Box office: ಒಂದೇ ದಿನ ತೆರೆಕಂಡ ಬಹು ನಿರೀಕ್ಷಿತ ಸಿನಿಮಾಗಳು; ಇದುವರೆಗೆ ಗಳಿಸಿದ್ದೆಷ್ಟು?


Team Udayavani, Jan 16, 2024, 10:42 AM IST

Box office: ಒಂದೇ ದಿನ ತೆರೆಕಂಡ ಬಹು ನಿರೀಕ್ಷಿತ ಸಿನಿಮಾಗಳು; ಇದುವರೆಗೆ ಗಳಿಸಿದ್ದೆಷ್ಟು?

ಮುಂಬಯಿ/ ಹೈದರಾಬಾದ್/ ಚೆನ್ನೈ: ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಬಾಲಿವುಡ್‌ , ಟಾಲಿವುಡ್‌ ಹಾಗೂ ಕಾಲಿವುಡ್‌ ನಲ್ಲಿ ದೊಡ್ಡ ಸಿನಿಮಾಗಳು ರಿಲೀಸ್‌ ಆಗಿವೆ. ಬಹು ನಿರೀಕ್ಷಿತ ಸಿನಿಮಾಗಳು ಬಾಕ್ಸ್‌ ಆಫೀಸ್‌ ನಲ್ಲೂ ನಿರೀಕ್ಷೆಗೆ ತಕ್ಕಂತೆ ಕಮಾಲ್‌ ಮಾಡಿವೆ.

ಯಾವೆಲ್ಲಾ ಸಿನಿಮಾ ಇದುವರೆಗೆ ಬಾಕ್ಸ್‌ ಆಫೀಸ್‌ ನಲ್ಲಿ ಎಷ್ಟು ಕಲೆಕ್ಷನ್‌ ಮಾಡಿವೆ ಎನ್ನುವುದರ ಬಗೆಗಿನ ಒಂದು ಕ್ವಿಕ್‌ ಲುಕ್‌ ಇಲ್ಲಿದೆ.

ಕ್ಯಾಪ್ಟನ್ ಮಿಲ್ಲರ್: ಅರುಣ್ ಮಾಥೇಶ್ವರನ್ ನಿರ್ದೇಶನದ ʼಕ್ಯಾಪ್ಟನ್‌ ಮಿಲ್ಲರ್‌ʼ ಸಿನಿಮಾದ ಬಗ್ಗೆ ಎಲ್ಲೆಡೆಯಿಂದ ಪಾಸಿಟಿವ್‌ ರೆಸ್ಪಾನ್ಸ್‌ ಕೇಳಿ ಬರುತ್ತಿದೆ. ಸಿನಿಮಾ ರಿಲೀಸ್‌ ಆಗಿ 4 ದಿನ ಕಳೆದಿದೆ. ಥಿಯೇಟರ್‌ ನಲ್ಲಿ ಇನ್ನು ಕೂಡ ಹೌಸ್‌ ಫುಲ್‌ ಆಗಿ ಸಿನಿಮಾ ಪ್ರದರ್ಶನ ಕಾಣುತ್ತಿದೆ.

ಧನುಷ್‌ ಅವರ ಅಭಿನಯ ಹಾಗೂ ಸಿನಿಮಾದಲ್ಲಿನ ಕಥೆಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದು,ಗ್ಲೋಬಲ್‌ ಬಾಕ್ಸ್‌ ಆಫೀಸ್‌ ನಲ್ಲಿ 50 ಕೋಟಿ ಕಮಾಯಿ ಮಾಡುವತ್ತ ಸಿನಿಮಾ ಸಾಗುತ್ತಿದೆ. 4ನೇ ದಿನ ಅಂದರೆ ಜನವರಿ 15 ರಂದು ಭಾರತದಲ್ಲಿ 6.50 ಕೋಟಿ ರೂ.ಗಳಿಸಿದ್ದು, ಇಂಡಿಯನ್‌ ಬಾಕ್ಸ್‌ ಆಫೀಸ್‌ ನಲ್ಲಿ ಇದುವರೆಗೆ 30.45 ಕೋಟಿ  ರೂ.ಗಳಿಸಿದೆ. ವರ್ಲ್ಡ್‌ ಬಾಕ್ಸ್‌ ಆಫೀಸ್‌ ನಲ್ಲಿ ಶೀಘ್ರದಲ್ಲಿ ಸಿನಿಮಾ 50 ಕೋಟಿ ಕ್ಲಬ್‌ ಸೇರಲಿದೆ.

ಅಯಲಾನ್: ನಟ ಶಿವ ಕಾರ್ತಿಕೇಯನ್ ಸಾಕಷ್ಟು ಶ್ರಮವಹಿಸಿ ತೊಡಗಿಸಿಕೊಂಡ ಕಾಣಿಸಿಕೊಂಡ ʼಅಯಲಾನ್ʼ ಧನುಷ್ ಅವರ ʼಕ್ಯಾಪ್ಟನ್‌ ಮಿಲ್ಲರ್‌ʼ ಸಿನಿಮಾದೊಂದಿಗೆ ರಿಲೀಸ್‌ ಆಗಿದೆ. ಸಿನಿಮಾ ಒಂದು ಹೊಸ ಅನುಭವವನ್ನು ನೀಡುವುದರ ಜೊತೆ ವಿಎಫ್‌ ಎಕ್ಸ್‌ ಕೂಡ ಮೆಚ್ಚುಗೆ ಗಳಿಸಿದೆ. ಕಳೆದು ಹೋದ ಅನ್ಯಗ್ರಹ ಎಲಿಯನ್‌ ತನ್ನ ಗ್ರಹಕ್ಕೆ ಹೋಗಲು ನಾಲ್ವರ ಸಹಾಯ ಕೇಳುವ ಕಥೆಯನ್ನು ಸಿನಿಮಾ ಒಳಗೊಂಡಿದೆ.

ಸಿನಿಮಾಕ್ಕೆ ಎಲ್ಲೆಡಯಿಂದ ಪಾಸಿಟಿವ್‌ ರೆಸ್ಪಾನ್ಸ್‌ ಕೇಳಿ ಬರುತ್ತಿದೆ. ರಿಲೀಸ್‌ ಆದ 4ನೇ ದಿನ ಭಾರತದಲ್ಲಿ 6.75 ಕೋಟಿ ರೂಪಾಯಿ ಕಮಾಯಿ ಮಾಡಿದೆ. ಇದುವರೆಗೆ ಅಂದಾಜು 19.45 ಕೋಟಿ ರೂಪಾಯಿಯನ್ನು ಸಿನಿಮಾ ಗಳಿಸಿದೆ.

‘ಗುಂಟೂರು ಖಾರಂʼ: ಟಾಲಿವುಡ್‌ ನ ಬಹು ನಿರೀಕ್ಷಿತ  ಸಿನಿಮಾ ಪ್ರಿನ್ಸ್‌ ಮಹೇಶ್‌ ಬಾಬು ಅಭಿನಯದ ‘ಗುಂಟೂರು ಖಾರಂʼ ರಿಲೀಸ್‌ ಆಗಿ 4 ದಿನ ಕಳೆದರೂ ಭರ್ಜರಿ ಗಳಿಕೆಯ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ.

10 ವರ್ಷದ ಬಳಿಕ ಮಹೇಶ್‌ ಬಾಬು ಜೊತೆ ತ್ರಿವಿಕ್ರಮ್‌ ಸಿನಿಮಾ ಮಾಡಿರುವುದು ವರ್ಕೌಟ್ ಆಗಿದೆ. ಭಾರತದಲ್ಲಿ ಇದುವರೆಗೆ ಸಿನಿಮಾ  83.40 ಕೋಟಿ ರೂ.ಗಳಿಸಿದೆ. 4ನೇ ದಿನ ಭಾರತದಲ್ಲಿ 14.50 ಕೋಟಿ ರೂ.ಗಳಿಸಿದೆ. ಇಂಡಿಯನ್ ಬಾಕ್ಸ್‌ ಆಫೀಸ್‌ ನಲ್ಲಿ ಶೀಘ್ರದಲ್ಲಿ 100 ಕೋಟಿ ಕ್ಲಬ್‌ ಸೇರಲಿದ್ದು, ವರ್ಲ್ಡ್‌ ಬಾಕ್ಸ್‌ ಆಫೀಸ್‌ ನಲ್ಲಿ ಇದುವರೆಗೆ ಮೂರೇ ದಿನದಲ್ಲಿ 164 ಕೋಟಿ ರೂ. ಗಳಿಸಿದೆ. ಶೀಘ್ರದಲ್ಲಿ 200 ಕೋಟಿ ಗಳಿಸುವ ಸಾಧ್ಯತೆಯಿದೆ.

ಹನುಮಾನ್:‌ ʼಗುಂಟೂರು ಖಾರಂʼ ಸಿನಿಮಾದೊಂದಿಗೆ ತೆರೆಕಂಡ ತೇಜಾ ಸಜ್ಜಾ ಅವರ ʼಹನುಮಾನ್‌ʼ ಸಿನಿಮಾಕ್ಕೆ ದೊಡ್ಡಮಟ್ಟದ ಆರಂಭ ಸಿಕ್ಕಿದ್ದು, ಪಾಸಿಟಿವ್‌ ರೆಸ್ಪಾನ್ಸ್‌ ಪಡೆದುಕೊಂಡಿದೆ. ನಿರ್ದೇಶಕ ಪ್ರಶಾಂತ್ ವರ್ಮಾ ಅವರ ಸೂಪರ್ ಹೀರೋ ಫ್ರಾಂಚೈಸಿಯ ಕಥೆಯನ್ನೊಳಗೊಂಡ ಸಿನಿಮಾದ ಟಿಕೆಟ್‌ ಗೆ ಭರ್ಜರಿ ಬೇಡಿಕೆ ಬರುತ್ತಿದೆ.

ಜ.15 ರಂದು ʼಹನುಮಾನ್‌ʼ ಭಾರತದಲ್ಲಿ 14.50 ಕೋಟಿಯ ಗಳಿಕೆಯನ್ನು ಕಂಡಿದೆ. ನಾಲ್ಕು ದಿನದಲ್ಲಿ ಭಾರತದಲ್ಲಿ 55.15 ಕೋಟಿ ರೂಪಾಯಿ ಕಮಾಯಿ ಮಾಡಿದೆ.

ಮೇರಿ ಕ್ರಿಸ್ಮಸ್:‌ ಶ್ರೀರಾಮ್ ರಾಘವನ್ ಥ್ರಿಲ್ಲರ್‌ ಕಥೆಯ ʼಮೇರಿ ಕ್ರಿಸ್ಮಸ್‌ʼ ಸಿನಿಮಾಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಿಧಾನಗತಿಯ ಸ್ಕ್ರೀನ್‌ ಪ್ಲೇ ಇದ್ದರೂ ಪ್ರೇಕ್ಷಕರು ಸಿನಿಮಾದಲ್ಲಿನ ಟ್ವಿಸ್ಟ್‌ & ಟರ್ನ್‌ ಗಳನ್ನು ಮೆಚ್ಚಿಕೊಂಡಿದ್ದಾರೆ. ವಿಜಯ್‌ ಸೇತುಪತಿ ಹಾಗೂ ಕತ್ರಿನಾ ಕೈಫ್‌ ಮೊದಲ ಬಾರಿ ಕಾಣಿಸಿಕೊಂಡಿದ್ದು ಇಬ್ಬರ ನಟನೆಯನ್ನು ಪ್ರೇಕ್ಷಕರು ಕೊಂಡಾಡಿದ್ದಾರೆ.

ವಿಮರ್ಶಕರಿಂದ ಸಿನಿಮಾ ಮೆಚ್ಚುಗೆ ಪಡೆದಿದ್ದು, ತಮಿಳು ಮತ್ತು ಹಿಂದಿಯಲ್ಲಿ ಸಿನಿಮಾ ತೆರೆಕಂಡಿದೆ. ಜ.15 ರಂದು ಭಾರತದಲ್ಲಿ 1.65 ಕೋಟಿಯ ಕಮಾಯಿ ಮಾಡಿದೆ. ಇದುವರೆಗೆ ಸಿನಿಮಾ 11 ಕೋಟಿ ರೂ.ಗಳಿಸಿದೆ.

ಟಾಪ್ ನ್ಯೂಸ್

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.