40-41 ಡಿಗ್ರಿ ಸೆಲ್ಸಿಯಸ್‌ ತಾಪಮಾನ; ಬೇಸಿಗೆ- ತಂಪು ಪಾನೀಯಗಳಿಗೆ ಮೊರೆ

ಒಂದು ತಿಂಗಳು ಮುಂಚೆಯೆ ಬೇಸಿಗೆ ಬಿಸಿಲ ಬೇಗೆ ಜನರನ್ನು ಕಂಗಾಲಾಗಿಸಿದೆ.

Team Udayavani, Apr 2, 2024, 5:51 PM IST

40-41 ಡಿಗ್ರಿ ಸೆಲ್ಸಿಯಸ್‌ ತಾಪಮಾನ; ಬೇಸಿಗೆ- ತಂಪು ಪಾನೀಯಗಳಿಗೆ ಮೊರೆ

ಉದಯವಾಣಿ ಸಮಾಚಾರ
ಕಲಾದಗಿ: ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ಬಿಸಿಲಿಗೆ ಬೇಸತ್ತಿದ್ದು, ಜನರು ಪರದಾಡುವಂತಾಗಿದೆ. ತಂಪು ಪಾನೀಯಗಳಿಗೆ ಮೊರೆ ಹೋಗುವಂತಾಗಿದೆ.

ಮೇ ತಿಂಗಳಲ್ಲಿ ಇರಬೇಕಾದ ತಾಪಮಾನ ಮಾರ್ಚ್‌, ಏಪ್ರಿಲ್‌ ತಿಂಗಳಲ್ಲಿಯೇ ಇದೆ. ಈ ವಾರದ ಸರಾಸರಿ ತಾಪಮಾನ 39 ಡಿಗ್ರಿ ಸೆಲ್ಸಿಯಸ್‌ ಇದೆ. ಇದರಿಂದ ಜನತೆ ಬೇಸಿಗೆಯ ಬಿಸಿಗೆ ತತ್ತರಿಸಿದ್ದಾರೆ.ಸಾಮಾನ್ಯವಾಗಿ ಇಷ್ಟು ಡಿಗ್ರಿ ಸೆಲ್ಸಿಯಸ್‌ ತಾಪಮಾನ ಏಪ್ರಿಲ್‌ ಕೊನೆಯ ವಾರದಲ್ಲಿ ಮತ್ತು ಮೇ ತಿಂಗಳಲ್ಲಿ ಇರುತ್ತದೆ. ಈ ಬಾರಿ ಮಾರ್ಚ್‌ ತಿಂಗಳ ಕೊನೆಯ ವಾರದಲ್ಲಂತೂ 39, 40 ಡಿಗ್ರಿ ಸೆಲ್ಸಿಯಸ್‌ ತಲುಪಿ ಜನತೆಗೆ ಬಿಸಿಲಿನ ತಾಪದ ಅನುಭವವವಾಗುತ್ತದೆ. ಹೀಗಾದರೆ ಮುಂದಿನ ಎರಡು ತಿಂಗಳ ಬೇಸಿಗೆಯನ್ನು ಹೇಗೆ ಕಳೆಯುವುದು ಎಂಬ ಚಿಂತೆ ಇಲ್ಲಿನ ಜನತೆಯದಾಗಿದೆ.

ರೈತರಿಗೂ ಬಿಸಿ: ಸಾಮಾನ್ಯವಾಗಿ ರೈತರು ಬಿಸಿಲು ಮಳೆ ಚಳಿಗೂ ಬಗ್ಗದವರು ಆದರೆ ಪ್ರಸಕ್ತ ವರ್ಷದ ಬಿಸಿಲಿನ ತಾಪಮಾನ ರೈತರಿಗೂ ಬಿಸಿ ಮುಟ್ಟಿಸುತ್ತಿದೆ. ಬೆಳಗ್ಗೆ 10 ಗಂಟೆಯೊಳಗೆ ಹೊಲದ ಕೆಲಸ ಮಾಡುವಂತಾಗಿದೆ. ಬಳಿಕ ಬಿಸಿಲಿನ ಝಳಕ್ಕೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ರೈತರಾದ ಶಾರದಾಳ ಗ್ರಾಮದ ರೈತ ಪ್ರವೀಣ ಅರಕೇರಿ, ಲಕ್ಷ್ಮಣ ಶಿರಬೂರ.

ಬೇಸಿಗೆ ಕಳೆಯುವ ಚಿಂತೆ: ಈ ಹಿಂದಿನ ಸತತ ಮೂರು ವರ್ಷದಿಂದ ತುಸು ಉತ್ತಮ ಮಳೆ ಸುರಿದಿತ್ತು, 2023 ಕಳೆದ ವರ್ಷ ಮಳೆಗಾಲದಲ್ಲಿ ನಿರೀಕ್ಷಿತ ಪ್ರಮಾಣ ಮಳೆಯಾಗದೆ ಬರಗಾಲ ಘೋಷಣೆಯಾಗಿದ್ದು, ಒಂದು ತಿಂಗಳು ಮುಂಚೆಯೆ ಬೇಸಿಗೆ ಬಿಸಿಲ ಬೇಗೆ ಜನರನ್ನು ಕಂಗಾಲಾಗಿಸಿದೆ.

ತಂಪು ಪಾನೀಯಕ್ಕೆ ಮೊರೆ: ಬಿಸಿಲಿನ ಬೇಗೆಯನ್ನು ಕಡಿಮೆ ಮಾಡಿಕೊಳ್ಳಲು ಜನತೆ ನೀರಿನ ಅಂಶ ಹೆಚ್ಚು ಇರುವ ಹಣ್ಣು ಹಂಪಲು ಸೇವಿಸುತ್ತಿದ್ದಾರೆ. ಕಲ್ಲಂಗಡಿ ಹಣ್ಣು, ಕಬ್ಬಿನ ಹಾಲು, ಮಜ್ಜಿಗೆ, ಲಸ್ಸಿ, ಎಳೆ ನೀರು, ತಂಪು ಪಾನೀಯಗಳ ಬೇಡಿಕೆ ಹೆಚ್ಚಿದೆ. ಗ್ರಾಮೀಣ ಪ್ರದೇಶದ ಜನರು ಬೇಸಿಗೆಯ ಧಣಿವು ಆರಿಸಿಕೊಳ್ಳಲು ಮಠ, ಮಂದಿರ, ಶಾಲೆ, ನೆರಳಿರುವ ಗಾಳಿ ಬರುವ ಸ್ಥಳ, ಬೇವಿನ ಗಿಡದ ನೆರಳ ಕೆಳಗೆ ಸಮಾಧಾನ ಪಡುತ್ತಿದ್ದಾರೆ. ಇನ್ನು ಕೆಲವು ಜನರು ಪ್ಯಾನ್‌ ಗಳ ಕೆಳಗೆ ಕುಳಿತು ವಿರಾಮ ತೆಗೆದುಕೊಳ್ಳುತಿದ್ದಾರೆ. ಇದರ ಮದ್ಯೆ ಕರೆಂಟ್‌ ಕಣ್ಣುಮುಚ್ಚಾಲೆ ಆಟ ಕೂಡಾ ಇನ್ನೊಂದಿಷ್ಟು ಜಳ ಸಂಕಟ ತಂದೊಡ್ಡುತ್ತಿದೆ.

ವಾರದ ತಾಪಮಾನ: ಮಾರ್ಚ್‌ ತಿಂಗಳ ಮೊದಲ ವಾರದಲ್ಲಿ ತಾಪಮಾನ ಬೆಳಿಗ್ಗೆ ಕನಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್‌ನಿಂದ ಆರಂಭವಾಗಿ ಮಧ್ಯಾಹ್ಯ 2 ಗಂಟೆಗೆ 39, 40 ಡಿಗ್ರಿ ಸೆಲ್ಸಿಯಸ್‌ಗೆ ಬರುತ್ತದೆ. ಸಂಜೆಯಾಗುತ್ತಿದ್ದಂತೆ ತುಸು ತಾಪಮಾನ ಕಡಿಮೆಯಾದರೂ ಬೇಸಿಗೆಯ ಬೆವರು ಹರಿಯುವುದು ನಿಲ್ಲುವುದಿಲ್ಲ. ಮಾ 29 ಮತ್ತು 30 ರಂದು 39 ಡಿಗ್ರಿ ಇದೆ. ಏಪ್ರಿಲ್‌ ತಿಂಗಳ ಮೊದಲ ವಾರದಲ್ಲಿ 40, 41 ಡಿಗ್ರಿ ಸೆಲ್ಸಿಯಸ್‌ ತಾಪಮಾನ ವರದಿಯಾಗಲಿದೆ.

ವಿಶ್ರಾಂತಿಗೆ ಬೇವಿನ ಗಿಡ: ಜನರು ಬೇಸಿಗೆಯ ಬೇಗುದಿಯನ್ನು ಕಳೆದುಕೊಳ್ಳಲು ಬಯಲುಗಳಲ್ಲಿರುವ ಹಸಿರು ಗಿಡದ ಕೆಳಗಡೆ ಕುಳಿತು ವಿಶ್ರಾಂತಿ ಪಡೆಯುತ್ತಿದ್ದಾರೆ, ಅಂಚೆಕಚೇರಿ ಬಳಿ ಇರುವ ಗುಂಪು ಬೇವಿನ ಗಿಡದ ಕೆಳಗಡೆ ಕುಳಿತು ಬೇಗಿಗೆ ಜಳವನ್ನು ಕಳೆಯುತ್ತಿದ್ದಾರೆ. ಹಿರಿಯ ಜೀವಿಗಳು, ವಯಸ್ಕರು, ಯುವಕರು ಅಂಚೆ ಕಚೇರಿ ಬೇವಿನ ಗಿಡದ ಕೆಳಗಡೆ ಕುಳಿತು ವಿಶ್ರಾಂತಿ ಪಡೆಯುತ್ತಿರುವುದು ಕಂಡು ಬರುತ್ತಿದೆ.

*ಚಂದ್ರಶೇಖರ ಹಡಪದ

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.