ನಿಶ್ಚಿತಾರ್ಥ ಸುದ್ದಿಯ ಬೆನ್ನಲ್ಲೇ ಜೊತೆಯಾಗಿ ವಿಯೆಟ್ನಾಂ ಸುತ್ತಾಡಿದ ರಶ್ಮಿಕಾ – ದೇವರಕೊಂಡ?
Team Udayavani, Jan 15, 2024, 6:02 PM IST
ಹೈದರಾಬಾದ್: ನಟಿ ರಶ್ಮಿಕಾ – ದೇವರಕೊಂಡ ಅವರು ಡೇಟಿಂಗ್ ನಲ್ಲಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿರುವುದು ಹೊಸದೇನಲ್ಲ. ಇಬ್ಬರು ಎಲ್ಲಿ ಹೋದರು ಡೇಟಿಂಗ್ ವಿಚಾರ ಚರ್ಚೆಗೆ ಬರುತ್ತದೆ. ಇತ್ತೀಚೆಗಿನ ಇಬ್ಬರ ಫೋಟೋಗಳು ವೈರಲ್ ಆಗಿದ್ದು, ಜೊತೆಯಾಗಿಯೇ ತಿರುಗಾಡಲು ಹೋಗಿದ್ದಾರೆ ಎನ್ನಲಾಗುತ್ತಿದೆ.
ರಶ್ಮಿಕಾ – ವಿಜಯ್ ದೇವರಕೊಂಡ ರಿಲೇಷನ್ ಬಗ್ಗೆ ಸಿನಿವಲಯದಲ್ಲಿ ಹತ್ತಾರು ಗಾಸಿಪ್ ಗಳು ಹಬ್ಬಿವೆ. ಫೆಬ್ರವರಿ ತಿಂಗಳಿನಲ್ಲಿ ರಶ್ಮಿಕಾ – ದೇವರಕೊಂಡ ಅವರು ಎಂಗೇಜ್ ಮೆಂಟ್ ಮಾಡಿಕೊಳ್ಳಲಿದ್ದಾರೆ ಎನ್ನುವ ವಿಚಾರ ವೈರಲ್ ಆಗಿದೆ. ಆದರೆ ಈ ಬಗ್ಗೆ ಯಾವ ಅಧಿಕೃತ ಮಾಹಿತಿಯೂ ಹೊರಬಿದ್ದಿಲ್ಲ.
ಇದೀಗ ರಶ್ಮಿಕಾ – ದೇವರಕೊಂಡ ಅವರು ಜೊತೆಯಾಗಿಯೇ ವಿಯೆಟ್ನಾಂ ಸುತ್ತಾಟದಲ್ಲಿದ್ದಾರೆ ಎನ್ನಲಾಗುತ್ತಿದ್ದು, ಈ ಸಂಬಂಧ ಇಬ್ಬರ ಫೋಟೋ ನೋಡಿ ನೆಟ್ಟಿಗರು ನಾನಾ ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Salaar OTT release: ಓಟಿಟಿ ರಿಲೀಸ್ಗೆ ರೆಡಿಯಾದ ʼಸಲಾರ್ʼ; ಈ ದಿನದಿಂದ ಸ್ಟ್ರೀಮಿಂಗ್?
ಟೋಪಿ ಹಾಕಿಕೊಂಡು ರಶ್ಮಿಕಾ ಅವರು ಫೋಟೋವೊಂದನ್ನು ಅಪ್ಲೋಡ್ ಮಾಡಿದ್ದಾರೆ. ಇದಕ್ಕೂ ಮೊದಲು ವಿಯೆಟ್ನಾಂನಲ್ಲಿ ವಿಜಯ್ ದೇವರಕೊಂಡ ಸಮಯ ಕಳೆದಿದ್ದರು. ರಶ್ಮಿಕಾ ಅವರ ಫೋಟೋವನ್ನು ನೋಡಿ “ಟೋಪಿಯನ್ನು ದೇವರಕೊಂಡ ಬಳಿ ನೋಡಿದ್ದೇವೆ” ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. “ಇದು ದೇವರಕೊಂಡ ಅವರ ಟೋಪಿ” ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಇಬ್ಬರ ಫೋಟೋ ನೋಡಿ,ವಿಯೆಟ್ನಾಂ ಮಾರುಕಟ್ಟೆಯನ್ನು ನೋಡಿ ರಶ್ಮಿಕಾ – ದೇವರಕೊಂಡ ಒಂದೇ ಕಡೆ ಇದ್ದಾರೆ. ಫೋಟೋವನ್ನು ರಶ್ಮಿಕಾ ಕ್ಲಿಕ್ಕಿಸಿದ್ದಾರೆ ಎನ್ನುವ ಕಮೆಂಟ್ ನ್ನು ನೆಟ್ಟಿಗರು ಮಾಡಿದ್ದಾರೆ.
ಇಬ್ಬರು ಜೊತೆಯಾಗಿಯೇ ವಿಯೆಟ್ನಾಂ ಹೋಗಿದ್ದಾರೆ ಎನ್ನುವ ಮಾತುಗಳು ಫ್ಯಾನ್ಸ್ ವಲಯದಲ್ಲಿ ಹರಿದಾಡುತ್ತಿದೆ.
ರಶ್ಮಿಕಾ , ದೇವರಕೊಂಡ ʼಗೀತಾ ಗೋವಿಂದಂʼ, ʼಡಿಯರ್ ಕಾಮ್ರೆಡ್ʼ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ ಬಳಿಕ ಆತ್ಮೀಯರಾಗಿ ಕಾಣಿಸಿಕೊಂಡಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು