ʼRAAVAN’ to ʼRRRʼ: ರಾಮಾಯಣದಿಂದ ಸ್ಪೂರ್ತಿಗೊಂಡು ಬಂದ ಸಿನಿಮಾ, ಶೋಗಳಿವು


Team Udayavani, Jan 20, 2024, 6:21 PM IST

ʼRAAVAN’ to ʼRRRʼ: ರಾಮಾಯಣದಿಂದ ಸ್ಪೂರ್ತಿಗೊಂಡು ಬಂದ ಸಿನಿಮಾ, ಶೋಗಳಿವು

ಮುಂಬಯಿ: ದೇಶ ಅಯೋಧ್ಯೆಯ ಶ್ರೀರಾಮ ಮಂದಿರದ ‘ಪ್ರಾಣ ಪ್ರತಿಷ್ಠಾ’ ಸಮಾರಂಭಕ್ಕೆ ಕಾಯುತ್ತಿದೆ. ರಾಮಲಲ್ಲಾ ಮೂರ್ತಿ ಅನಾವರಣಗೊಳ್ಳಲು ದಿನಗಣನೆ ಬಾಕಿ ಉಳಿದಿದೆ. ಬಣ್ಣದ ಲೋಕದಲ್ಲಿ ರಾಮಾಯಣದ ಉಲ್ಲೇಖ ಹೊಸದೇನಲ್ಲ. ರಾಮಾಯಣದಿಂದ ಸ್ಪೂರ್ತಿಗೊಂಡು ಬಂದ ಆರು ಚಲನಚಿತ್ರ ಹಾಗೂ ಶೋಗಳ ಕುರಿತ ಪರಿಚಯ ಇಲ್ಲಿದೆ.

ರಮಾನಂದ ಸಾಗರ್ ಅವರ ರಾಮಾಯಣ: ರಮಾನಂದ ಸಾಗರ್‌ ಅವರು ಇಂದಿನ ಯುವ ಪೀಳಿಗೆಗೆ ಅಷ್ಟಾಗಿ ಪರಿಚಯವಿರದು. ಆದರೆ 80 ದಶಕದಲ್ಲಿ ಅತೀ ಹೆಚ್ಚು ಜನಪ್ರಿಯವಾದ ಶೋಗಳಲ್ಲಿ ಒಂದಾಗಿದ್ದ ʼರಾಮಾಯಣʼ ನೋಡಿದವರಿಗೆ ಎಲ್ಲರಿಗೂ ಇಂದಿಗೂ ರಮಾನಂದ ಸಾಗರ್‌ ಅವರ ಹೆಸರು ನೆನಪಲಿ ಉಳಿದಿದೆ.

ರಮಾನಂದ ಸಾಗರ್‌ ನಿರ್ದಶಿಸಿದ ʼರಾಮಾಯಣʼ ಶೋ ಭಾರತ ಮಾತ್ರವಲ್ಲದೆ, 53 ದೇಶಗಳಲ್ಲಿ ಪ್ರಸಾರ ಕಂಡಿದೆ. ಪ್ರಪಂಚದಾದ್ಯಂತ 650 ಮಿಲಿಯನ್‌ ಗೂ ಹೆಚ್ಚು ವೀಕ್ಷಕರು ವೀಕ್ಷಿಸಿದ್ದಾರೆ. ಇದು ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಪೌರಾಣಿಕ ಶೋವಾಗಿದೆ. 2020 ರಲ್ಲಿ ಸಾಂಕ್ರಾಮಿಕ ರೋಗದಿಂದಾಗಿ ಲಾಕ್‌ಡೌನ್ ಆದ ಸಮಯದಲ್ಲಿ ಇದನ್ನು ಮರು-ಪ್ರಸಾರ ಮಾಡಲಾಗಿತ್ತು.

ಇದನ್ನೂ ಓದಿ: Sania-Shoaib .. ಪ್ರೇಮ್‌ ಕಹಾನಿಯಿಂದ ಸದ್ದು ಮಾಡಿದ ಇಂಡೋ – ಪಾಕ್‌ ಸೆಲೆಬ್ರಿಟಿಗಳಿವರು

ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ:  ರಾಮಾಯಣದಿಂದ ಸ್ಪೂರ್ತಿಗೊಂಡಿರುವ ʼ ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮʼ ಸಿನಿಮಾವನ್ನು ರಾಮಾಯಣದ ಅತ್ಯುತ್ತಮ ಅನಿಮೇಟೆಡ್ ರೂಪಾಂತರಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಈ ಸಿನಿಮಾವನ್ನು 1992 ರ ಬಂದ ಈ ಸಿನಿಮಾವನ್ನು ಜಪಾನೀಸ್ ಮತ್ತು ಭಾರತೀಯ ಅನಿಮೇಷನ್ ಸ್ಟುಡಿಯೋಗಳು ಸಹ-ನಿರ್ಮಾಣ ಮಾಡಿದೆ. ಜಪಾನ್‌ ನಿರ್ದೇಶಕ ಯುಗೋ ಸಾಕೋ ಇದನ್ನು ನಿರ್ದೇಶನ ಮಾಡಿದ್ದರು. ರಾಮಾಯಣ 1987 ಟಿವಿ ಸರಣಿಯಲ್ಲಿ ರಾಮನ ಪಾತ್ರದಲ್ಲಿ ಹೆಸರುವಾಸಿಯಾದ ಅರುಣ್ ಗೋವಿಲ್, ಪ್ರಿನ್ಸ್‌ ರಾಮನಿಗೆ ವಾಯ್ಸ್‌ ನೀಡಿದ್ದರು.

ರಾವಣ್:‌ ಮಣಿರತ್ನಂ ನಿರ್ದೇಶನದಲ್ಲಿ ಬಂದ ಬಾಲಿವುಡ್‌ ನ ʼರಾವಣ್‌ʼ ಸಿನಿಮಾದಲ್ಲಿ ʼರಾಮಾಯಣʼದ ಕಥೆಯನ್ನು ರಾವಣನ ದೃಷ್ಟಿಕೋನದಿಂದ ಹೇಳಲಾಗಿದೆ. ಡಕಾಯಿತನಾಗಿರುವ ಬೀರಾ ಪೊಲೀಸ್ ಅಧಿಕಾರಿಯ ಹೆಂಡತಿಯನ್ನು ಅಪಹರಿಸಿ ನಂತರ ಅವಳನ್ನು ಪ್ರೀತಿಸುತ್ತಾರೆ. ಅದ್ಭುತ ಅಭಿನಯ, ಛಾಯಾಗ್ರಹಣದಿಂದ ಸಿನಿಮಾ ಮೆಚ್ಚುಗೆ ಗಳಿಸಿತ್ತು.

ಹನುಮಾನ್:‌ 2005 ರಲ್ಲಿ ಬಿಡುಗಡೆಯಾದ ‘ಹನುಮಾನ್’ ವಿಜಿ ಸಮಂತ್ ನಿರ್ದೇಶನದ ಅನಿಮೇಟೆಡ್ ಚಲನಚಿತ್ರವಾಗಿದೆ. ಭಗವಾನ್ ಹನುಮಾನ್‌ನ ಜೀವನವನ್ನು ಹೇಳುತ್ತದೆ. ಇದರಲ್ಲಿ ರಾಮಾಯಣದ ಘಟನೆಗಳನ್ನು ಚಿತ್ರೀಕರಿಸಿ ತೋರಿಸಲಾಗಿದೆ. ಈ ಸಿನಿಮಾದ ಅನಿಮೇಷನ್ ಪ್ರೇಕ್ಷಕರ ಮನಗೆದ್ದಿತ್ತು.

ಆರ್‌ ಆರ್‌ ಆರ್: ಭಾರತೀಯ ಸಿನಿ ಪರೆದೆಯಲ್ಲಿ ಹೊಸ ದಾಖಲೆ ಬರೆದ ರಾಜಮೌಳಿ ಅವರ ʼಆರ್‌ ಆರ್‌ ಆರ್‌ʼ ಸಿನಿಮಾದಲ್ಲಿ ರಾಮಾಯಣದ ಅಂಶವನ್ನು ಹೇಳಲಾಗಿದೆ. ರಾಮ್‌ ಚರಣ್‌ ಪಾತ್ರವನ್ನು ರಾಮನ ಪಾತ್ರಕ್ಕೆ ಹೋಲಿಸಿದ್ದು, ಜೂನಿಯರ್ ಎನ್ ಟಿಆರ್ ಅವರ ಪಾತ್ರವನ್ನು ಹನುಮಾನ್ ಮತ್ತು ಆಲಿಯಾ ಭಟ್ ಅವರ ಪಾತ್ರವನ್ನು ಸೀತೆಗೆ ಹೋಲಿಸಿ ರಾಮಾಯಣದ ಎಳೆಯನ್ನು ಸಿನಿಮಾದಲ್ಲಿ ತೋರಿಸಲಾಗಿದೆ.

ಹಮ್ ಸಾತ್ ಸಾತ್ ಹೈ: ಸೂರಜ್ ಬರ್ಜತ್ಯಾ ಅವರ ʼಹಮ್ ಸಾತ್ ಸಾತ್ ಹೈʼ ಸೂಪರ್‌ ಹಿಟ್‌ ಆಗಿದ್ದ ಸಿನಿಮಾ. ಈ ಸಿನಿಮಾದ ಕಥೆ ಕೂಡ ರಾಮಾಯಣದಿಂದ ಪ್ರೇರಿತಗೊಂಡಿದೆ. ಕುಟುಂಬ ಬಂಧ ಮತ್ತು ಪ್ರೀತಿಯ ಕೇಂದ್ರ ವಿಷಯದ ಕಥೆಯನ್ನು ಸಿನಿಮಾ ಒಳಗೊಂಡಿದೆ. ಚಿತ್ರವು ರಾಮಾಯಣದಿಂದ ಸ್ಫೂರ್ತಿಯನ್ನು ಪಡೆದಿದೆ. ರಾಮನ ವನವಾಸದ ಕಥೆಯ ಹಾಗೆ ಸಿನಿಮಾದಲ್ಲಿ ಕುಟುಂಬದ ಹಾಗೂ ಸಹೋದರರ ಬಾಂಧ್ಯವದ ಕಥೆಯನ್ನು ಹೇಳಲಾಗಿದೆ.

ಟಾಪ್ ನ್ಯೂಸ್

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

supreem

ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

Exam

NEET; ಕೋಟಾದಲ್ಲಿ ಮತ್ತೊಬ್ಬ ಆಕಾಂಕ್ಷಿ ಆತ್ಮಹತ್ಯೆ: ಇದು 8ನೇ ಪ್ರಕರಣ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.