ಗೋವಾ ಚಿತ್ರೋತ್ಸವದಲ್ಲಿ ಉಚಿತ ಪ್ರವೇಶ;ಸಮೂಹಸಂವಹನ ವಿದ್ಯಾರ್ಥಿಗಳಾಗಿದ್ದರೆ ಹೆಸರು ನೋಂದಾಯಿಸಿ


Team Udayavani, Nov 12, 2019, 5:39 PM IST

Free-Access-to-IFFI-2019-fo

ಸಿನಿಮಾಸಕ್ತ ವಿದ್ಯಾರ್ಥಿಗಳು ಇಫಿ ಚಿತ್ರೋತ್ಸವವೂ ಸೇರಿದಂತೆ ದೇಶದ ವಿವಿಧೆಡೆ ನಡೆಯುವ ಚಿತ್ರೋತ್ಸವಗಳಲ್ಲಿ ಭಾಗವಹಿಸಲು ಹಲವು ಕಾರಣಗಳಿವೆ. ನ. 20ರಿಂದ 28ರವರೆಗೆ ನಡೆಯುವ ಈ ಚಿತ್ರೋತ್ಸವದಲ್ಲಿ ಸಿನಿಮಾ ಮತ್ತು ಸಮೂಹ ಮಾಧ್ಯಮದ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ.

ವಿದ್ಯಾರ್ಥಿಗಳಲ್ಲಿ ಸಿನಿಮಾ ಬಗೆಗಿನ ಪ್ರೀತಿ ಮತ್ತು ಅರಿವು ಹೆಚ್ಚಿಸುವ ಸಲುವಾಗಿ ಇಫಿ ಈ ಸೌಲಭ್ಯವನ್ನು ಕಲ್ಪಿಸಿದೆ. ಅಂದರೆ, ಈ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕವಿರುವುದಿಲ್ಲ.ಇಫಿ ಚಿತ್ರೋತ್ಸವದಲ್ಲಿ ಬರೀ ಬಾಲಿವುಡ್‌ ಅಥವಾ ಇತರೆ ಪ್ರಾದೇಶಿಕ ಭಾಷೆಗಳ ಜನಪ್ರಿಯ ಚಲನ ಚಿತ್ರಗಳಷ್ಟೇ ಸಿಗುವುದಿಲ್ಲ. ಇಲ್ಲಿ ಬಹಳ ಮುಖ್ಯವಾಗಿ ಜಗತ್ತಿನ ವಿವಿಧ ದೇಶಗಳ ಪ್ರಶಸ್ತಿ ಪುರಸ್ಕೃತ ಚಿತ್ರಗಳು, ಹೊಸ ಅಲೆಯ ಚಿತ್ರಗಳು ವೀಕ್ಷಿಸಲು ಲಭ್ಯ.

ಇದರೊಂದಿಗೆ ಇನ್ನೂವಿಶೇಷವೆಂದರೆ, ಕಥೇತರ [ನಾನ್‌ ಫೀಚರ್‌] ವಿಭಾಗದಲ್ಲಿ ಸಾಕ್ಷ್ಯ ಚಿತ್ರಗಳನ್ನೂ ವೀಕ್ಷಿಸಬಹುದು. ವಿವಿಧ ಸಿನಿಮಾ ಶಾಲೆಗಳಿಂದ ಹೊರ ಬರುತ್ತಿರುವ ವಿಶಿಷ್ಟ ಪ್ರತಿಭೆಗಳ ಪ್ರದರ್ಶನವೂ ಇಲ್ಲಿದೆ.

ಯಾಕೆ ವಿದ್ಯಾರ್ಥಿಗಳು ಭಾಗವಹಿಸಬೇಕು?

ಇಫಿಯಷ್ಟೇ ಅಲ್ಲ, ದೇಶದ ಯಾವುದೇ ಭಾಗದಲ್ಲಿ ನಡೆಯುವ ಪ್ರಮುಖ ಚಿತ್ರೋತ್ಸವಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಲು ಹಲವು ಕಾರಣಗಳಿವೆ. ಪ್ರಮುಖವಾಗಿ ಅಲ್ಲಿ ಸಿಗುವ ಸಿನಿಮಾ ವೈವಿಧ್ಯ. ಇದರಿಂದ ಜಗತ್ತಿನ ಇಂದಿನ ಚಲನ ಚಿತ್ರಗಳ ಟ್ರೆಂಡ್‌ ತಿಳಿದುಕೊಳ್ಳಲು ಸಾಧ್ಯ.

ಮಾಸ್ಟರ್‌ ಕ್ಲಾಸಸ್‌

ಎರಡನೆಯದಾಗಿ ಅಲ್ಲಿ ನಡೆಯುವ ವಿವಿಧ ತರಬೇತಿಗಳು. ಈಗ ಇಫಿಯಲ್ಲಿ ಮಾಸ್ಟರ್‌ ಕ್ಲಾಸಸ್‌ ಎಂಬ ವಿಭಾಗವಿದೆ. ಚಿತ್ರೋತ್ಸವಕ್ಕೆ ಬಂದವರು ಬರೀ ಸಿನಿಮಾ ನೋಡಬೇಕೆಂದೇನೂ ಇಲ್ಲ. ಮಧ್ಯಾಹ್ನ ಅಥವಾ ಸಂಜೆ ಹೊತ್ತಿಗೆ ನಡೆಯುವ ಮಾಸ್ಟರ್ಕ್ಲಾಸಸ್‌ ನಲ್ಲಿ ಭಾಗವಹಿಸಬಹುದು. ಅದರಲ್ಲಿ ಖ್ಯಾತ ಸಿನಿಮಾಕರ್ತರು ಭಾಗವಹಿಸಿ ತಮ್ಮ ಅನುಭವವನ್ನು ಹಂಚಿಕೊಳ್ಳುವರು. ಸುಭಾಷ್‌ ಘಾಯ್‌ ನಿಂದ ಹಿಡಿದು ಹಲವರು ಇಂಥ ತರಗತಿಗಳಲ್ಲಿ ಪಾಲ್ಗೊಳ್ಳುವರು.

ಖ್ಯಾತರೊಂದಿಗೆ ಸಂಭಾಷಣೆ

ಪ್ರತಿ ಚಿತ್ರೋತ್ಸವದಲ್ಲೂ ಹಲವಾರು ಖ್ಯಾತ ನಿರ್ದೇಶಕರು, ಪರಿಣಿತರು ಪಾಲ್ಗೊಳ್ಳುವರು. ಅವರನ್ನು ಭೇಟಿಯಾಗಿ ಸಿನಿಮಾ ಬಗೆಗಿನ ತಮ್ಮ ಅಭಿಪ್ರಾಯ, ಸಂಶಯ ನಿವಾರಿಸಿಕೊಳ್ಳಲೂ ಒಂದು ಅವಕಾಶ.

ಚಿಮ್ಮುಹಲಗೆ

ಕೆಲವು ಪ್ರತಿಭೆಗಳಿಗೆ ಇದೊಂದು ಚಿಮ್ಮು ಹಲಗೆಯೂ ಸಹ. ಅಲ್ಲಿ ಭೇಟಿಯಾಗುವ ಖ್ಯಾತ ನಾಮರ ಸಂಪರ್ಕ ಪಡೆದು ಸಿನಮಾ ಕ್ಷೇತ್ರ ಪ್ರವೇಶಿಸಲೂ ಒಂದು ಕಿಂಡಿ ತೆರೆಯುವುದು ಇಲ್ಲಿಯೇ.

ಇಫಿ ಉತ್ಸವಕ್ಕೆ ನೋಂದಾಯಿಸಲು ಏನು ಮಾಡಬೇಕು ?

ಯಾವುದೇ ಸಿನಿಮಾ ಮತ್ತು ಸಮೂಹ ಮಾಧ್ಯಮ ಸಂಸ್ಥೆಯ ವಿದ್ಯಾರ್ಥಿಯಾಗಿದ್ದು, ಹದಿನೆಂಟು ವರ್ಷ ವಯಸ್ಸಾಗಿರಬೇಕು. ಬಳಿಕ ಸಂಸ್ಥೆಯ ಮುಖ್ಯಸ್ಥರಿಂದ ಪತ್ರ [ bonafide certificate]ವನ್ನು ತರಬೇಕು, ವಿದ್ಯಾರ್ಥಿ ಪ್ರತಿನಿಧಿ ವಿಭಾಗದಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು.

ವಿದ್ಯಾರ್ಥಿ ಪ್ರತಿನಿಧಿಗಳಿಗೂ ಉಳಿದ ಪ್ರತಿನಿಧಿಗಳಿಗೆ ಸಿಗುವ ಸೌಲಭ್ಯದಂತೆಯೇ ಚಿತ್ರ ವೀಕ್ಷಣೆ, ಮಾಸ್ಟರ್‌ ಕ್ಲಾಸಸ್‌, ಕಾರ್ಯಾಗಾರ, ಉಚಿತ ವೈಫೈ, ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ಸೌಕರ್ಯ ಲಭ್ಯ. ಅಂದ ಹಾಗೆ ವಿದ್ಯಾರ್ಥಿ ಪ್ರತಿನಿಧಿ ದಿನಕ್ಕೆ ಮೂರು ಸಿನಿಮಾಗಳನ್ನುವೀಕ್ಷಿಸಬಹುದು. ನೋಂದಣಿ ಮತ್ತು ಮಾಹಿತಿಗೆ ಈ ಲಿಂಕ್‌ [ಸಂಪರ್ಕಕೊಂಡಿ]ನ್ನು ಕ್ಲಿಕ್‌ ಮಾಡಿ

*ರೂಪರಾಶಿ

ಟಾಪ್ ನ್ಯೂಸ್

Bad weather: KKR team landed in Varanasi

Bad weather: ವಾರಾಣಸಿಯಲ್ಲಿ ಉಳಿದ ಕೆಕೆಆರ್‌ ತಂಡ

18

Benjana Padavu: ನೇಣು ಬಿಗಿದು ಆತ್ಮಹತ್ಯೆ

Encounter in Kashmir:

ಕಾಶ್ಮೀರದಲ್ಲಿ ಎನ್‌ಕೌಂಟರ್‌: ಇಬ್ಬರು ಉಗ್ರರ ಹತ್ಯೆ

17-

Bantwala: ರಾಂಗ್‌ಸೈಡಿನಲ್ಲಿ ಬಂದು ಎರಡು ಬೈಕ್‌ಗಳಿಗೆ  ಢಿಕ್ಕಿ ಹೊಡೆದ ಲಾರಿ

Man shot a Cow on head twice

Manipur; ಹಸುವಿಗೆ ಗುಂಡಿಟ್ಟು ಕೊಂದ ಕ್ರೂರಿ!: ವ್ಯಾಪಕ ಆಕ್ರೋಶ

Rekha Jhunjhunwala lost Rs 800 crore in a single day!

Share Market; ರೇಖಾ ಜುಂಜುನ್‌ವಾಲಾಗೆ ಒಂದೇ ದಿನ 800 ಕೋಟಿ ರೂ. ನಷ್ಟ!

sunita williams

Sunita williams ಬಾಹ್ಯಾಕಾಶ ಯಾನ 90 ನಿಮಿಷಗಳಿದ್ದಾಗ ರದ್ದು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Met Gala 2024: ಇವೆಂಟ್‌ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್‌ ಫೇಕ್‌ ಫೋಟೋ ವೈರಲ್

Met Gala 2024: ಇವೆಂಟ್‌ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್‌ ಫೇಕ್‌ ಫೋಟೋ ವೈರಲ್

Arrested: ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಐದನೇ ಆರೋಪಿ ಬಂಧನ

Arrested: ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಐದನೇ ಆರೋಪಿ ಬಂಧನ

Housefull 5: ಕಾಮಿಡಿ ಜರ್ನಿಯ ‌ʼಹೌಸ್‌ ಫುಲ್‌ʼ ಕುಟುಂಬಕ್ಕೆ ಅಭಿಷೇಕ್‌ ಬಚ್ಚನ್ ಎಂಟ್ರಿ

Housefull 5: ಕಾಮಿಡಿ ಜರ್ನಿಯ ‌ʼಹೌಸ್‌ ಫುಲ್‌ʼ ಕುಟುಂಬಕ್ಕೆ ಅಭಿಷೇಕ್‌ ಬಚ್ಚನ್ ಎಂಟ್ರಿ

Kangana Ranaut: ಚಿತ್ರರಂಗದಲ್ಲಿ ಅಮಿತಾಭ್ ಗೆ ಸಮಾನವಾದ ಗೌರವ ನನಗೆ ಸಿಗುತ್ತಿದೆ; ಕಂಗನಾ

Kangana Ranaut: ಚಿತ್ರರಂಗದಲ್ಲಿ ಅಮಿತಾಭ್ ಗೆ ಸಮಾನವಾದ ಗೌರವ ನನಗೆ ಸಿಗುತ್ತಿದೆ; ಕಂಗನಾ

Covid vaccine ಅಡ್ಡ ಪರಿಣಾಮದಿಂದಲೇ ಹೃದಯಾಘಾತ?: ನಟ ಶ್ರೇಯಸ್ ಹೇಳಿದ್ದೇನು?

Covid vaccine ಅಡ್ಡ ಪರಿಣಾಮದಿಂದಲೇ ಹೃದಯಾಘಾತ?: ನಟ ಶ್ರೇಯಸ್ ಹೇಳಿದ್ದೇನು?

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Bad weather: KKR team landed in Varanasi

Bad weather: ವಾರಾಣಸಿಯಲ್ಲಿ ಉಳಿದ ಕೆಕೆಆರ್‌ ತಂಡ

18

Benjana Padavu: ನೇಣು ಬಿಗಿದು ಆತ್ಮಹತ್ಯೆ

Encounter in Kashmir:

ಕಾಶ್ಮೀರದಲ್ಲಿ ಎನ್‌ಕೌಂಟರ್‌: ಇಬ್ಬರು ಉಗ್ರರ ಹತ್ಯೆ

17-

Bantwala: ರಾಂಗ್‌ಸೈಡಿನಲ್ಲಿ ಬಂದು ಎರಡು ಬೈಕ್‌ಗಳಿಗೆ  ಢಿಕ್ಕಿ ಹೊಡೆದ ಲಾರಿ

Man shot a Cow on head twice

Manipur; ಹಸುವಿಗೆ ಗುಂಡಿಟ್ಟು ಕೊಂದ ಕ್ರೂರಿ!: ವ್ಯಾಪಕ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.