ಅದೇ ರಾಗ ಹೊಸ ಹಾಡು


Team Udayavani, Apr 22, 2018, 11:32 AM IST

krishna-(1).jpg

“ಸ್ವಲ್ಪ ಕಿಟಕಿ ತೆಗೀತೀರಾ …’ ಅವಳು ಕೇಳುತ್ತಿದ್ದಂತೆಯೇ, ಪಕ್ಕದಲ್ಲೇ ಕುಳಿತಿದ್ದ ಅವನು ಕಿಟಕಿ ತೆಗೆದುಕೊಡುತ್ತಾನೆ. ಥ್ಯಾಂಕ್ಸ್‌ ಹೇಳುತ್ತಾಳೆ ಅವಳು. ಕ್ರಮೇಣ ಇಬ್ಬರ ನಡುವೆ ಪರಿಚಿಯ ವಿನಮಯವಾಗುತ್ತದೆ. ನಾಲ್ಕಾರು ದಿನಗಳು ಅದೇ ಬಸ್ಸಿನಲ್ಲಿ ಒಟ್ಟಿಗೇ ಪ್ರಯಾಣ ಮಾಡಿದ ಮೇಲೆ ಅವರಿಬ್ಬರ ನಡುವೆ ಸ್ನೇಹ ಬೆಳೆಯುತ್ತದೆ. ಆ ಸ್ನೇಹ ಪ್ರೀತಿಗೆ ತಿರುಗಬೇಕು ಎನ್ನುವಷ್ಟರಲ್ಲಿ, ಅವನಿಗೆ ಒಂದು ರಹಸ್ಯ ತಿಳಿಯುತ್ತದೆ.

ಅದೇನೆಂದರೆ, ಅವಳು ಕುರುಡಿ ಎಂದು. ಅವನಿಗದು ದೊಡ್ಡ ಮಟ್ಟದ ಆಘಾತ. ಏಕೆಂದರೆ, ಅವನೂ ಒಬ್ಬ ಕುರುಡ. ತನಗೆ ಇಲ್ಲದ ದೃಷ್ಟಿಯನ್ನು, ತನ್ನ ಸಂಗಾತಿಯ ಕಣ್ಣಿನಲ್ಲಿ ನೋಡಬೇಕು ಎಂಬುದು ಅವನ ಆಸೆ. ಆದರೆ, ಯಾವಾಗ ತಾನು ಇಷ್ಟಪಟ್ಟವಳಿಗೂ ದೃಷ್ಟಿ ಇಲ್ಲ ಎಂದು ಗೊತ್ತಾಗುತ್ತದೋ, ಅವನ ಎದೆಯೊಡೆಯುತ್ತದೆ …ಅಂಧರ ಪ್ರೇಮಕಥೆಗಳು ಕನ್ನಡಕ್ಕೆ ಹೊಸದೇನಲ್ಲ. ಕಳೆದ ವರ್ಷವಷ್ಟೇ “ರಾಗ’ ಎಂಬ ಚಿತ್ರ ಬಂದಿತ್ತು.

“ಕೃಷ್ಣ-ತುಳಸಿ’ ಸಹ ಅದೇ ಸಾಲಿಗೆ ಸೇರುವ ಚಿತ್ರವಾದರೂ, ಇದು ಮಿಕ್ಕ ಚಿತ್ರಗಳಿಗೆ ಹೋಲಿಸುವುದು ತಪ್ಪು. ಅದರಲ್ಲೂ ಮೊದಲ ಬಾರಿಗೆ ಚಿತ್ರ ನಿರ್ದೇಶನ ಮಾಡಿರುವವರು, ಇಂಥದ್ದೊಂದು ಚಿತ್ರ ಮಾಡಬಹುದು ಎಂದು ನಿರೀಕ್ಷಿಸುವುದು ಇನ್ನೂ ಕಷ್ಟ. ಆದರೆ, ಎಲ್ಲರ ನಿರೀಕ್ಷೆಗಳನ್ನೂ ಸುಳ್ಳು ಮಾಡಿ, ಮೊದಲ ಪ್ರಯತ್ನದಲ್ಲೇ ಗಮನಸೆಳೆಯುತ್ತಾರೆ ಸುಖೇಶ್‌ ನಾಯಕ್‌. ಒಂದು ಸರಳ ಪ್ರೇಮಕಥೆಯನ್ನು, ಅಷ್ಟೇ ಸರಳವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ.

ಮಡಿಕೇರಿಯ ಅಂಧ ಯುವಕನಿಗೂ, ಮೈಸೂರಿನ ಅಂಧ ಯುವತಿಗೂ ಲವ್‌ ಆಗುತ್ತದೆ. ಆದರೆ, ಇಬ್ಬರಿಗೂ ತಾವು ಪ್ರೀತಿಸುವವರಿಗೆ ಕಣ್ಣಿಲ್ಲ ಎಂಬುದು ಗೊತ್ತಿರುವುದಿಲ್ಲ. ಹಾಗೆಯೇ ಇಬ್ಬರೂ ತಾವು ಪ್ರೀತಿಸುವವರ ಕಣ್ಣಲ್ಲಿ ಜಗತ್ತನ್ನು ನೋಡಬೇಕು ಎಂಬ ಆಸೆ ಇಟ್ಟುಕೊಂಡಿರುತ್ತಾರೆ. ಹೀಗಿರುವಾಗ ಇಬ್ಬರಿಗೂ ತಾವು ಪ್ರೀತಿಸುವವರಿಗೆ ಕಣ್ಣಿಲ್ಲ ಎಂದು ಗೊತ್ತಾದರೆ? ಆ ಪ್ರೇಮಕಥೆಯ ಎಂಡಿಂಗ್‌ ಹೇಗಿರಬಹುದು ಮತ್ತು ಏನಾಗಬಹುದು ಎಂದು ಊಹಿಸಿ?

ಊಹಿಸುವುದಕ್ಕಿಂತ ಒಮ್ಮೆ ಚಿತ್ರ ನೋಡುವುದು ಬೆಸ್ಟು. ಏಕೆಂದರೆ, ಇಲ್ಲೊಂದು ನವಿರಾದ ಪ್ರೇಮಕಥೆಯಿದೆ, ರಮ್ಯವಾದ ಮೈಸೂರಿದೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಒಂದೊಳ್ಳೆಯ ಸಂದೇಶವಿದೆ. ಇವೆಲ್ಲವನ್ನೂ ಸೇರಿಸಿ ಚಿತ್ರ ಮಾಡಿದ್ದಾರೆ ಸುಖೇಶ್‌. “ಕೃಷ್ಣ-ತುಳಸಿ’ ಒಂದೊಳ್ಳೆಯ ಚಿತ್ರವಾಗಲಿಕ್ಕೆ ಹಲವರ ಶ್ರಮವಿದೆ. ಇಡೀ ಚಿತ್ರವನ್ನು ಆವರಿಸಿಕೊಳ್ಳುವುದು ಸಂಚಾರಿ ವಿಜಯ್‌ ಮತ್ತು ಮೇಘಶ್ರೀ.

ಇಬ್ಬರೂ ತಮ್ಮ ಪಾತ್ರಕ್ಕೆ ಅದ್ಭುತವಾಗಿ ನ್ಯಾಯ ಸಲ್ಲಿಸಿದ್ದಾರೆ. ಮಿಕ್ಕಂತೆ ರಮೇಶ್‌ ಭಟ್‌, ಪದ್ಮಜಾ ರಾವ್‌, ಕುರಿ ಪ್ರತಾಪ್‌, ತಬಲಾ ನಾಣಿ, ಗುರುರಾಜ್‌ ಹೊಸಕೋಟೆ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಮೊದಲಾರ್ಧದ ಪೂರಾ ನಾಯಕಿ ಅಂಧೆ ಎಂದು ಗೊತ್ತಾಗದಂತೆ, ಆಕೆಯನ್ನು ವಿವಿಧ ಆ್ಯಂಗಲ್‌ಗ‌ಳಲ್ಲಿ ಚಿತ್ರಿಸಿರುವ ಛಾಯಾಗ್ರಾಹಕ ನವೀನ್‌ ಅಕ್ಷಿ ಚಿತ್ರದ ಇನ್ನೊಂದು ಹೈಲೈಟ್‌.

ಕಿರಣ್‌ ರವೀಂದ್ರನಾಥ್‌ ಅವರ ಸಂಗೀತ, ದೀಪು ಕುಮಾರ್‌ ಅವರ ಸಂಕಲನ ಎಲ್ಲವೂ ಹದವಾಗಿದೆ. “ಭರವಸೆ ಇರಬೇಕು. ಆಗಲೇ ವಿಸ್ಮಯ ಆಗೋದು …’ ಎಂಬ ಸಂಭಾಷಣೆ ಆಗಾಗ ಬರುತ್ತದೆ. ಯಾವುದೇ ನಿರೀಕ್ಷೆ ಇಲ್ಲದೆ, ಭರವಸೆ ಇಟ್ಟು ಚಿತ್ರ ನೋಡಲು ಹೋದರೆ, ವಿಸ್ಮಯವಾಗೋದು ಖಂಡಿತಾ.

ಚಿತ್ರ: ಕೃಷ್ಣ-ತುಳಸಿ
ನಿರ್ಮಾಣ: ಎಂ. ನಾರಾಯಣಸ್ವಾಮಿ
ನಿರ್ದೇಶನ: ಸುಖೇಶ್‌ ನಾಯಕ್‌
ತಾರಾಗಣ: ಸಂಚಾರಿ ವಿಜಯ್‌, ಮೇಘಶ್ರೀ, ರಮೇಶ್‌ ಭಟ್‌, ಪದ್ಮಜಾ ರಾವ್‌, ಕುರಿ ಪ್ರತಾಪ್‌, ತಬಲಾ ನಾಣಿ, ಗುರುರಾಜ್‌ ಹೊಸಕೋಟೆ ಮುಂತಾದವರು

* ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vidyarthi Vidyarthiniyare Movie Review

Vidyarthi Vidyarthiniyare Review;ವಿದ್ಯಾರ್ಥಿಗಳ ಆಟದೊಳಗೊಂದು ಪಾಠ

Not Out movie review

Not Out movie review; ಮಧ್ಯಮ ಹುಡುಗನ ಕಾಸು-ಕನಸು

Hejjaru Movie Review

Hejjaru Movie Review; ಹೆಜ್ಜಾರು ಎಂಬ ಹೊಸ ಕೌತುಕ

Hiranya

Hiranya Review; ಆ್ಯಕ್ಷನ್‌-ಥ್ರಿಲ್ಲರ್‌ನಲ್ಲಿ ನಿರ್ದಯಿ ಪಯಣ

Jigar movie review

Jigar movie review; ಆ್ಯಕನ್‌ ಡ್ರಾಮಾದಲ್ಲೊಂದು ಪ್ರೇಮ್‌ ಕಹಾನಿ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.