BBK10: ಹೊರಗಡೆ ಇದ್ದ ಸೌಂಡ್ ಇಲ್ಲೇನಿಲ್ಲ.. ಕಿಚ್ಚನ ಟಾಂಗ್ ಗೆ ಮೌನವಾದ ರಕ್ಷಕ್
ಹಳೆ ಸ್ಪರ್ಧಿಗಳ ಪ್ರಕಾರ ಮೊದಲು ಹೊರಬರುವುದು ಯಾರು?
Team Udayavani, Jan 27, 2024, 8:00 PM IST
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ -10 ಫಿನಾಲೆ ಆರಂಭವಾಗಿದೆ. ಕಿಚ್ಚ ಸುದೀಪ್ ಸ್ಟೈಲಿಸ್ಟ್ ಲುಕ್ ನಲ್ಲಿ ವೇದಿಕೆಗೆ ಬಂದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿ ಎಲಿಮಿನೇಟ್ ಆದ ಸ್ಪರ್ಧಿಗಳನ್ನು ಮೊದಲನೆಯದಾಗಿ ಕಿಚ್ಚ ಮಾತನಾಡಿಸಿದರು.
ಹೊರಗಡೆ ಯಾವ ರೀತಿಯ ರೆಸ್ಪಾನ್ಸ್ ನಿಮಗೆ ಸಿಕ್ಕಿತು ಎಂದಾಗ ಒಬ್ಬೊಬ್ಬರಾಗಿ ತಮ್ಮ ಮಾತುಗಳಲ್ಲಿ ಅನುಭವವನ್ನು ಹಂಚಿಕೊಂಡರು.
ರಕ್ಷಕ್ ಬುಲೆಟ್ ಎಲಿಮಿನೇಟ್ ಆದ ಬಳಿಕ, ನಾನಾ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ಬಿಗ್ ಬಾಸ್ ಹಾಗೂ ಕಿಚ್ಚನ ಬಗ್ಗೆ ಅವರು ಆಡಿದ ಮಾತುಗಳು ಸದ್ದು ಮಾಡಿತು. ಇದು ಕಿಚ್ಚನ ಕಿವಿಗೂ ಮುಟ್ಟಿತು.
ಇದೇ ಮಾತನ್ನು ಉದ್ದೇಶಿಸಿ ಕಿಚ್ಚ ರಕ್ಷಕ್ ಬಳಿ, ಹೊರಗಡೆ ಇದ್ದ ಸೌಂಡ್ ಇಲ್ಲೇನಿಲ್ಲ ಎಂದು ಕೇಳಿದರು. ಇದಕ್ಕೆ ಪ್ರೇಕ್ಷಕರು ಕಿಚ್ಚ ಟಾಂಗ್ ಕೇಳಿ ಚಪ್ಪಾಳೆ ತಟ್ಟಿದರು. ಇದಕ್ಕೆ ರಕ್ಷಕ್ ಮೊದಲು ಕ್ಷಮೆ ಕೇಳಲು ಹೊರಟರು. ಆದರೆ ಕಿಚ್ಚ ಕ್ಷಮೆಯ ನಡುವೆಯೇ ಪ್ರಶ್ನೆ ಮಾಡಿದರು. ಮುಂದುಗಡೆ ಇದ್ದಾಗ ರೆಸ್ಪಾಟ್ ಜಾಸ್ತಿ ಎಂದು ಕಿಚ್ಚನಿಗೆ ಹೇಳಿದರು.
ಆ ಬಳಿಕ ಯಾರು ಗೆಲ್ಲಬೇಕು, ಯಾರು ಹೊರಬರಬೇಕು ಎಂದು ಸ್ಪರ್ಧೆಗಳಲ್ಲಿ ಕೇಳಿದರು. ಇದಕ್ಕೆ ಸಿರಿ, ಭಾಗ್ಯಶ್ರೀ, ಗೌರೀಶ್, ಸ್ನೇಕ್ ಶ್ಯಾಮ್, ತನಿಷಾ, ನಮೃತಾ, ಸ್ನೇಹಿತ್ ಸೇರಿದಂತೆ ವಿನಯ್, ಕಾರ್ತಿಕ್ ಹಾಗೂ ಸಂಗೀತಾ ಗೆಲ್ಲಬಹುದೆಂದು ಒಬ್ಬೊಬ್ಬರು ಹೇಳಿದರು.
ತುಕಾಲಿ ಸಂತೋಷ್ ಮನೆಯಿಂದ ಮೊದಲು ಆಚೆ ಬರಬಹುದೆಂದು ಹೇಳಿದರು. ಇದಕ್ಕೆ ಕಿಚ್ಚ ಕಾದು ನೋಡುವ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ
Mollywood: ಸೂಪರ್ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್ ಗೆ ಡೇಟ್ ಫಿಕ್ಸ್
MUST WATCH
ಹೊಸ ಸೇರ್ಪಡೆ
Mudigere: ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಶಕ್ಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
Extortion: ಆನ್ಲೈನ್ ಗೇಮ್; ಬಾಲಕನ ಬೆದರಿಸಿ ಸುಲಿಗೆ
Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ