ಸಂಭ್ರಮದ ವಚನ ಕಟುಗಳ ಅಡ್ಡಪಲ್ಡಕ್ಲಿ ಮಹೋತ್ಸವ
ಡ್ಡಪಲ್ಲಕ್ಕಿ ಮಹೋತ್ಸವದ ಭವ್ಯ ಮೆರವಣಿಗೆ ಛತ್ರ ಚಾಮರದೊಂದಿಗೆ ಪಟ್ಟಣದಲ್ಲಿ ನಡೆಯಿತು.
Team Udayavani, Dec 28, 2021, 5:54 PM IST
ಗುಳೇದಗುಡ್ಡ: ಪಟ್ಟಣದ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದಲ್ಲಿ ಶ್ರೀ ಜಗದ್ಗುರು ಗುರುಸಿದ್ದ ಪಟ್ಟದಾರ್ಯ ಮಹಾಸ್ವಾಮಿಗಳವರ ರಜತ ಮೂರ್ತಿ ಹಾಗೂ ವಚನ ಕಟ್ಟುಗಳ ಅಡ್ಡ ಪಲ್ಲಕ್ಕಿ ಮಹೋತ್ಸವ ಸಡಗರ, ಸಂಭ್ರಮದಿಂದ ನಡೆಯಿತು.
ಸೋಮವಾರದಂದು ಬೆಳಗ್ಗೆ ಕರ್ತ ಜಗದ್ಗುರು ಗುರುಸಿದ್ದ ಶ್ರೀಗಳ ಗದ್ದುಗೆಗೆ ವಚನಾಭಿಷೇಕ, ಲಿಂಗದೀಕ್ಷೆ ಒಳಗೊಂಡು ಧಾರ್ಮಿಕ ವಿವಿಧ ವಿಧಾನಗಳು ಸಂಭ್ರಮದಿಂದ ಜರುಗುಗಿದವು. ಜಗದ್ಗುರು ಗುರುಸಿದ್ಧ ಶ್ರೀಗಳ ರಜತ ಮೂರ್ತಿ, ವಚನ ಕಟ್ಟುಗಳ ಅಡ್ಡಪಲ್ಲಕ್ಕಿ ಮಹೋತ್ಸವದ ಭವ್ಯ ಮೆರವಣಿಗೆ ಛತ್ರ ಚಾಮರದೊಂದಿಗೆ ಪಟ್ಟಣದಲ್ಲಿ ನಡೆಯಿತು. ಶ್ರೀಮಠದಿಂದ ಹೊರಟು ಗಚ್ಚಿನಕಟ್ಟಿ, ಚೌಬಜಾರ, ಅರಳಿಕಟ್ಟಿ, ಭಂಡಾರಿ ಕಾಲೇಜ್ ಸರ್ಕಲ್, ಹರದೊಳ್ಳಿ, ಸಾಲೇಶ್ವರ ದೇವಸ್ಥಾನ, ಪವಾರ ಕ್ರಾಸ್, ಪುರಸಭೆ, ಕಂಠಿಪೇಟೆ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಶ್ರೀಮಠಕ್ಕೆ ತಲುಪಿತು.
ದಾರಿಯುದ್ದಕ್ಕೂ ಅಪಾರ ಭಕ್ತರು ಅಡ್ಡ ಪಲ್ಲಕ್ಕಿಗೆ ವಿಶೇಷಪೂಜೆ ನೆರವೇರಿಸಿದರು. ಡೊಳ್ಳುವಾದ್ಯ, ಭಾವಿಕಟ್ಟಿ ನಾಟ್ಯ ಸಂಘದ ಕರಡಿ ಮಜಲು, ಸಂಗನಬಸವೇಶ್ವರ ಭಜನಾ ಮೇಳ ಹೀಗೆ ಅನೇಕ ಜನಪದ ವಾದ್ಯ ಮೇಳಗಳು ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ವಿಶೇಷ ಮೆರಗು ನೀಡಿದವು.
ಶ್ರೀ ಜಗದ್ಗುರು ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು, ಡಾ| ಈಶ್ವರಾನಂದ ಮಹಾಸ್ವಾಮಿಗಳು ಹಾಗೂ ಗುರುಬಸವ ದೇವರು ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. ರಾಜು ಜವಳಿ, ಅಮರೇಶ ತಟ್ಟಿ, ಚಂದ್ರಕಾಂತ ಶೇಖಾ, ಅಶೋಕ ಹೆಗಡೆ, ಮಲ್ಲೇಶಪ್ಪ ಬೆಣ್ಣಿ, ಶಿವಾನಂದ ಜವಳಿ, ಮಲ್ಲಿಕಾರ್ಜುನ ರಾಜನಾಳ, ಪ್ರಕಾಶ ರೋಜಿ, ವಿವೇಕಾನಂದ ಪರಗಿ, ಶ್ರೀಕಾಂತ ಭಾವಿ, ಶಿವಾನಂದ ಎಣ್ಣಿ, ಸಂಗಪ್ಪ ಜವಳಿ, ವಿನೋದ ಮದ್ದಾನಿ, ದ್ರಾಕ್ಷಾಯಣಿ ಗೊಬ್ಬಿ, ಬಸವರಾಜ ತಾಂಡೂರ, ನಾಗಮ್ಮ ಎಣ್ಣಿ, ಗಿರಿಜಾ ಕಲ್ಯಾಣಿ, ಸಂಗಪ್ಪ ಚಂದಾಪುರ, ಸೋಮಶೇಖರ ಕಲಬುರ್ಗಿ, ಲೀಲಾವತಿ ರೋಜಿ, ಗುರು ಕಾಳಿ, ಕೂಡ್ಲೆಪ್ಪ ಕಲ್ಯಾಣಿ, ಅಶೋಕ ರೋಜಿ, ಅನ್ನದಾನಿ ಮಾನ್ವಿ, ಆನಂದ ತಿಪ್ಪಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ