Tollywood: ʼಅನಿಮಲ್ʼ ಎಫೆಕ್ಟ್; ʼಪುಷ್ಪ-2ʼ ಸ್ಕ್ರಿಪ್ಟ್ ನಲ್ಲಿ ಭಾರೀ ಬದಲಾವಣೆ?
Team Udayavani, Dec 12, 2023, 3:22 PM IST
ಹೈದರಾಬಾದ್: ರಣ್ಬೀರ್ ಕಪೂರ್ ಅವರ ʼಅನಿಮಲ್ʼ ಸಿನಿಮಾ ವಿಶ್ವದೆಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಗ್ಲೋಬಲ್ ಬಾಕ್ಸ್ ಆಫೀಸ್ ನಲ್ಲಿ 600 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ರಣ್ಬೀರ್ ಕಪೂರ್ ವೃತ್ತಿ ಜೀವನದ ಬಿಗೆಸ್ಟ್ ಹಿಟ್ ಆಗಿ ʼಅನಿಮಲ್ʼ ಮೂಡಿಬಂದಿದೆ.
ಸಂದೀಪ್ ವಂಗಾ ಅವರ ʼಅನಿಮಲ್ʼ ಸಿನಿಮಾದಲ್ಲಿ ರಣ್ಭೀರ್ ,ಬಾಬಿ ಡಿಯೋಲ್ ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಇದರೊಂದಿಗೆ ಸಿನಿಮಾ ಕೆಲವೊಂದು ವಿಚಾರಗಳಲ್ಲಿ ವಿವಾದವನ್ನು ಸೃಷ್ಟಿಸಿಕೊಂಡಿದೆ. ಸ್ತ್ರೀ ದ್ವೇಷ ಹಾಗೂ ಕ್ರೌರ್ಯವನ್ನು ಹೆಚ್ಚಾಗಿ ತೋರಿಸಿರುವ ಕಾರಣಕ್ಕೆ ಸಿನಿಮಾದ ಬಗ್ಗೆ ಕೆಲವೊಂದು ಕಡೆ ನೆಗೆಟಿವ್ ಮಾತುಗಳು ಕೇಳಿಬಂದಿದೆ.
ಕ್ರೌರ್ಯವನ್ನು ಹೆಚ್ಚಾಗಿ ಬಣ್ಣಿಸಿ ತೋರಿಸಿರುವ ಕಾರಣಕ್ಕೆ ಕೇಳಿಬಂದಿರುವ ವಿವಾದದ ಮಾತುಗಳು ಟಾಲಿವುಡ್ ಸಿನಿರಂಗದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ʼಪುಷ್ಪ-2ʼ ಸಿನಿಮಾಕ್ಕೂ ತಟ್ಟಿದೆ ಎನ್ನುವ ಮಾತುಗಳು ಸಿನಿವಲಯದಲ್ಲಿ ಕೇಳಿ ಬರುತ್ತಿದೆ.
ಸುಕುಮಾರ್ ನಿರ್ದೇಶನದ ʼಪುಷ್ಪ-2ʼ ಸಿನಿಮಾದ ಹೈಪ್ ದಿನಕಳೆದಂತೆ ಹೆಚ್ಚಾಗುತ್ತಿದೆ. ಒಂದಲ್ಲ ಒಂದು ಕಾರಣದಿಂದ ಅಲ್ಲು ಅರ್ಜುನ್ ಅವರ ಸಿನಿಮಾ ಸದ್ದು ಮಾಡುತ್ತಲೇ ಇದೆ. ಶೂಟಿಂಗ್ ಹಂತದಲ್ಲೇ ನಿರೀಕ್ಷೆಯನ್ನು ದೊಡ್ಡಮಟ್ಟದಲ್ಲಿ ಹೆಚ್ಚಿಸಿದೆ.
ʼಅನಿಮಲ್ʼ ಸಿನಿಮಾದಲ್ಲಿನ ರಕ್ತಸಿಕ್ತ ಕ್ರೌರ್ಯದ ದೃಶ್ಯಗಳಿಗೆ ಕೆಲವರಿಂದ ನೆಗೆಟವ್ ಅಭಿಪ್ರಾಯಗಳು ಕೇಳಿ ಬಂದಿರುವ ಕಾರಣ ʼಪುಷ್ಪ-2ʼ ಸಿನಿಮಾದಲ್ಲಿ ಕ್ರೌರ್ಯದ ದೃಶ್ಯಗಳಿಗೆ ಕತ್ತರಿ ಹಾಕಿ ಸ್ಕ್ರಿಪ್ಟ್ ನಲ್ಲಿ ಬದಲಾವಣೆ ಮಾಡಿಕೊಳ್ಳಲು ನಿರ್ದೇಶಕರು ಪ್ಲ್ಯಾನ್ ಮಾಡಿದ್ದಾರೆ ಎಂದು ʼಟೈಮ್ಸ್ ಆಫ್ ಇಂಡಿಯಾʼ ವರದಿ ತಿಳಿಸಿದೆ.
ಇನ್ನು ʼಅನಿಮಲ್ʼ ನಲ್ಲಿ ʼಗೀತಾಂಜಲಿʼ ಯಾಘಿ ಪವರ್ ಫುಲ್ ಅಭಿನಯ ಮಾಡಿರುವ ರಶ್ಮಿಕಾ ಅವರ ʼಶ್ರೀವಲ್ಲಿʼ ಪಾತ್ರದಲ್ಲೂ ಕೆಲ ಬದಲಾವಣೆ ಮಾಡಲಿದ್ದಾರೆ. ಮದುವೆ ಬಳಿಕದ ಶ್ರೀವಲ್ಲಿಯನ್ನು ಮಾತ್ರ ತೋರಿಸದೆ, ಅವರ ಪಾತ್ರದಲ್ಲಿ ಕೆಲ ಬದಲಾವಣೆಯನ್ನು ಮಾಡಿ ಪ್ರಮುಖ ಪಾತ್ರವಾಗಿ ತೋರಿಸಲು ಚಿತ್ರತಂಡ ಪ್ಲ್ಯಾನ್ ಮಾಡಿದೆ ಎಂದು ವರದಿ ತಿಳಿಸಿದೆ.
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಾಹದ್ ಫಾಸಿಲ್, ಡಾಲಿ ಧನಂಜಯ ಸೇರಿದಂತೆ ಇತರೆ ಪ್ರಮುಖರು ʼಪುಷ್ಪ-2ʼ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2024 ರ ಆಗಸ್ಟ್ 15 ರಂದು ಸಿನಿಮಾ ತೆರೆ ಕಾಣಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ