Kushi: “ರಜಿನಿಕಾಂತ್,ಚಿರಂಜೀವಿ ಸತತ ಫ್ಲಾಪ್ ಕೊಟ್ಟರೂ..” ಸದ್ದು ಮಾಡಿದ ದೇವರಕೊಂಡ ಹೇಳಿಕೆ
Team Udayavani, Aug 22, 2023, 10:46 AM IST
ಹೈದರಾಬಾದ್: ಟಾಲಿವುಡ್ ನಟ ವಿಜಯ್ ದೇವರಕೊಂಡ ತನ್ನ ಹೇಳಿಕೆಗಳಿಂದ ಅನೇಕ ಬಾರಿ ಸುದ್ದಿಯಾಗಿದ್ದಾರೆ. ವಿಜಯ್ ದೇವರಕೊಂಡ ಸದ್ಯ ʼಖುಷಿʼ ಸಿನಿಮಾದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ಸಿನಿಮಾದ ಟ್ರೇಲರ್ ರಿಲೀಸ್ ವೇಳೆ ಅವರು ಸಿನಿಮಾಗಳ ಸೋಲಿನ ಬಗ್ಗೆ ಮಾತನಾಡಿದ್ದರು.
“ಸಿನಿಮಾವೊಂದು ಓಡದಿದ್ದರೆ ಅಥವಾ ಸೋತರೆ ಆಗ ಬೇಸರವಾಗುತ್ತದೆ. ಈ ಅನುಭವ ನನಗೆ ಆಗಿದೆ. ಈ ಹಿಂದೆ ನನ್ನ ಹಲವು ಸಿನಿಮಾಗಳು ಸೋತಿವೆ. ‘ಲೈಗರ್’ ನನ್ನ ಮೊದಲ ಸೋಲಲ್ಲ.ಲೈಗರ್ ಗೂ ಮುನ್ನ ಸೋಲು ಹಾಗೂ ಗೆಲುವು ಕೂಡ ನನಗೆ ಸಿಕ್ಕಿದೆ. ನಾನು ಸೋಲು ಹಾಗೂ ಗೆಲುವು ಎರಡನ್ನೂ ಅನುಭವಿಸುವುದನ್ನು ಮುಂದುವರೆಸುತ್ತೇನೆ. ಯಾಕೆಂದರೆ ಕೊನೆಯದಾಗಿ ನಾವು ಕಥೆಗಳನ್ನು ಹೇಳಲು ಯತ್ನಸುತ್ತೇವೆ. ನಾನು ವಿಭಿನ್ನವಾಗಿ ಏನೇನಾದರೂ ಹೇಳಲು ಇಚ್ಛಿಸುವವನು ಮತ್ತು ಅದಕ್ಕೆ ನಾನು ಬದ್ಧವಾಗಿದ್ದೇನೆ” ಎಂದಿದ್ದರು.
ಇದೀಗ ಚೆನ್ನೈನಲ್ಲಿ ನಡೆದ ಸಿನಿಮಾದ ಪ್ರಚಾರದ ವೇಳೆ ಅವರಾಡಿದ ಮಾತುಗಳು ಸದ್ದು ಮಾಡುತ್ತಿದೆ. ಸೂಪರ್ ಸ್ಟಾರ್ ರಜಿನಿಕಾಂತ್ ಹಾಗೂ ಚಿರಂಜೀವಿ ಅವರ ಫ್ಲಾಪ್ ಗಳ ಮಾತನಾಡಿದ್ದು ವೈರಲ್ ಆಗಿದೆ.
“ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಹಿಟ್ ಮತ್ತು ಫ್ಲಾಪ್ ಗಳನ್ನು ಮೀರಿದವರು. ರಜಿನಿಕಾಂತ್ ಸರ್ ಅವರು 5-6 ಫ್ಲಾಪ್ ಗಳನ್ನು ನೀಡಿದರೂ 500 ಕೋಟಿಗಳಿಸುವ ʼಜೈಲರ್ʼನಂತಹ ಸಿನಿಮಾಗಳನ್ನು ನೀಡುತ್ತಾರೆ. ಅದನ್ನು ನಾವು ಯಾವುದೇ ತಕರಾರು ಇಲ್ಲದೆ ನೋಡುತ್ತೇವೆ” ಎಂದು ನಟ ಹೇಳಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಅವರು ಕೂಡ ಸತತ ಫ್ಲಾಪ್ ಸಿನಿಮಾಗಳನ್ನು ನೀಡಿದರೂ, ಅವರು ನಿರ್ದೇಶಕರನ್ನು ಬಳಿ ಅತೀ ಉತ್ಸಹದಿಂದಲೇ ಭೇಟಿ ಮಾಡುತ್ತಾರೆ. ʼಸಂಕ್ರಾಂತಿʼ ಸಿನಿಮಾದಿಂದ ಕಂಬ್ಯಾಕ್ ಮಾಡಿದಂತೆ, ಅವರು ಮತ್ತೆ ಸೂಪರ್ ಹಿಟ್ ಯೊಂದಿಗೆ ಕಂಬ್ಯಾಕ್ ಮಾಡುತ್ತಾರೆ. ಚಿರು ಸರ್ ಇಂಡಸ್ಟ್ರಿ ಬದಲಾಯಿಸಿದರು. ಅವರು ಬಂದ ಮೇಲೆ ಆ್ಯಕ್ಷನ್, ಡ್ಯಾನ್ಸ್, ಪರ್ಫಾರ್ಮೆನ್ಸ್ ಎಲ್ಲವೂ ಸಂಪೂರ್ಣ ಬದಲಾಯಿತು. ಅವರು ಉದ್ಯಮಕ್ಕೆ ಪ್ರವೇಶಿಸಲು ಅನೇಕ ಜನರನ್ನು ಪ್ರೇರೇಪಿಸಿದ್ದಾರೆ ಎಂದರು.
“ಜನರು ಹಿರಿಯ ನಟರನ್ನು ಅವರ ಹಿಟ್ ಮತ್ತು ಫ್ಲಾಪ್ಗಳ ಆಧಾರದ ಮೇಲೆ ನಿರ್ಣಯಿಸುವುದು ಅಗೌರವ. ಅವರು ದಿಗ್ಗಜರು ನಾವು ಅವರನ್ನು ಗೌರವಿಸಬೇಕು. ಕಮಲ್ ಹಾಸನ್ ಸರ್ ʼವಿಕ್ರಮ್ʼ ರಜಿನಿ ಸರ್ ʼಜೈಲರ್ʼ ನಿಂದ ಕಂಬ್ಯಾಕ್ ಮಾಡಿರುವುದು ಸಂತಸದ ವಿಚಾರ” ಎಂದಿದ್ದಾರೆ.
ವಿಜಯ್ ದೇವರಕೊಂಡ, ಸಮಂತಾ ಅಭಿನಯದ ‘ಖುಷಿʼ ಸಿನಿಮಾ ಸೆಪ್ಟೆಂಬರ್ 1 ರಂದು ವರ್ಲ್ಡ್ ವೈಡ್ ತೆರೆ ಕಾಣಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು