Vijay Deverakonda: “ನಾನು ಮದುವೆಯಾದಾಗ..” ಮ್ಯಾರೇಜ್ ಲೈಫ್ ಹೇಗಿರಬೇಕೆಂದ ನಟ ದೇವರಕೊಂಡ
Team Udayavani, Jul 13, 2023, 10:24 AM IST
ಹೈದರಾಬಾದ್: ಟಾಲಿವುಡ್ ಸ್ಟಾರ್ ನಟ ವಿಜಯ್ ದೇವರಕೊಂಡಾ ಸದ್ಯ ʼಖುಷಿʼ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾದ ಎರಡನೇ ಹಾಡು ಬುಧವಾರ (ಜು.12 ರಂದು) ರಿಲೀಸ್ ಆಗಿದೆ.
ಶಿವ ನಿರ್ವಾಣ ನಿರ್ದೇಶನದಲ್ಲಿ ಮೂಡಿ ಬಂದಿರುವ ʼಖುಷಿʼ ಸಿನಿಮಾ ಪೋಸ್ಟರ್ ಹಾಗೂ ಹಾಡುಗಳಿಂದ ಗಮನ ಸೆಳೆಯುತ್ತಿದೆ. ʼಅರ್ಜುನ್ ರೆಡ್ಡಿʼ ಜೊತೆ ಸಮಂತಾ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಎರಡನೇ ಹಾಡು ‘ಆರಾಧ್ಯ’ ಬುಧವಾರ ರಿಲೀಸ್ ಆಗಿದೆ. ಈ ಹಾಡಿನ ಬಗ್ಗೆ ಮಾತನಾಡುತ್ತಾ ನಟ ದೇವರಕೊಂಡಾ ತನ್ನ ಮದುವೆ ಜೀವನ ಹೇಗಿರಬೇಕು ಎಂದಿದ್ದಾರೆ.
“ಆರಾಧ್ಯ” ಹಾಡು ಯುವ ಜೋಡಿಯ ಪ್ರೀತಿಯ ಹಾಡು. ಮದುವೆಯಾದ ಒಂದು ವರ್ಷದ ಬಳಿಕ ನೀವು ನಿಮ್ಮ ಸಂಗಾತಿಯೊಂದಿಗೆ ಅನೋನ್ಯವಾಗಿ,ನಿಮ್ಮದೇ ಲೋಕದಲ್ಲಿ ಇರುವುದು. ನಿಮ್ಮಗಾಗಿರುವ ವ್ಯಕ್ತಿಗೆ ಸಾಕಷ್ಟು ಸಮಯವನ್ನು ನೀಡುವುದು ಮತ್ತು ಆ ವ್ಯಕ್ತಿಯೊಂದಿಗೆ ಹಾಯಾಗಿ ಜೀವಿಸುವುದು. ಈ ಹಾಡು ಮದುವೆ ನಂತರದ ಸುಂದರ ಸಮಯದ ಕ್ಷಣದು” ಎಂದು ನಟ ಹೇಳಿದ್ದಾರೆ.
ಈ ಹಾಡಿನಲ್ಲಿನ ಬಹಳಷ್ಟು ಕ್ಷಣಗಳು ನನ್ನ ಜೀವನದಿಂದ, ನಾನು ಅನುಭವಿಸಿದ ಅನುಭವಗಳಿಂದ ಬಂದಿದೆ. ನನಗೆ ಮದುವೆಯಾಗಿಲ್ಲ ಆದರೆ ಒಂದು ರೀತಿಯಲ್ಲಿ, ನಾನು ಮದುವೆಯಾದಾಗ ನನ್ನ ವೈವಾಹಿಕ ಜೀವನವು ಹೀಗೆ ಇರಬೇಕೆಂದು ನಾನು ಬಯಸುತ್ತೇನೆ, ”ಎಂದು ಅವರು ವಿವರಿಸಿದರು.
ನಟ ವಿಜಯ್ ದೇವರಕೊಂಡಾ ಹಾಗೂ ರಶ್ಮಿಕಾ ಡೇಟಿಂಗ್ ನಲ್ಲಿದ್ದಾರೆ ಎನ್ನುವ ವಿಚಾರ ಕಳೆದ ಕೆಲ ಸಮಯದಿಂದ ಹರಿದಾಡುತ್ತಿದೆ. ಇತ್ತೀಚಿಗಷ್ಟೇ ರಶ್ಮಿಕಾ ಕೆಫೆಯೊಂದರಲ್ಲಿ ವಿಜಯ್ ದೇವರಕೊಂಡಾ ಅವರೊಂದಿಗೆ ಕಾಣಿಸಿಕೊಂಡಿದ್ದರು. ಆದರೆ ರಿಲೇಷನ್ ಶಿಪ್ ಬಗ್ಗೆ ಇದುವರೆಗೆ ಇಬ್ಬರು ಬಾಯಿಬಿಟ್ಟಿಲ್ಲ.
ʼಖುಷಿʼ ಸಿನಿಮಾ ಸೆಪ್ಟೆಂಬರ್ 1 ರಂದು ತೆರೆಗೆ ಬರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು