ಡಿಸ್ನಿ+ ಹಾಟ್ ಸ್ಟಾರ್ ನಲ್ಲಿ ಬಿಡುಗಡೆಯಾಗಲಿದೆ ಧನುಶ್ ಮುಂದಿನ ಚಿತ್ರ
Team Udayavani, Jan 16, 2022, 10:40 AM IST
ಬಾಲಿವುಡ್ ನಲ್ಲಿ ನಟಿಸಿದ ಅತ್ರಂಗಿ ರೆ ಚಿತ್ರ ಹಿಟ್ ಆದ ಸಂತಸದಲ್ಲಿರುವ ತಮಿಳು ನಟ ಧನುಶ್ ರ ಮುಂದಿನ ಚಿತ್ರ ‘ಮಾರನ್’ ಓಟಿಟಿಯಲ್ಲಿ ಬಿಡುಗಡೆಯಾಗಲಿದೆ. ಕಾರ್ತಿಕ್ ನರೆನ್ ನಿರ್ದೇಶನದ ಮಾರನ್ ಚಿತ್ರವು ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಡಿಸ್ನಿ + ಹಾಟ್ ಸ್ಟಾರ್ ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರರಂಗ ಹೇಳಿಕೊಂಡಿದೆ.
ಆರಂಭದಲ್ಲಿ ಚಿತ್ರಮಂದಿರಗಳಲ್ಲೇ ಸಿನಿಮಾ ರಿಲೀಸ್ ಮಾಡಲು ತಂಡ ಸಿದ್ದತೆ ನಡೆಸಿತ್ತು. ಆದರೆ ಕೋವಿಡ್ ಹೆಚ್ಚಳದ ಕಾರಣದಿಂದ ಇದೀಗ ಓಟಿಟಿಯತ್ತ ಮುಖಮಾಡಿದೆ. ಚಿತ್ರ ಬಿಡುಗಡೆಯ ದಿನಾಂಕ ಇನ್ನೂ ಅಂತಿಮವಾಗಿಲ್ಲ.
ಧನುಶ್ ಅಭಿನಯದ ಅತ್ರಂಗಿ ರೆ ಚಿತ್ರ ಕೂಡಾ ಕಳೆದ ಡಿಸೆಂಬರ್ ನಲ್ಲಿ ಡಿಸ್ನಿ + ಹಾಟ್ ಸ್ಟಾರ್ ನಲ್ಲಿ ಬಿಡುಗಡೆಯಾಗಿತ್ತು. ಅದಕ್ಕೂ ಮೊದಲು 2020ರಲ್ಲಿ ಅವರ ‘ಜಗಮೆ ತಂಡಿರಮ್’ ಚಿತ್ರ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಿತ್ತು.
ಇದನ್ನೂ ಓದಿ:ವಿರಾಟ್ ಕೊಹ್ಲಿ ಭಾರತದ ಅತ್ಯುತ್ತಮ ನಾಯಕ ಎನ್ನುವುದಕ್ಕೆ ಇಲ್ಲಿದೆ ದಾಖಲೆಗಳ ಸಾಕ್ಷಿ
ಮಾರನ್ ಚಿತ್ರವು ನಿರ್ದೇಶಕ ಕಾರ್ತಿಕ್ ನರೇನ್ ಮತ್ತು ನಟ ಧನುಷ್ ಅವರ ಮೊದಲ ಕಾಂಬಿನೇಶನ್ ಆಗಿದೆ. ಸತ್ಯಜ್ಯೋತಿ ಫಿಲಂಸ್ ನಿರ್ಮಿಸಿರುವ ಈ ಚಿತ್ರದ ಚಿತ್ರೀಕರಣ ಚೆನ್ನೈ ಮತ್ತು ಹೈದರಾಬಾದ್ನಲ್ಲಿ ನಡೆದಿದೆ. ತನಿಖಾ ಥ್ರಿಲ್ಲರ್ ಕಥಾನಕ ಹೊಂದಿರುವ ಮಾರನ್ ಚಿತ್ರದಲ್ಲಿ ಧನುಷ್ ಜೊತೆಗೆ ಮಾಳವಿಕಾ ಮೋಹನನ್, ಮಾಸ್ಟರ್ ಮಹೇಂದ್ರನ್, ಸಮುದ್ರಕನಿ, ಸ್ಮೃತಿ ವೆಂಕಟ್ ಮತ್ತು ಕೃಷ್ಣಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಿವಿ ಪ್ರಕಾಶ್ ಸಂಗೀತ ನಿರ್ದೇಶನವಿದೆ.
“The pen is mightier than the sword”
Presenting #MaaranMotionPoster https://t.co/FNLgpmJkPf#Maaran coming soon on @DisneyPlusHS@dhanushkraja @MalavikaM_ @gvprakash @SathyaJyothi_ @thondankani @smruthi_venkat @Actor_Mahendran @KK_actoroffl @disneyplusHSTam— Karthick Naren (@karthicknaren_M) January 14, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ