Vijay Deverakonda: ‘ಲೈಗರ್’ ನನ್ನ ಮೊದಲ ಸೋಲಲ್ಲ.. ಫ್ಲಾಪ್ ಬಗ್ಗೆ ಮೌನ ಮುರಿದ ದೇವರಕೊಂಡ
Team Udayavani, Aug 10, 2023, 8:50 AM IST
ಹೈದರಾಬಾದ್: ಟಾಲಿವುಡ್ ಸ್ಟಾರ್ ವಿಜಯ್ ದೇವಕೊಂಡ ಸದ್ಯ ‘ಖುಷಿ’ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ದೇವರಕೊಂಡ – ಸಮಂತಾ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ‘ಖುಷಿ’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಲವ್ ಕಮ್ ಫ್ಯಾಮಿಲಿ ಡ್ರಾಮಾದ ಕಥೆ ಸಿನಿಮಾದಲ್ಲಿರಲಿದೆ ಎನ್ನುವುದನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ.
ವಿಜಯ್ ದೇವರಕೊಂಡ ಅವರ ಕಳೆದ ಕೆಲ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಹೇಳಿಕೊಂಡ ಮಟ್ಟಿಗೆ ಸದ್ದು ಮಾಡಿಲ್ಲ. ವಿಜಯ್ ಅವರ ವೃತ್ತಿ ಬದುಕಿನಲ್ಲಿ ದೊಡ್ಡ ಸೋಲು ಕೊಟ್ಟ ಸಿನಿಮಾವನ್ನು ನೋಡಿದಾಗ ಮೊದಲಿಗೆ ಕಣ್ಣಮುಂದೆ ಬರುವುದು ಪ್ಯಾನ್ ಇಂಡಿಯಾ ‘ಲೈಗರ್’ ಸಿನಿಮಾ.
ಪುರಿ ಜಗನ್ನಾಥ್ ನಿರ್ದೇಶನದ ‘ಲೈಗರ್’ ವಿಜಯ್ ದೇವರಕೊಂಡ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ ಸಿನಿಮಾವಾಗಿತ್ತು. ಸಿನಿಮಾ ದೊಡ್ಡ ಸೋಲಾಗುವುದರ ಜೊತೆಗೆ ನಿರ್ಮಾಪಕರಿಗೂ ಹಾಕಿದ ಹಣ ವಾಪಸು ತರಲು ಪರದಾಟ ನಡೆಸಿತು.
ಹೈದರಾಬಾದ್ ನಲ್ಲಿ ನಡೆದ ‘ಖುಷಿ’ ಸಿನಿಮಾದ ಟ್ರೇಲರ್ ರಿಲೀಸ್ ಸಮಾರಂಭದಲ್ಲಿ ‘ಲೈಗರ್’ ಸೋಲಿನ ಬಗ್ಗೆ ಮಾತನಾಡಿದ್ದಾರೆ.
“ಸಿನಿಮಾವೊಂದು ಓಡದಿದ್ದರೆ ಅಥವಾ ಸೋತರೆ ಆಗ ಬೇಸರವಾಗುತ್ತದೆ. ಈ ಅನುಭವ ನನಗೆ ಆಗಿದೆ. ಈ ಹಿಂದೆ ನನ್ನ ಹಲವು ಸಿನಿಮಾಗಳು ಸೋತಿವೆ. ‘ಲೈಗರ್’ ನನ್ನ ಮೊದಲ ಸೋಲಲ್ಲ” ಎಂದರು.
”ಲೈಗರ್ ಗೂ ಮುನ್ನ ಸೋಲು ಹಾಗೂ ಗೆಲುವು ಕೂಡ ನನಗೆ ಸಿಕ್ಕಿದೆ. ನಾನು ಸೋಲು ಹಾಗೂ ಗೆಲುವು ಎರಡನ್ನೂ ಅನುಭವಿಸುವುದನ್ನು ಮುಂದುವರೆಸುತ್ತೇನೆ. ಯಾಕೆಂದರೆ ಕೊನೆಯದಾಗಿ ನಾವು ಕಥೆಗಳನ್ನು ಹೇಳಲು ಯತ್ನಸುತ್ತೇವೆ. ನಾನು ವಿಭಿನ್ನವಾಗಿ ಏನೇನಾದರೂ ಹೇಳಲು ಇಚ್ಛಿಸುವವನು ಮತ್ತು ಅದಕ್ಕೆ ನಾನು ಬದ್ಧವಾಗಿದ್ದೇನೆ” ಎಂದರು.
“ಸಿನಿಮಾ ಓಡದಿದ್ದರೆ ನನಗೆ ಬೇಸರವಾಗುತ್ತದೆ. ಆದರೆ ಅದು ನನ್ನ ಧೈರ್ಯ ಕುಗ್ಗುವಂತೆ ಮಾಡಲ್ಲ. ಸಿನಿಮಾ ಸೋತರೂ ನಾನು ಆ ಸೋಲಿಗೆ ಹೆದರಲ್ಲ. ನನ್ನ ಪ್ರಯತ್ನಕ್ಕೆ ಅದು ತಡೆಯಾಗಲ್ಲ.ನಾನು ಎಡವಿ ಬೀಳಲು ಹೆದರಲ್ಲ” ಎಂದು ಹೇಳಿದರು.
‘ಖುಷಿ’ ಸಿನಿಮಾ ಸೆಪ್ಟೆಂಬರ್ 1 ರಂದು ರಿಲೀಸ್ ಆಗಲಿದೆ. ಆ ಬಳಿಕ ದೇವರಕೊಂಡ “ವಿಡಿ12” ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ