ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ;ವಾರ್ಷಿಕ ಸಭೆ, ನೂತನ ಸಮಿತಿ ಆಯ್ಕೆ
Team Udayavani, Oct 7, 2023, 11:55 AM IST
ದುಬೈ: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯುಎಇ ಘಟಕದ ವಾರ್ಷಿಕ ಮಹಾಸಭೆಯು ದುಬೈನ ಅಬೂಹೈಲ್ನಲ್ಲಿ ನಡೆಯಿತು. ನ್ಯಾಯವಾದಿ ಇಬ್ರಾಹಿಂ ಖಲೀಲ್ ಅರಿಮಲೆಯವರು ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ನ್ಯಾಯವಾದಿ ಇಬ್ರಾಹಿಂ ಖಲೀಲ್ ಅರಿಮಲೆ, ಉಪಾಧ್ಯಕ್ಷರಾಗಿ ಮಂಜುನಾಥ್ ಕಾಸರಗೋಡು, ಶಾಫಿ ಬಂಡಶಾಲೆ, ಯೂಸುಫ್ ಶೇಣಿ, ಅಶ್ರಫ್ ಪಾವೂರ್, ಜೋಯ್ ವಿನ್ ಸೆಂಟ್ ಕಯ್ನಾರ್, ಪ್ರಧಾನ ಕಾರ್ಯದರ್ಶಿಯಾಗಿ ಅಮರದೀಪ್ ಕಲ್ಲೂರಾಯ, ಕಾರ್ಯದರ್ಶಿಗಳಾಗಿ ಆಸೀಫ್ ಹೊಸಂಗಡಿ, ಅನೀಶ್ ಶೆಟ್ಟಿ ಮಡಂದೂರು, ಅಶ್ರಫ್ ಕ್ಲಾಸಿಕ್, ಅಶ್ರಫ್ ಬಾಯಾರ್, ಅಮಾನುಲ್ಲ ಮೀಂಜ, ಕೋಶಾಧಿಕಾರಿಯಾಗಿ ಇಬ್ರಾಹಿಂ ಬಾಜೂರಿ, ಸಾಂಸ್ಕೃತಿಕ ಸಂಯೋಜಕರಾಗಿ ರಾಮಚಂದ್ರ ಬೆದ್ರಡ್ಕ, ಕ್ರೀಡಾ ಸಂಯೋಜಕರಾಗಿ ಹಸ್ಸನ್ ಕುಡ್ವ, ಮಾಧ್ಯಮ ಸಂಯೋಜಕರಾಗಿ ವಿಜಯ ಕುಮಾರ್ ಶೆಟ್ಟಿ, ಸಲಹಾಸಮಿತಿಯ ಅಧ್ಯಕ್ಷರಾಗಿ ಅಬ್ದುಲ್ಲ ಮಾದುಮೂಲೆ, ಸದಸ್ಯರಾಗಿ ಡಾ| ಅಬ್ದುಲ್ ರಹಿಮಾನ್ ಬಾವ, ಸದನ್ದಾಸ್ ಶಿರೂರು, ಸುಗಂಧರಾಜ್ ಬೇಕಲ್, ಅಮೀನ್ ಸಾಹೇಬ್ ಮಂಜೇಶ್ವರ, ಅಲಿ ಸಾಗ್, ಮೊದಿನ್ ಬಾವ ಹೊಸಂಗಡಿ, ಅಬ್ದುಲ್ ರಶೀದ್ ಬಾಯಾರ್ ಅವರನ್ನು ಆಯ್ಕೆಮಾಡಲಾಯಿತು.