Elvish Yadav: ವ್ಯಕ್ತಿಯ ಕಪಾಳಕ್ಕೆ ಬಾರಿಸಿ ಬಿಗ್‌ ಬಾಸ್‌ ವಿಜೇತನ ರಾದ್ಧಾಂತ;ವಿಡಿಯೋ ವೈರಲ್


Team Udayavani, Feb 12, 2024, 9:57 AM IST

3

ಮುಂಬಯಿ: ಬಿಗ್‌ ಬಾಸ್‌ ಓಟಿಟಿ -2 ವಿಜೇತ ಹಾಗೂ ಖ್ಯಾತ ಯೂಟ್ಯೂಬರ್‌ ಎಲ್ವಿಶ್ ಯಾದವ್ ಅವರು ರೆಸ್ಟೋರೆಂಟ್‌ ವೊಂದರಲ್ಲಿ ವ್ಯಕ್ತಿಯೊಬ್ಬನಿಗೆ ಕಪಾಳಕ್ಕೆ ಬಾರಿಸಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಖ್ಯಾತ ಯೂಟ್ಯೂಬರ್‌ ಆಗಿರುವ ಎಲ್ವಿಶ್ ಯಾದವ್ ಹಿಂದಿಯ ಬಿಗ್‌ ಬಾಸ್‌ ಓಟಿಟಿ -2 ವಿಜೇತರಾಗಿ ಮತ್ತಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಅವರು ಕೆಲ ವಿವಾದಗಳಿಂದ ಸುದ್ದಿಯಾಗಿದ್ದಾರೆ. ಇದೀಗ ಎಲ್ವಿಶ್ ಯಾದವ್ ಆಕ್ರೋಶಗೊಂಡು, ವ್ಯಕ್ತಿಯೊಬ್ಬನಿಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ ವೈರಲ್‌ ಆಗಿದೆ.

ಭಾನುವಾರ (ಫೆಬ್ರವರಿ 11) ಜೈಪುರದ ರೆಸ್ಟೋರೆಂಟ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಎಲ್ವಿಶ್ ಯಾದವ್  ರೆಸ್ಟೋರೆಂಟ್‌ ನಲ್ಲಿನ ಇತರೆ ಅತಿಥಿಗಳೊಂದಿಗೆ ವಾಗ್ವಾದ ನಡೆಸಿದ್ದು, ಪರಿಣಾಮ ವ್ಯಕ್ತಿಗೆ ಕಪಾಳಕ್ಕ ಬಾರಿಸಿದ್ದಾರೆ. ವ್ಯಕ್ತಿ ಮತ್ತೆ ಎಲ್ವಿಶ್‌ ಅವರೊಂದಿಗೆ ವಾಗ್ವಾದಕ್ಕೆ ಬಂದಿದ್ದು, ಎಲ್ವಿಶ್ ಅವರನ್ನು ಅವರ ಸ್ನೇಹಿತರು ಹೊರಗೆ ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: BBK10 : ವರ್ತೂರು ಸಂತೋಷ್ ಜೊತೆ ಮದುವೆ ವಿಚಾರ: “ಮದುವೆಯಾದ ಮೇಲೂ..” ಮೌನ ಮುರಿದ ತನಿಷಾ

ಈ ಬಗ್ಗೆ ಸ್ವತಃ ಎಲ್ವಿಶ್‌ ಅವರೇ ಯಾಕೆ ಕಪಾಳಮೋಕ್ಷ ಮಾಡಿದೆ ಎನ್ನುವುದನ್ನು ವಿಡಿಯೋ ಮೂಲಕ ಹೇಳಿದ್ದಾರೆ. “ನನಗೆ ಜಗಳವಾಡಲು ಇಷ್ಟವಿಲ್ಲ. ನಾನು ಏನಿದ್ದರೂ ನನ್ನಷ್ಟಕ್ಕೆ ಇರುತ್ತೇನೆ. ನಾನು ಯಾರು ಫೋಟೋ ತೆಗೆಯಲು ಹೇಳುತ್ತಾರೋ, ಅವರೊಂದಿಗೆ ಆರಾಮದಲ್ಲಿ ಫೋಟೋಗೆ ಪೋಸ್‌ ನೀಡುತ್ತೇನೆ. ಆದರೆ ಯಾರು ಹಿಂದಿನಿಂದ ಕಮೆಂಟ್‌ ಮಾಡುತ್ತಾರೋ, ಅವರನ್ನು ಬಿಡಲ್ಲ”‌ ಎಂದಿದ್ದಾರೆ.

ನಮ್ಮೊಂದಿಗೆ ಪೊಲೀಸರು ಮತ್ತು ಕಮಾಂಡೋಗಳಿದ್ದರು. ನಾವು ತಪ್ಪು ಮಾಡಿದ್ದೇವೆ ಎಂದಲ್ಲ. ಇದು ವೈಯಕ್ತಿಕವಾಗಿತ್ತು. ಅವರು ನನ್ನನ್ನು ವೈಯಕ್ತಿಕವಾಗಿ ಕೆಣಕಿದರು, ನಾನು ಖುದ್ದಾಗಿ ಹೋಗಿ ಅವನಿಗೆ ಕಪಾಳಮೋಕ್ಷ ಮಾಡಿದೆ. ನನಗೆ ಯಾವುದೇ ವಿಷಾದವಿಲ್ಲ. ನಾನು ಇರೋದೇ ಹೀಗೆ” ಎಂದಿದ್ದಾರೆ.

ವ್ಯಕ್ತಿ ಎಲ್ವಿಶ್‌ ಅವರ ಪೋಷಕರಿಗೆ ನಿಂದಿಸಿ ಮಾತನಾಡಿದ್ದಕ್ಕೆ ಅವರು ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ.

ಆದರೆ ನೆಟ್ಟಿಗರು ಎಲ್ವಿಶ್‌ ಅವರ ಈ ವರ್ತನೆಗೆ ನೆಟ್ಟಿಗರು ಗರಂ ಆಗಿದ್ದಾರೆ. “ಇವನೊಬ್ಬ ಸ್ತ್ರೀದ್ವೇಷಿ ಗೂಂಡಾ. ಇದು ಅವರ ವಿಡಿಯೋಗಳಿಂದ ಸಾಬೀತಾಗಿದೆ. ಇದರಲ್ಲಿ ಯಾವುದೇ ಆಶ್ಚರ್ಯವಿಲ್ಲ” ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ.

 

ಟಾಪ್ ನ್ಯೂಸ್

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Karthik Mahesh: ಬಿಗ್‌ ಬಾಸ್‌ನಿಂದ ಬಂದ ಹಣ ಮನೆ ಕಟ್ಟೋಕೆ ಸಾಕಾಗಲ್ಲ: ಕಾರ್ತಿಕ್‌ ಮಹೇಶ್

Karthik Mahesh: ಬಿಗ್‌ ಬಾಸ್‌ನಿಂದ ಬಂದ ಹಣ ಮನೆ ಕಟ್ಟೋಕೆ ಸಾಕಾಗಲ್ಲ: ಕಾರ್ತಿಕ್‌ ಮಹೇಶ್

15

Angry Rantman: 27ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಜನಪ್ರಿಯ ಯೂಟ್ಯೂಬರ್‌; ನೆಟ್ಟಿಗರು ಶಾಕ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.