IFFI;ದುರದೃಷ್ಟವೆಂಬಂತೆ ನನಗೆ ಲಗಾನ್ ನಲ್ಲಿ ನಟಿಸಲು ಸಾಧ್ಯವಾಗಲಿಲ್ಲ: ರಾಣಿ ಮುಖರ್ಜಿ
Team Udayavani, Nov 27, 2023, 7:33 PM IST
ಪಣಜಿ: ದುರದೃಷ್ಟವೆಂಬಂತೆ ನನಗೆ ಅಮೀರ್ ಖಾನ್ ಅವರ 2001 ರಲ್ಲಿ ಬಿಡುಗಡೆಯಾದ ಲಗಾನ್ ಚಲನಚಿತ್ರ ದ ಭಾಗವಾಗಲು ಸಾಧ್ಯವಾಗಲಿಲ್ಲ ಎಂದು ಬಾಲಿವುಡ್ ನ ಖ್ಯಾತ ನಟಿ ರಾಣಿ ಮುಖರ್ಜಿ ಹೇಳಿದ್ದಾರೆ.
ಪಣಜಿಯಲ್ಲಿ ನಡೆಯುತ್ತಿರುವ 54 ನೇಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಡೆಲಿವರಿಂಗ್ ಕಂಪೆಲಿಂಗ್ ಪರ್ಫಾರ್ಮೆನ್ಸ್’ ಎಂಬ ಸಂವಾದದಲ್ಲಿ ಮಾತನಾಡಿ ‘ನಾನು ಬಲಿಷ್ಠ ಭಾರತೀಯ ಮಹಿಳೆಯರ ಪಾತ್ರವನ್ನು ನಿರ್ವಹಿಸಲು ತೃಪ್ತಿ ಹೊಂದಿದ್ದೇನೆ. ಆದರೆ, ಯಾವುದೇ ಪಾತ್ರವನ್ನು ಒಪ್ಪಿಕೊಳ್ಳುವ ಮುನ್ನ ಅದನ್ನು ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ಅರ್ಥ ಮಾಡಿಕೊಳ್ಳಬೇಕು.ಅಂದಾಗ ಕೆಲಸ ಮಾಡುವಾಗ ತುಂಬಾ ಸಹಾಯವಾಗುತ್ತದೆ ಎಂದರು.
ಮಹಿಳಾ ಪ್ರಧಾನ ಚಿತ್ರಗಳ ಬಗ್ಗೆ ಪ್ರತಿಕ್ರಿಯಿಸಿ, ನನ್ನ ಪ್ರೇಕ್ಷಕರು ಎಲ್ಲಾ ರೀತಿಯ ಪಾತ್ರಗಳಿಗೆ ನನ್ನನ್ನು ಬೆಂಬಲಿಸಿದ್ದಾರೆ ಮತ್ತು ಪ್ರೀತಿಸಿದ್ದಾರೆ. ನಟರು ಮನಸ್ಸಿನಲ್ಲಿ ಚಿಕ್ಕವರಿರಬಹುದು. ನಾವು ಯಾವುದೇ ಪಾತ್ರವನ್ನು ಮಾಡಬಹುದು, ಆದರೆ ನಮ್ಮ ಪ್ರೇಕ್ಷಕರಿಗೆ ಪಾತ್ರಗಳೊಂದಿಗೆ ಸ್ಥಿರವಾಗಿರಲು ನಾವು ಶ್ರಮಿಸಬೇಕು. ನನ್ನ ಮುಖ್ಯ ಗುರಿ 20 ವರ್ಷಗಳ ಹಿಂದೆ ನಾನು ಮಾಡಿದಂತೆ ಹುಡುಗಿಯಂತೆ ಕಾಣುವುದು. ಪ್ರೇಕ್ಷಕರು ನನ್ನ ಕೆಲಸವನ್ನು ನೋಡಲು ಮತ್ತು ಸೌಂದರ್ಯವನ್ನು ನೋಡಲು ಕುತೂಹಲ ಹೊಂದಿದ್ದಾರೆ. ಅದಕ್ಕಾಗಿಯೇ ನಾನು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುತ್ತೇನೆ ಎಂದರು.
”ಲಗಾನ್” ಮಾತ್ರ ನಾನು ಮಾಡುವುದನ್ನು ತಪ್ಪಿಸಿಕೊಂಡಿದ್ದೆ. ನಾನು ಬೇರೆ ಚಿತ್ರಗಳೊಂದಿಗೆ ಒಪ್ಪಂದ ಮಾಡಿಕೊಂಡ ಕಾರಣ ಮತ್ತು ಡೇಟ್ ಸಮಸ್ಯೆಯಿಂದ ‘ಲಗಾನ್’ ಮಾಡಲು ಸಾಧ್ಯವಾಗಲಿಲ್ಲ” ಎಂದರು.
ಅಭಿನಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಕುರಿತು ಮಾತನಾಡಿ, ದಿವಂಗತ ದಿಲೀಪ್ ಕುಮಾರ್ ಅವರ ನಟನೆಯನ್ನು ನೋಡಿ ಆಳವಾದ ನಟನೆಗೆ ಸ್ಫೂರ್ತಿ ಸಿಕ್ಕಿತು. ನಾನು ಚಿತ್ರದಲ್ಲಿ ನಟಿಸುತ್ತಿರುವ ನನ್ನ ಪಾತ್ರಗಳಿಂದ ಸ್ಫೂರ್ತಿ ಪಡೆದಿದ್ದೇನೆ ಎಂದರು. ಭಾರದ್ವಾಜ್ ರಂಗನ್ ಅವರು ರಾಣಿ ಮುಖರ್ಜಿ ಅವರೊಂದಿಗೆ ಸಂವಾದ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು