“ಡಿಯರ್ ಕಾರ್ಮೆಡ್’ʼಗೆ 4 ವರ್ಷ: ಸೆಲ್ಫಿ ಹಂಚಿಕೊಂಡು ವಿಶೇಷ ಸಿನಿಮಾವನ್ನು ನೆನೆದ ರಶ್ಮಿಕಾ
Team Udayavani, Jul 27, 2023, 10:14 AM IST
ಹೈದರಾಬಾದ್: ವಿಜಯ್ ದೇವರಕೊಂಡ – ರಶ್ಮಿಕಾ ಅಭಿನಯದ ಹಿಟ್ ಸಿನಿಮಾ “ಡಿಯರ್ ಕಾರ್ಮೆಡ್’ʼ ರಿಲೀಸ್ ಆಗಿ ಜು.26ಕ್ಕೆ 4 ವರ್ಷಗಳು ಕಳೆದಿದೆ. ಸಿನಿಮಾದಲ್ಲಿನ ರಶ್ಮಿಕಾ – ವಿಜಯ್ ಕೆಮೆಸ್ಟ್ರಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು.
ಟಾಲಿವುಡ್ ನಲ್ಲಿ ʼ’ಗೀತ ಗೋವಿಂದಂʼ’ನಿಂದ ಜೋಡಿಯಾಗಿ ಕಾಣಿಸಿಕೊಂಡ ರಶ್ಮಿಕಾ – ದೇವರಕೊಂಡ ಆ ಬಳಿಕ ಸ್ಪೋರ್ಟ್ಸ್ ಡ್ರಾಮಾ ʼಡಿಯರ್ ಕಾರ್ಮೆಡ್ʼ ನಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾಕ್ಕೆ ಟಾಲಿವುಡ್ ಮಾತ್ರವಲ್ಲದೆ ಇತರ ಕಡೆಯೂ ಪಾಸಿಟಿವ್ ರಸ್ಪಾನ್ಸ್ ವ್ಯಕ್ತವಾಗಿತ್ತು.
ಈ ಎರಡು ಸಿನಿಮಾಗಳ ಬಳಿಕ ದೇವರಕೊಂಡ ಹಾಗೂ ರಶ್ಮಿಕಾ ಆತ್ಮೀಯ ಸ್ನೇಹಿತರಾಗಿದ್ದರು. ಬಹುತೇಕ ಕಡೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಅವರಿಬ್ಬರು ಡೇಟ್ ನಲ್ಲಿದ್ದಾರೆ ಎನ್ನುವ ಗಾಸಿಪ್ ಗಳು ಈಗಲೂ ಹರಿದಾಡುತ್ತಿದೆ. ಹೊಸ ವರ್ಷಕ್ಕೆ ಮಾಲ್ಡೀವ್ಸ್ ತಿರುಗಾಟ, ರೆಸ್ಟೋರೆಂಟ್ ನಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುವುದರವರೆಗೆ ರಶ್ಮಿಕಾ – ದೇವರಕೊಂಡ ಕ್ಲೋಸ್ ಆಗಿದ್ದಾರೆ.
ಆದರೆ ತಾವಿಬ್ಬರು ಫ್ರೆಂಡ್ಸ್ ಅಷ್ಟೇ ಎಂದು ಈ ಹಿಂದೆ ಹೇಳಿ ಎಲ್ಲಾ ವದಂತಿಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದರೂ, ಈಗಲೂ ಸಿನಿವಲಯದಲ್ಲಿ ಇಬ್ಬರ ನಡುವಿನ ಡೇಟಿಂಗ್ ಗಾಸಿಪ್ ಹರಿದಾಡುತ್ತಿದೆ.
“ಡಿಯರ್ ಕಾರ್ಮೆಡ್’ʼ ಸಿನಿಮಾ ರಿಲೀಸ್ ಆಗಿ 4 ವರ್ಷಗಳು ಕಳೆದಿದೆ. ಈ ಸಂತಸವನ್ನು ರಶ್ಮಿಕಾ ಮಂದಣ್ಣ ದೇವರಕೊಂಡ ಹಾಗೂ ನಿರ್ದೇಶಕ ಭಾರತ್ ಕಮ್ಮ ಅವರೊಂದಿಗಿನ ಹಳೆಯ ಫೋಟೋವೊಂದನ್ನು ಹಂಚಿಕೊಂಡು “ನನಗೆ ಯಾವಾಗಲೂ ವಿಶೇಷವಾದ ಚಿತ್ರ” ಚಿತ್ರವೆಂದು ಬರೆದುಕೊಂಡಿರುವ ಸ್ಟೋರಿಯೊಂದು ಹಂಚಿಕೊಂಡಿದ್ದಾರೆ.
ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಮತ್ತು ಶ್ರುತಿ ರಾಮಚಂದ್ರನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಕೆಲಸದ ಸ್ಥಳದಲ್ಲಿ ಕಿರುಕುಳ ಮತ್ತು ಇದು ಮಹಿಳೆಯರ ಕನಸಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದರ ಕುರಿತ ಕಥೆ “ಡಿಯರ್ ಕಾರ್ಮೆಡ್’ʼ ನಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ