ಬಸ್ ಕೆಳಗೆ ಕುಳಿತು ಪ್ರಯಾಣಿಸಿದ ದಿವ್ಯಾಂಗ!
Team Udayavani, Oct 20, 2018, 6:30 AM IST
ಬನಹಟ್ಟಿ: ಇಲ್ಲೊಬ್ಬ ದಿವ್ಯಾಂಗನೊಬ್ಬ ಟಿಕೆಟ್ ಪಡೆಯಲು ಹಣವಿಲ್ಲವೆಂದು ಬಸ್ ಕೆಳಗೆ ಕುಳಿತು ಪ್ರಯಾಣಿಸಿದ್ದಾನೆ.ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ದಿವ್ಯಾಂಗನೊಬ್ಬ ಮದ್ಯದ ಮತ್ತಿನಲ್ಲಿ ತೇರದಾಳದ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್ನ ಹಿಂಭಾಗದ ಕೆಳಗಿದ್ದ ಹೆಚ್ಚಿನ ಚಕ್ರ(ಸ್ಟೆಪ್ನಿ) ಜಾಗದಲ್ಲಿ ಕುಳಿತು ಸುಮಾರು 10 ಕಿಮೀನಷ್ಟು ದೂರದ ಬನಹಟ್ಟಿವರೆಗೆ ಪ್ರಯಾಣ ಬೆಳೆಸಿದ್ದಾನೆ.
ಬಸ್ನ ಹಿಂದೆ ಬರುತ್ತಿದ್ದ ಕಾರಿನ ಚಾಲಕನೊಬ್ಬ ಈತನ ಎರಡು ಕಾಲುಗಳನ್ನು ಕಂಡು ಗಾಬರಿಯಾದ. ಬಸ್ಸನ್ನು ಬೆನ್ನತ್ತಿ, ಬನಹಟ್ಟಿ ಬಸ್ ನಿಲ್ದಾಣದಲ್ಲಿ ಬಸ್ ಚಾಲಕನ ಗಮನಕ್ಕೆ ಇದನ್ನು ತಂದ. ಬಸ್ನ ಚಾಲಕ ಹಾಗೂ ನಿರ್ವಾಹಕ ಬಸ್ನ ಕೆಳಗಡೆ ಪರಿಶೀಲಿಸುತ್ತಿದ್ದಂತೆ ಅತಿ ಧೂಳಿನಿಂದ ತುಂಬಿದ್ದ ವ್ಯಕ್ತಿ ಕಂಡು ಬಂದ. ಆತನನ್ನು ಹೊರಕ್ಕೆ ಕರೆದು ವಿಚಾರಿಸಿದಾಗ “ನಾನು ಜಮಖಂಡಿಗೆ ತೆರಳಬೇಕು. ಅಂಗವಿಕಲ ಪಾಸ್ ಅಥವಾ ಹಣ ಇಲ್ಲ. ಅದಕ್ಕಾಗಿ ಈ ರೀತಿ ಮಾಡಿದ್ದೇನೆ’ ಎಂದು ಹೇಳಿದ. ನಂತರ,ನಿರ್ವಾಹಕ ಸ್ವಂತ ಹಣದಲ್ಲಿ ಟಿಕೆಟ್ ನೀಡಿ ಆತನನ್ನು ಜಮಖಂಡಿವರೆಗೆ ಕರೆದೊಯ್ದಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
MUST WATCH
ಹೊಸ ಸೇರ್ಪಡೆ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ