ಒಳ್ಳೆಯ ಉದ್ದೇಶ ಪ್ರಯತ್ನ ವಿಫ‌ಲ


Team Udayavani, Nov 3, 2018, 11:12 AM IST

kannada-deshadol.jpg

ಅಚಾನಕ್ಕಾಗಿ ಸಿಗುವ “ಕನ್ನಡ ದೇಶದೊಳ್‌’ ಎಂಬ ಪುರಾತನ ತಾಳೆಗರಿ ಗ್ರಂಥದಲ್ಲಿ ಕನ್ನಡ ನಾಡು-ನುಡಿ, ಜನ-ಮನಕ್ಕೆ ಸಂಬಂಧಿಸಿದ ಹತ್ತಾರು ಸಂಗತಿಗಳು ಅಡಕವಾಗಿರುತ್ತದೆ. ಈ ನಿಗೂಢ ಸಂಗತಿಗಳ ಅಧ್ಯಯನಕ್ಕೆ ಇಳಿಯುವ ಕನ್ನಡ ಸಂಶೋಧಕ ಒಂದೊಂದೆ ದೃಶ್ಯದಲ್ಲಿ ಗ್ರಂಥದ ಅಸಲಿಯತ್ತನ ತೆರೆದಿಡುತ್ತಾ ಹೋಗುತ್ತಾನೆ. ಇದರ ನಡುವೆಯೇ ಕರ್ನಾಟಕವನ್ನು ಕಣ್ತುಂಬಿಕೊಳ್ಳಲು ಇಂಗ್ಲೆಂಡ್‌ನಿಂದ ಬರುವ ಪ್ರವಾಸಿ ಜೋಡಿಯೊಂದಕ್ಕೆ, ಆಟೋರಿಕ್ಷಾ ಚಾಲಕನೊಬ್ಬ ಜೊತೆಯಾಗುತ್ತಾನೆ.

ಅವನೊಂದಿಗೆ ಆಟೋರಿಕ್ಷಾ ಏರುವ ವಿದೇಶಿಗರಿಗೆ, ಆ ಚಾಲಕ ಪ್ರಯಾಣದ ನಡುವೆಯೇ ಕರ್ನಾಟಕ ದರ್ಶನ ಮಾಡಿಸುತ್ತಾನೆ! ಮತ್ತೂಂದೆಡೆ ಕನ್ನಡ ಪರವಾಗಿ ಹೋರಾಟ ಮಾಡುವ ಯುವಕನೊಬ್ಬ ಕನ್ನಡಕ್ಕಾಗಿ ಕೈ ಎತ್ತಿದಾಗಲೆಲ್ಲ, ಒದೆ ತಿನ್ನುತ್ತಿರುತ್ತಾನೆ. ಯಾಕೆ ಹೀಗಾಗುತ್ತಿದೆ ಎಂದು ಗೊತ್ತಾಗುವುದರೊಳಗೆ ಬೀದರ್‌ನಿಂದ ಚಾಮರಾಜನಗರ, ಕಾರವಾರದಿಂದ ಕೋಲಾರದವರೆಗೆ ಇಡೀ ಕರ್ನಾಟಕ ತೆರೆಮೇಲೆ ಬಂದು ಹೋಗಿರುತ್ತದೆ. ಇದು ಈ ವಾರ ತೆರೆಗೆ ಬಂದಿರುವ “ಕನ್ನಡ ದೇಶದೊಳ್‌’ ಚಿತ್ರದ ಸಂಕ್ಷಿಪ್ತ ಚಿತ್ರಣ. 

ಸುಮಾರು ಮೂರು ವರ್ಷಗಳಿಂದ ಕಾರು, ಬಸ್ಸು, ಆಟೋರಿಕ್ಷಾಗಳ ಮೇಲೆ ರಾರಾಜಿಸುತ್ತಿದ್ದ “ಕನ್ನಡ ದೇಶದೊಳ್‌’ ಎಂಬ ಶೀರ್ಷಿಕೆ ಚಲನಚಿತ್ರಕ್ಕೆ ಸಂಬಂಧಿಸಿದ್ದು, ಎಂದು ಪ್ರೇಕ್ಷಕರಿಗೆ ಗೋತ್ತಾಗುವ ಮುನ್ನವೇ, ಚಿತ್ರ ತೆರೆಗೆ ಬಂದಿದೆ. ಇಡೀ ಚಿತ್ರದಲ್ಲಿ ಕನ್ನಡನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯ ಚಿತ್ರಣವನ್ನು ಚಿತ್ರದ ಮೂಲಕ ತೆರೆಮೇಲೆ ತಂದಿರುವ ಚಿತ್ರತಂಡದ ಉದ್ದೇಶ ಉತ್ತಮವಾಗಿದ್ದರೂ, ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಅದರಲ್ಲೂ ಕನ್ನಡ ಎಂದರೆ ಅದರ ಹಿಂದೆ ನೂರಾರು ಸಂಗತಿಗಳು ಎಳೆಎಳೆಯಾಗಿ ತೆರೆದುಕೊಳ್ಳುತ್ತವೆ.

ಅನುಭವಕ್ಕೆ ಬರುವ, ತರ್ಕಕ್ಕೆ ನಿಲುಕದ ಅದೆಷ್ಟೋ ಅಸಂಗತ ಸತ್ಯಗಳಿರುತ್ತವೆ. ಇಂದಿಗೂ ಚರ್ಚೆಯಾಗುತ್ತಿರುವ ಅಸಂಖ್ಯಾತ ಸಂಕೀರ್ಣ, ಸೂಕ್ಷ್ಮ ಸಂವೇದನೆಗಳಿವೆ. ಅವೆಲ್ಲವನ್ನೂ ಚಲನಚಿತ್ರದ ಮೂಲಕ ಎರಡೂವರೆ ಗಂಟೆಗಳಲ್ಲಿ ಕಟ್ಟಿಕೊಡುವಲ್ಲಿ ನಿರ್ದೇಶಕರು ಎಡವಿದ್ದಾರೆ. ಅದರಲ್ಲೂ ಚಲನಚಿತ್ರ ಎಂಬುದಕ್ಕೆ ಅದರದ್ದೇ ಆದ ವ್ಯಾಕರಣವಿರುತ್ತದೆ. ಅಲ್ಲಿ ಎಷ್ಟು ವಾಸ್ತವ, ಸತ್ಯ ಸಂಗತಿಗಳನ್ನು ಚಿತ್ರಿಸುತ್ತೀರಿ ಎನ್ನುವುದಕ್ಕಿಂತ, ಎಷ್ಟು ಪರಿಣಾಮಕಾರಿಯಾಗಿ ನಿರೂಪಿಸುತ್ತೀರಿ ಎಂಬುದೇ ಮುಖ್ಯವಾಗುತ್ತದೆ.

ಸ್ವಲ್ಪ ವ್ಯಾಕರಣ ತಪ್ಪಿದರೂ, ಚಲನಚಿತ್ರ ಎಂಬುದು ಸಾಕ್ಷ್ಯಚಿತ್ರ ಎನ್ನುವ ಹಣೆಪಟ್ಟಿಕಟ್ಟಿಕೊಳ್ಳುವ ಅಪಾಯವಿರುತ್ತದೆ. ಜೊತೆಗೆ ಈ ತರಹದ ಕಥೆಗಳನ್ನು ಚಿತ್ರವಾಗಿ ನೋಡಬೇಕೆ, ಚರ್ಚೆಯಾಗಿ ನೋಡಬೇಕೆ ಎಂಬ ಗೊಂದಲಗಳಿಗೆ ಉತ್ತರವೇ ಸಿಗುವುದಿಲ್ಲ. ಇನ್ನು “ಕನ್ನಡ ದೇಶದೊಳ್‌’ ಚಿತ್ರದ ನಿರೂಪಣೆ, ಕಲಾವಿದರ ಅಭಿನಯ ಯಾವುದೂ ಪ್ರೇಕ್ಷಕರ ಮನಸ್ಸಿನಲ್ಲಿ ಗಟ್ಟಿಯಾಗಿ ಉಳಿಯುವುದಿಲ್ಲ. ಕನ್ನಡದ ಹೆಸರಿನಲ್ಲಿ ಕೆಲವು ದೃಶ್ಯಗಳು ಮತ್ತು ಪಾತ್ರಗಳ ಅತಿಯಾದ ವೈಭವೀಕರಣ, ಕೆಲವು ಕಡೆಗಳಲ್ಲಿ ನೋಡುಗರನ್ನು ನಗಿಸಲೇಬೇಕೆಂಬ ನಿರ್ದೇಶಕರ ಹಠ ಚಿತ್ರವನ್ನು ಹಳಿ ತಪ್ಪಿಸಿದೆ. ಇಡೀ ಕರ್ನಾಟಕವನ್ನು ತೆರೆಮೇಲೆ ತೋರಿಸುವ ಉತ್ಸಾಹದಲ್ಲಿ ಚಿತ್ರತಂಡ ಚಿತ್ರಕಥೆಯ ಕಡೆಗೆ ಗಮನಕೊಟ್ಟಿಲ್ಲ.

ಚಿತ್ರ: ಕನ್ನಡ ದೇಶದೊಳ್‌
ನಿರ್ದೇಶನ: ಅವಿರಾಮ್‌ ಕಂಠೀರವ
ನಿರ್ಮಾಣ: ಜೆ.ಎಸ್‌.ಎಂ ಪ್ರೊಡಕ್ಷನ್ಸ್‌, 
ತಾರಾಗಣ: ಸುಚೇಂದ್ರ ಪ್ರಸಾದ್‌, ತಾರಕ್‌ ಪೊನ್ನಪ್ಪ, ಜೆನ್‌ ವೋಲ್ಕೋವಾ, ಹರೀಶ್‌ ಅರಸು, ನಜØರ್‌ ಅಲಿ, ಟೆನ್ನಿಸ್‌ ಕೃಷ್ಣ, ವೈಜನಾಥ್‌ ಬಿರಾದಾರ್‌, ಸನತ್‌, ಶಿವು ಇತರರು. 

* ಜಿ.ಎಸ್‌ ಕಾರ್ತಿಕ ಸುಧನ್‌ 

ಟಾಪ್ ನ್ಯೂಸ್

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.