Vijay Deverakonda: ನಿಮ್ಮ ಸಿನಿಮಾದಿಂದ 8 ಕೋಟಿ ನಷ್ಟ ಆಗಿದೆ; ಪರಿಹಾರಕ್ಕೆ ನಟನ ಬಳಿ ಮನವಿ
Team Udayavani, Sep 6, 2023, 3:50 PM IST
ಹೈದರಾಬಾದ್: ಟಾಲಿವುಡ್ ನಟ ವಿಜಯ್ ದೇವರಕೊಂಡ ಸದ್ಯ ʼಖುಷಿʼ ಸಿನಿಮಾದ ಯಶಸ್ಸಿನ ಸಂಭ್ರಮದಲ್ಲಿದ್ದಾರೆ.ʼಖುಷಿʼ ಸಿನಿಮಾ 70 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ವಿಜಯ್ ದೇವರಕೊಂಡ ಹೈದರಾಬಾದ್ ನಲ್ಲಿ ಸಿನಿಮಾ ಸಕ್ಸಸ್ ಸಂಭ್ರಮದಲ್ಲಿದ್ದಾರೆ. ಇತ್ತೀಚೆಗೆ ವಿಜಯ್ ದೇವರಕೊಂಡ ಅವರು ಬಡ ಕುಟುಂಬಕ್ಕೆ ದಾನ ನೀಡುವುದಾಗಿ ಹೇಳಿದ್ದರು.
“ನೀವು ಸಂತೋಷವಾಗಿದ್ದೀರಿ ಮತ್ತು ನಾನು ಸಂತೋಷವಾಗಿದ್ದೇನೆ. ನಾನು ಏನನ್ನಾದರೂ ಮಾಡುವ ಯೋಚನೆಯಲ್ಲಿದ್ದೇನೆ. ನನಗೆ ಗೊತ್ತಿಲ್ಲ ಇದು ಸರಿಯೋ, ತಪ್ಪೋ ಎಂದು. ಆದರೆ ಅದನ್ನು ಮಾಡದೆ ಇದ್ದರೆ ನನಗೆ ಸರಿಯಾಗಿ ನಿದ್ರೆ ಬರುವುದಿಲ್ಲ. ನಿಮ್ಮೊಂದಿಗೆ ಸಂತೋಷವನ್ನು ಹಂಚಿಕೊಳ್ಳಲು ನಾನು ಬಯಸುತ್ತೇನೆ. ʼಖುಷಿʼ ಸಿನಿಮಾದ ಸಂಭಾವನೆಯಿಂದ 1 ಕೋಟಿ ರೂಪಾಯಿಯನ್ನು ನಾನು 100 ಬಡ ಕುಟುಂಬಕ್ಕೆ ಹಂಚಲು ನಿರ್ಧರಿಸಿದ್ದೇನೆ. ಈ ಕುರಿತು ನಾನು 100 ಬಡ ಕುಟುಂಬಗಳನ್ನು ಮೊದಲು ಆಯ್ಕೆ ಮಾಡಲಿದ್ದೇನೆ. 100 ಕುಟುಂಬಕ್ಕೆ ತಲಾ 1 ಲಕ್ಷ ರೂಪಾಯಿಯ ಚೆಕ್ ನ್ನು ನೀಡುತ್ತೇನೆ. ನನ್ನ ಯಶಸ್ಸು, ನನ್ನ ಸಂತೋಷ ಮತ್ತು ನನ್ನ ಸಂಬಳವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಬೇಕು.” ಎಂದಿದ್ದರು.
ನಟನ ಈ ಮಾನವೀಯ ಗುಣವನ್ನು ಅನೇಕರು ಮೆಚ್ಚಿಕೊಂಡಿದ್ದರು. ಇದೀಗ ಇದೇ ವಿಚಾರವಾಗಿ ವಿತರಣೆ ಸಂಸ್ಥೆಯೊಂದು ದೇವರಕೊಂಡ ಅವರ ಬಳಿ ಪರಿಹಾರ ಮೊತ್ತವನ್ನು ಕೇಳಿದೆ.
ವಿಜಯ್ ದೇವರಕೊಂಡ ಅಭಿನಯಿಸಿದ್ದ “ವರ್ಲ್ಡ್ ಫೇಮಸ್ ಲವರ್” ಸಿನಿಮಾವನ್ನು ವಿತರಣೆ ಮಾಡಿದ್ದ ಅಭಿಷೇಕ್ ಪಿಕ್ಚರ್ಸ್ ಟ್ವೀಟ್ ಮೂಲಕ ದೇವರಕೊಂಡ ಅವರ ಬಳಿ ಪರಿಹಾರ ಮೊತ್ತವನ್ನು ಕೇಳಿದೆ.
“ವಿಜಯ್ ದೇವರಕೊಂಡ ಅವರೇ “ವರ್ಲ್ಡ್ ಫೇಮಸ್ ಲವರ್” ಸಿನಿಮಾವನ್ನು ವಿತರಣೆ ಮಾಡಿ ನಾವು 8 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದೆ. ಆದರೆ ಈ ಬಗ್ಗೆ ಯಾರೂ ಕೂಡ ನಮಗೆ ಪ್ರತಿಕ್ರಿಯೆ ನೀಡಿಲ್ಲ. ಈಗ ನೀವು ದೊಡ್ಡ ಮನಸ್ಸಿನಿಂದ ಬಡ ಕುಟುಂಬಕ್ಕೆ 1 ಕೋಟಿ ರೂ.ವನ್ನು ನೀಡಲು ಹೊರಟಿದ್ದೀರಿ. ನಮ್ಮನ್ನು ಹಾಗೂ ವಿತರಕರ ಕುಟುಂಬಕ್ಕೆ ಪರಿಹಾರ ನೀಡಿ ಉಳಿಸಿ ಎಂದು ನಿಮ್ಮಲ್ಲಿ ಮನವಿ ಮಾಡುತ್ತಿದ್ದೇವೆ” ಎಂದು ಟ್ವೀಟ್ ಅಭಿಷೇಕ್ ಪಿಕ್ಚರ್ಸ್ ಟ್ವೀಟ್ ಮಾಡಿದೆ.
ಸಿನಿಮಾ ಸೋತರೆ ನಾಯಕನ ಬಳಿ ಪರಿಹಾರ ಕೇಳುತ್ತಾರೆ. ಹಿಟ್ ಆದರೆ ಅದರ ಲಾಭವನ್ನು ಹಂಚಿಕೊಳ್ಳುವುದಿಲ್ಲ ಎಂದು ನಟನ ಪರವಾಗಿ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.
2020 ರಲ್ಲಿ ಬಿಡುಗಡೆಯಾದ ವಿಜಯ್ ದೇವರಕೊಂಡ ಅವರ ‘ವರ್ಲ್ಡ್ ಫೇಮಸ್ ಲವರ್’ ಸಿನಮಾವನ್ನು ಕ್ರಾಂತಿ ಮಾಧವ್ ಅವರು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ರಾಶಿ ಖನ್ನಾ, ಐಶ್ವರ್ಯಾ ರಾಜೇಶ್, ಕ್ಯಾಥರೀನ್ ತ್ರೇಸಾ ಮತ್ತು ಇಸಾಬೆಲ್ಲೆ ಲೈಟ್ ಕಾಣಿಸಿಕೊಂಡಿದ್ದಾರೆ. ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಟೀಕೆಗೆ ಗುರಿಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ