ಈ ಬಾರಿ ‘ಖತ್ರೋನ್ ಕೆ ಖಿಲಾಡಿ’ ನಿರೂಪಣೆ ಮಾಡಲು ಮತ್ತೆ ಸಂಭಾವನೆ ಹೆಚ್ಚಿಸಿದ ರೋಹಿತ್ ಶೆಟ್ಟಿ
Team Udayavani, Mar 13, 2024, 1:16 PM IST
ಮುಂಬಯಿ: ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ತನ್ನ ಹಾಸ್ಯ ಹಾಗೂ ಸಾಹಸಮಯ ಸಿನಿಮಾಗಳಿಂದ ಎಷ್ಟು ಖ್ಯಾತಿಗಳಿಸಿದ್ದರೋ, ತನ್ನ ನಿರೂಪಣಾ ಪ್ರತಿಭೆಯಿಂದಲೂ ಟಿವಿ ಲೋಕಕದಲ್ಲಿ ಅಷ್ಟೇ ಹೆಸರುಗಳಿಸಿದ್ದಾರೆ.
ರೋಹಿತ್ ಶೆಟ್ಟಿ ಬಾಲಿವುಡ್ ಸಿನಿಮಾರಂಗದ ಖ್ಯಾತ ನಿರ್ದೇಶಕರಲ್ಲಿ ಒಬ್ಬರು. ಸಿನಿಮಾ ಪ್ರೇಕ್ಷಕರನ್ನು ತನ್ನ ಸಿನಿಮಾಗಳಿಂದ ರಂಜಿಸಿದ ಅವರು, ರಿಯಾಲಿಟಿ ಶೋವೊಂದರಿಂದಲೂ ಗಮನ ಸೆಳೆದಿದ್ದಾರೆ. ‘ಖತ್ರೋನ್ ಕೆ ಖಿಲಾಡಿ’ ಎನ್ನುವ ಸಾಹಸಮಯ ರಿಯಾಲಿಟಿ ಶೋಗಳ ಹಲವು ಸೀಸನ್ ಗಳನ್ನು ಅವರು ನಡೆಸಿಕೊಟ್ಟಿದ್ದಾರೆ.
ಒಬ್ಬ ಖ್ಯಾತ ನಿರ್ದೇಶಕನನನ್ನು ಅಥವಾ ನಟನನ್ನು ಕಿರುತೆರೆಗೆ ತಂದು ಕಾರ್ಯಕ್ರಮವನ್ನು ನಿರೂಪಣೆ ಮಾಡಿಸುವುದು ಹೊಸದಲ್ಲ. ಆದರೆ ಈ ಕಾರ್ಯಕ್ರಮಗಳನ್ನು ನಡೆಸಿಕೊಡುವ ನಟರಿಗೆ ಕೊಡುವ ಸಂಭಾವನೆ ಲಕ್ಷ ಲಕ್ಷದಾಗಿರುತ್ತದೆ.
ಸೋಶಿಯಲ್ ಮೀಡಿಯಾ ಸೆಲೆಬ್ರಿಟಿಗಳು ಹಾಗೂ ಟಿವಿ ಲೋಕದ ಸ್ಟಾರ್ ಗಳು ಭಾಗಿಯಾಗುವ ‘ಖತ್ರೋನ್ ಕೆ ಖಿಲಾಡಿ’ ಸೀಸನ್ -14 ಆರಂಭಕ್ಕೆ ದಿನಗಣನೆ ಬಾಕಿ ಉಳಿದಿದೆ. ಈ ಬಾರಿಯೂ ರೋಹಿತ್ ಶೆಟ್ಟಿ ಅವರೇ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಈ ಬಾರಿ ಅವರು ಕಾರ್ಯಕ್ರಮವನ್ನು ನಡೆಸಿಕೊಡಲು ತಮ್ಮ ಸಂಭಾವನೆಯನ್ನು ಹೆಚ್ಚಿಸಿದ್ದಾರೆ ಎನ್ನುವ ವರದಿಯೊಂದು ಹೊರಬಿದ್ದಿದೆ. ಶೇ.50 ರಷ್ಟು ತನ್ನ ಸಂಭಾವನೆಯನ್ನು ಅವರು ಹೆಚ್ಚಿಸಿದ್ದಾರೆ ಎಂದು ವರದಿ ಆಗಿದೆ.
ಖತ್ರೋನ್ ಕೆ ಖಿಲಾಡಿಯ ಆರಂಭಿಕ ಸೀಸನ್ನಲ್ಲಿ ರೋಹಿತ್ ಈ ಹಿಂದೆ ಪ್ರತಿ ಸಂಚಿಕೆಗೆ 50 ಲಕ್ಷಗಳನ್ನು ಸಂಭಾವನೆಯಾಗಿ ಪಡೆಯುತ್ತಿದ್ದರು. ಇದೀಗ ಸೀಸನ್ -14 ಗೆ ಒಂದು ಎಪಿಸೋಡ್ ಗೆ ಅವರು 60-70 ರಿಂದ ಲಕ್ಷ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ. ಆ ಮೂಲಕ ಇಡೀ ಸೀಸನ್ ನಲ್ಲಿ 16 ಕೋಟಿ ರೂ. ಪಡೆಯಲಿದ್ದಾರೆ ಎಂದು ʼಸಿಯಾಸತ್ʼ ವರದಿ ಮಾಡಿದೆ.
ʼಖತ್ರೋನ್ ಕೆ ಕಿಲಾಡಿʼ ಸೀಸನ್ 5 ಮತ್ತು 6 ನ್ನು ಹೋಸ್ಟ್ ಮಾಡಲು ರೋಹಿತ್ ಪ್ರತಿ ಸಂಚಿಕೆಗೆ 10-20 ಲಕ್ಷ ಶುಲ್ಕ ಪಡೆಯುತ್ತಿದ್ದರು. ಸೀಸನ್ -7 ನ್ನು ಅರ್ಜುನ್ ಕಪೂರ್ ನಡೆಸಿಕೊಟ್ಟಿದ್ದರು. ಆ ಬಳಿಕ ಶುರುವಾದ ಸೀಸನ್ -8 ನ್ನು ಮತ್ತೆ ರೋಹಿತ್ ಶೆಟ್ಟಿ ನಡೆಸಿಕೊಟ್ಟರು. ಈ ಸೀಸನ್ 10ರ ಪ್ರತಿ ಸಂಚಿಕೆಗೆ ಅವರು, 37 ಲಕ್ಷ ರೂ.ವನ್ನು ಸಂಭಾವನೆಯಾಗಿ ಪಡೆದುಕೊಂಡರು.
2021ರಲ್ಲಿ ಬಂದ ʼಖತ್ರೋನ್ ಕೆ ಕಿಲಾಡಿ ಸೀಸನ್ 11ʼ ಗಾಗಿ ಅವರು ಪ್ರತಿ ಸಂಚಿಕೆಗೆ 49 ಲಕ್ಷ ಸಂಭಾವನೆ ಪಡೆದಿದ್ದರು. ಸೀಸನ್ 12 ಮತ್ತು 13 ಗಳಿಗೆ, ಅವರು ಪ್ರತಿ ಸಂಚಿಕೆಗೆ 50 ಲಕ್ಷ ಸಂಭಾವನೆ ಪಡೆದಿದ್ದರು.
ಇದೀಗ ಅವರು 14ನೇ ಸೀಸನ್ ಗಾಗಿ ತಮ್ಮ ಸಂಭಾವನೆಯನ್ನು ಹೆಚ್ಚಿಸಿದ್ದಾರೆ ಎಂದು ವರದಿಯಾಗಿದೆ. ಈ ಬಾರಿಯ ಸೀಸನ್ ನಲ್ಲಿ ಅಭಿಷೇಕ್ ಕುಮಾರ್, ವಿವೇಕ್ ದಹಿಯಾ, ಮುನಾವರ್ ಫಾರೂಕಿ, ಮನ್ನಾರಾ ಚೋಪ್ರಾ ಮತ್ತು ಮನೀಶಾ ರಾಣಿ ಹಾಗೂ ಇತರರು ಸ್ಪರ್ಧಿಗಳಾಗಿ ಭಾಗಯಾಗುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ
Mollywood: ಸೂಪರ್ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್ ಗೆ ಡೇಟ್ ಫಿಕ್ಸ್
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
Karthik Mahesh: ಬಿಗ್ ಬಾಸ್ನಿಂದ ಬಂದ ಹಣ ಮನೆ ಕಟ್ಟೋಕೆ ಸಾಕಾಗಲ್ಲ: ಕಾರ್ತಿಕ್ ಮಹೇಶ್
Angry Rantman: 27ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಜನಪ್ರಿಯ ಯೂಟ್ಯೂಬರ್; ನೆಟ್ಟಿಗರು ಶಾಕ್
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ