![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
ಮನೆಯಲ್ಲಿ ಗಾಂಜಾ ಹೊಂದಿದ್ದಕ್ಕಾಗಿ ಖ್ಯಾತ ಯೂಟ್ಯೂಬರ್, ಬಿಗ್ ಬಾಸ್ ರನ್ನರ್ ಅಪ್ ಬಂಧನ
Team Udayavani, Feb 22, 2024, 3:09 PM IST
![ಮನೆಯಲ್ಲಿ ಗಾಂಜಾ ಹೊಂದಿದ್ದಕ್ಕಾಗಿ ಖ್ಯಾತ ಯೂಟ್ಯೂಬರ್, ಬಿಗ್ ಬಾಸ್ ರನ್ನರ್ ಅಪ್ ಬಂಧನ](https://www.udayavani.com/wp-content/uploads/2024/02/1-18-620x372.jpg)
ಹೈದರಾಬಾದ್: ಮನೆಯಲ್ಲಿ ಗಾಂಜಾ ಹೊಂದಿದ್ದ ಆರೋಪದ ಮೇಲೆ ತೆಲುಗಿನ ಖ್ಯಾತ ಯೂಟ್ಯೂಬರ್ ಹಾಗೂ ಬಿಗ್ ಬಾಸ್ ತೆಲುಗು ಸೀಸನ್ -5 ಯ ರನ್ನರ್ ಅಪ್ ಷಣ್ಮುಖ್ ಜಸ್ವಂತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಬಿಗ್ ಬಾಸ್ ತೆಲುಗು ಸೀಸನ್ 5 ರ ರನ್ನರ್ ಅಪ್ ಷಣ್ಮುಖ್ ಜಸ್ವಂತ್ ಹಾಗೂ ಅವರ ಸಹೋದರ ಸಂಪತ್ ವಿನಯ್ ಅವರನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಪ್ರಕರಣ ಬೆಳಕಿಗೆ ಬಂದದ್ದೇಗೆ?: ಸಂಪತ್ ವಿನಯ್ ಅವರ ಭಾವಿ ಪತ್ನಿ ಡಾ. ಮೋನಿಕಾ ಎಂಬವರು, ಸಂಪತ್ ಮದುವೆಗೆ 6 ದಿನಗಳು ಇರುವಾಗ ತನಗೆ ಮೋಸ ಮಾಡಿ, ಬೇರೆ ಹುಡುಗಿಯನ್ನು ಮದುಚವೆ ಆಗಲು ಹೊರಟಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಮೋನಿಕಾ ಅವರ ದೂರಿನ ಆಧಾರದ ಮೇಲೆ ಸಂಪತ್ ಅವರ ಫ್ಲಾಟ್ಗೆ ಭೇಟಿ ನೀಡಿದ್ದಾರೆ. ಈ ವೇಳೆ ಪೊಲೀಸರಿಗೆ ಮನೆಯಲ್ಲಿ ಗಾಂಜಾ ಹೊಂದಿರುವುದು ಗೊತ್ತಾಗಿದೆ. ಈ ಕಾರಣದಿಂದ ಷಣ್ಮುಖ್ ಹಾಗೂ ಸಂಪತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಹಿಂದೆಯೂ ಷಣ್ಮುಖ್ ಅವರನ್ನು ಪೊಲೀಸರು ಕುಡಿದು ವಾಹನ ಚಲಾಯಿಸಿ, ವ್ಯಕ್ತಿಯೊಬ್ಬರಿಗೆ ಢಿಕ್ಕಿ ಹೊಡೆದ ಪ್ರಕರಣದಲ್ಲಿ ಬಂಧಿಸಿದ್ದರು.
ಯಾರು ಈ ಷಣ್ಮುಖ್ ಜಸ್ವಂತ್: ಹೈದರಾಬಾದ್ ನಲ್ಲಿ ಷಣ್ಮುಖ್ ಅವರು ಯೂಟ್ಯೂಬರ್ ಆಗಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ʼಸಾಫ್ಟ್ವೇರ್ ಡೆವಲಪರ್ʼ ಎಂಬ ಶೀರ್ಷಿಕೆಯ ಯೂಟ್ಯೂಬ್ ವೆಬ್ ಸರಣಿಯೊಂದಿಗೆ ಖ್ಯಾತಿಯನ್ನು ಗಳಿಸಿದ್ದರು. ಇದರಲ್ಲಿ ಇವರಿಗೆ ಜೋಡಿಯಾಗಿ ʼಬೇಬಿʼ ನಟಿ ವೈಷ್ಣವಿ ಚೈತನ್ಯ ಅವರು ಕಾಣಿಸಿಕೊಂಡಿದ್ದರು. ಈ ಸರಣಿ ಹಿಟ್ ಆದ ಬಳಿಕ ಷಣ್ಮುಖ್ ಅವರಿಗೆ ಅನೇಕ ಆಫರ್ ಗಳು ಬಂದಿತ್ತು.
ಇದಾದ ಬಳಿಕ ಅವರು ʼಕ್ಯಾಶ್ 2.0ʼ ಶೋನಲ್ಲಿ ಕಾಣಿಸಿಕೊಂಡು, ನಂತರ ಬಿಗ್ ಬಾಸ್ ತೆಲುಗು ಸೀಸನ್ -5 ನಲ್ಲಿ ಭಾಗವಹಿಸಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು.
ಇತ್ತೀಚೆಗೆ ಅವರು ʼಸ್ಟೂಡ್ಡೆಂಟ್ʼ ಎನ್ನುವ ವೆಬ್ ಸಿರೀಸ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Sunny Mahipal: ಪತ್ನಿ ಮೇಲೆ ಹಲ್ಲೆ ನಡೆಸಿದ ಕಿರುತೆರೆ ನಟನಿಗೆ ಜಾಮೀನು](https://www.udayavani.com/wp-content/uploads/2024/07/3-29-150x90.jpg)
Sunny Mahipal: ಪತ್ನಿ ಮೇಲೆ ಹಲ್ಲೆ ನಡೆಸಿದ ಕಿರುತೆರೆ ನಟನಿಗೆ ಜಾಮೀನು
![Bigg Boss ಮನೆಯಲ್ಲಿ ಖುಲ್ಲಂ ಖುಲ್ಲಾ ರೊಮ್ಯಾನ್ಸ್: ವೈರಲ್ ವಿಡಿಯೋಗೆ ಆಯೋಜಕರ ಸ್ಪಷ್ಟನೆ](https://www.udayavani.com/wp-content/uploads/2024/07/7-19-150x90.jpg)
Bigg Boss ಮನೆಯಲ್ಲಿ ಖುಲ್ಲಂ ಖುಲ್ಲಾ ರೊಮ್ಯಾನ್ಸ್: ವೈರಲ್ ವಿಡಿಯೋಗೆ ಆಯೋಜಕರ ಸ್ಪಷ್ಟನೆ
![6](https://www.udayavani.com/wp-content/uploads/2024/07/6-22-150x90.jpg)
ಕಿರುತೆರೆ ನಟನಿಂದ ಗರ್ಭಿಣಿ ಪತ್ನಿ ಮೇಲೆ ಹಲ್ಲೆ: ಮದುವೆ ಬಳಿಕ ಮತ್ತೊಬ್ಬಳ ಜತೆ ನಿಶ್ಚಿತಾರ್ಥ?
![1](https://www.udayavani.com/wp-content/uploads/2024/07/1-22-150x90.jpg)
Vinod Dondale: ʼಕರಿಮಣಿʼ ಧಾರಾವಾಹಿ ನಿರ್ದೇಶಕ ನೇಣಿಗೆ ಶರಣು; ಸಾಲದ ಸುಳಿಯೇ ಕಾರಣ?
![Bigg Boss Kannada ಸೀಸನ್11ರ ಆರಂಭಕ್ಕೆ ಸಿದ್ಧತೆ; ಸ್ಪರ್ಧಿಗಳಾಗಿ ಬರುವವರು ಇವರೇನಾ?](https://www.udayavani.com/wp-content/uploads/2024/07/12555-150x90.jpg)
Bigg Boss Kannada ಸೀಸನ್ 11ರ ಆರಂಭಕ್ಕೆ ಸಿದ್ಧತೆ; ಸ್ಪರ್ಧಿಗಳಾಗಿ ಬರುವವರು ಇವರೇನಾ?
MUST WATCH
ಹೊಸ ಸೇರ್ಪಡೆ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.