಾಗಲ್ಲ. ಒಬ್ಬ ಮಹಿಳೆ ತನ್ನ ಕಾರಿನಿಂದ ಹೊರಬರುವ ಮೊದಲು ತನ್ನ ಉಡುಪನ್ನು ಸರಿ ಹೊಂದಿಸುತ್ತಿದ್ದಾಳೆ. ನೀವು ಆ ಕ್ಷಣವನ್ನು ಸೆರೆಹಿಡಿದು ಪೋಸ್ಟ್ ಮಾಡಲು ಬಯಸುತ್ತೀರಿ. ಆ ಮಹಿಳೆ ಹಿಂದುಗಡೆಯಿಂದ ಫೋಟೋ ತೆಗೆಯಬೇಡಿ ಹೇಳುತ್ತಾಳೆ ಆದರೆ ನೀವು ಸ್ವಲ್ಪ ಸ್ವಲ್ಪ ಅಂಥ ಫೋಟೋ ಸೆರೆ ಹಿಡಿಯುತ್ತೀರಿ. ನಮ್ಮ ಕೆಲವು ಮಾಧ್ಯಮ ಸಂಸ್ಥೆಗಳಿಗೆ ಮೂಲಭೂತ ನಡವಳಿಕೆಗಳು ಕಲಿಯಬೇಕಾಗಿದೆ ”ಎಂದು ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಆದರೆ ಆಯೀಷಾ ಖಾನ್ ಹೇಳಿರುವುದು ತಮ್ಮ ಬಗ್ಗೆಯೂ ಅಥವಾ ಬೇರೆ ನಟಿಯರ ಬಗ್ಗೆಯೂ ಎನ್ನುವುದನ್ನು ಉಲ್ಲೇಖಿಸಿಲ್ಲ.
ಆಯೇಷಾ ಶೀಘ್ರದಲ್ಲೇ ಮಲಯಾಳಂ ಚಿತ್ರ ʼಲಕ್ಕಿ ಬಾಸ್ಕರ್ʼನಲ್ಲಿ ನಟಿಸಲಿದ್ದಾರೆ. ಇದರಲ್ಲಿ ದುಲ್ಕರ್ ಸಲ್ಮಾನ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Housefull 5: ಕಾಮಿಡಿ ಜರ್ನಿಯ ʼಹೌಸ್ ಫುಲ್ʼ ಕುಟುಂಬಕ್ಕೆ ಅಭಿಷೇಕ್ ಬಚ್ಚನ್ ಎಂಟ್ರಿ
Kangana Ranaut: ಚಿತ್ರರಂಗದಲ್ಲಿ ಅಮಿತಾಭ್ ಗೆ ಸಮಾನವಾದ ಗೌರವ ನನಗೆ ಸಿಗುತ್ತಿದೆ; ಕಂಗನಾ
Covid vaccine ಅಡ್ಡ ಪರಿಣಾಮದಿಂದಲೇ ಹೃದಯಾಘಾತ?: ನಟ ಶ್ರೇಯಸ್ ಹೇಳಿದ್ದೇನು?
Sunidhi Chauhan: ಹಾಡುತ್ತಿರುವಾಗಲೇ ಖ್ಯಾತ ಗಾಯಕಿ ಮೇಲೆ ಬಾಟಲಿ ಎಸೆದ ಅಭಿಮಾನಿ
ಅಮಿತಾಭ್ ಟು ಶಾರುಖ್: ಇಂದು ಕೋಟಿ ಕುಳರಾದ ಈ ನಟರ ಮೊದಲ ಸಂಪಾದನೆ ಎಷ್ಟಾಗಿತ್ತು ಗೊತ್ತಾ?
MUST WATCH
ಹೊಸ ಸೇರ್ಪಡೆ
Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್ʼ
Bantwala; ಕಾರಿಗೆ ಸೈಡ್ ಕೊಟ್ಟಿಲ್ಲವೆಂದು ಕೆಎಸ್ಆರ್ ಟಿಸಿ ಬಸ್ ಚಾಲಕನಿಗೆ ತಂಡದಿಂದ ಹಲ್ಲೆ
Mangaluru; ಕೊಂಕಣಿ ಸಾಹಿತಿ ರೊನಾಲ್ಡ್ ಸಿಕ್ವೇರಾ ನಿಧನ
ಮುಗಿದ ಅಬ್ಬರ; ಎರಡು ದಿನ ಮನೆ-ಮನೆ ಸಂದಾಯ! 1992ರ ಚುನಾವಣೆ ನೆನಪಿಸಿದ ರಣತಂತ್ರ
Lok Sabha Election: ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು, ಸಿಬ್ಬಂದಿಗಳು