ʼಕೆಜಿಎಫ್ -2ʼ, ಯಶ್ ಬಗ್ಗೆ ನಿಂದನಾತ್ಮಕ ಮಾತು: ಟಾಲಿವುಡ್ ನಿರ್ದೇಶಕನ ವಿರುದ್ಧ ಆಕ್ರೋಶ
Team Udayavani, Mar 6, 2023, 4:26 PM IST
ಹೈದರಾಬಾದ್ : ಕನ್ನಡ ಮಾತ್ರವಲ್ಲದೆ ಭಾರತ ಚಿತ್ರರಂಗದಲ್ಲಿ ಒಂದು ಹೊಸ ದಾಖಲೆ ಬರೆದ ಪ್ರಶಾಂತ್ ನೀಲ್ ಅವರ ಪ್ಯಾನ್ ಇಂಡಿಯಾ ಸಿನಿಮಾ ʼಕೆಜಿಎಫ್ -2ʼ ಬಗ್ಗೆ ಟಾಲಿವುಡ್ ನಿರ್ದೇಶಕರೊಬ್ಬರು ನಿಂದನಾತ್ಮಕ ಮಾತುಗಳನ್ನಾಡಿ ಪೇಚಿಗೆ ಸಿಲುಕಿದ್ದಾರೆ.
ʼC/o ಕಂಚರಪಾಲೆಂʼ,ʼ ಮಾಡರ್ನ್ ಲವ್ ಹೈದರಾಬಾದ್ʼ ಸಿನಿಮಾಗಳನ್ನು ಮಾಡಿರುವ ವೆಂಕಟೇಶ್ ಮಹಾ ಇತ್ತೀಚೆಗೆ ರೌಂಡ್ ಟೇಬಲ್ ಸಂದರ್ಶನದಲ್ಲಿ ಮಾತನಾಡುವ ವೇಳೆ ʼಕೆಜಿಎಫ್-2ʼ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.
ಇಂದ್ರಗಂಟಿ ಮೋಹನ ಕೃಷ್ಣ, ನಂದಿನಿ ರೆಡ್ಡಿ, ಶಿವ ನಿರ್ವಾಣ ಮತ್ತು ವಿವೇಕ್ ಆತ್ರೇಯ ಅವರೊಂದಿಗೆ ರೌಂಡ್ ಟೇಬರ್ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ವೆಂಕಟೇಶ್ ಮಹಾ ಮಾತನಾಡುತ್ತಾ ಒಂದು ಸಿನಿಮಾದಲ್ಲಿ ನಾಯಕನ ತಾಯಿ ತನ್ನ ಮಗ ಶ್ರೀಮಂತನಾಗಬೇಕೆಂದು ಬಯಸುತ್ತಾಳೆ. ಆತ ಜನರನ್ನು ಬಳಸಿ ಶ್ರೀಮಂತನಾಗುತ್ತಾನೆ. ಆದರೆ ಆ ಬಳಿಕ ಜನರಿಗೆ ಆತ ಏನನ್ನೂ ನೀಡುವುದಿಲ್ಲ ಎಂದು ಸಿನಿಮಾದ ಹೆಸರನ್ನು ಹೇಳದೇ ಹೀಯಾಳಿಸಿದ್ದಾರೆ. ಇದು ʼಕೆಜಿಎಫ್ -2ʼ ಕಥೆಯ ಎಳೆಯಾಗಿದ್ದು, ಇದರೊಂದಿಗೆ ನಾಯಕನ ಪಾತ್ರದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಈ ಮಾತನ್ನು ಕೇಳಿ ಅಲ್ಲಿದ್ದ ಉಳಿದ ನಿರ್ದೇಶಕರು ಕೂಡ ಜೋರಾಗಿ ನಕ್ಕಿದ್ದಾರೆ.
ಇದನ್ನೂ ಓದಿ: ಶಾರುಖ್ ಜತೆ ʼಜವಾನ್ʼ ನಲ್ಲಿ ಶಿವರಾಜ್ ಕುಮಾರ್ ನಟನೆ? ಹೆಚ್ಚಾಯಿತು ಶಿವಣ್ಣನ ಬೇಡಿಕೆ
ಸದ್ಯ ಈ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಒಬ್ಬ ನಿರ್ದೇಶಕರಾಗಿ ಮತ್ತೊಬ್ಬ ನಿರ್ದೇಶಕರ ಬಗ್ಗೆ ಈ ರೀತಿ ಮಾತನಾಡುವುದು ತಪ್ಪು, ಮೊದಲು ನಟ ಯಶ್ ರಲ್ಲಿ ಕ್ಷಮೆ ಕೇಳಿ ಇಲ್ಲದಿದ್ರೆ ಪರಿಣಾಮ ಒಳ್ಳೆದಿರಲ್ಲ. ಕೇವಲ ಎರಡು ಸಿನಿಮಾ ಮಾಡಿ ದೊಡ್ಡ ಸಿನಿಮಾದ ಬಗ್ಗೆ ಈ ರೀತಿ ಟೀಕಿಸುವುದು ಸರಿಯಲ್ಲ ಎಂದು ಫ್ಯಾನ್ಸ್ ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವರು ವೆಂಕಟೇಶ್ ಅವರ ಅಭಿಪ್ರಾಯಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಇನ್ನು ಕೆಲ ಟಾಲಿವುಡ್ ಫ್ಯಾನ್ಸ್ ಗಳೇ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಂದರ್ಶನದಲ್ಲಿ ಭಾಗಿಯಾಗಿದ್ದ ನಿರ್ದೇಶಕಿ ನಂದಿನಿ ರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಇದು ಯಾರನ್ನೂ ಉದ್ದೇಶಪೂರ್ವಕವಾಗಿ ನೋವು ತರಲು ಹೇಳಿದ ಮಾತಲ್ಲ. ಈ ವಿಚಾರವನ್ನು ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.
Nenu chesta gaa pic.twitter.com/GasbikJNig
— బూమర్ (@AkhilDeepak) March 5, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?