ಚಂಪಾ ಸಾಹಿತ್ಯ ಸೇವೆ ಸರಣೀಯ: ಗುರುಮಹಾಂತ ಶ್ರೀ
ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯಲೋಕದ ಕೊಂಡಿ ಕಳಚಿದಂತಾಗಿದೆ
Team Udayavani, Jan 13, 2022, 5:50 PM IST
ಇಳಕಲ್ಲ: ಚಂಪಾ ಅವರ ಸಾಹಿತ್ಯಸೇವೆ ಸ್ಮರಣೀಯವಾಗಿದ್ದು, ಇಳಕಲ್ಲ ಶ್ರೀಮಠ ಹಾಗೂ ಲಿಂ| ಡಾ| ಮಹಾಂತಸ್ವಾಮಿಗಳೊಂದಿಗೆ ಆತ್ಮೀಯತೆ ಯುಳ್ಳವರಾಗಿದ್ದರು ಎಂದು ಇಳಕಲ್ಲ-ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಶ್ರೀ ಹೇಳಿದರು.
ನಗರದ ವಿಜಯಮಹಾಂತೇಶ್ವ ಸಂಸ್ಥಾನಮಠದಲ್ಲಿ ನಡೆದ ಸಾಹಿತಿ ಡಾ| ಚಂದ್ರಶೇಖರ ಪಾಟೀಲ, ಉತ್ತರ ಕರ್ನಾಟಕದ ಉತ್ತಮ ಜಾನಪದ ಸಂಗೀತಗಾರ ಬಸವಲಿಂಗಪ್ಪ ಹಿರೇಮಠ ಅವರಿಗೆ ಶ್ರದ್ದಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ವೈಚಾರಿಕತೆಯ ಮೇರು ಪರ್ವತವಾಗಿದ್ದ ಡಾ| ಚಂದ್ರಶೇಖರ ಪಾಟೀಲ ಹಾಗೂ ಉತ್ತರ ಕರ್ನಾಟಕದ ಭಾಗದ ಮೇರು ಜನಪದ ಸಾಹಿತಿ ಬಸವಲಿಂಗಪ್ಪ ಹಿರೇಮಠ ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯಲೋಕದ ಕೊಂಡಿ ಕಳಚಿದಂತಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನಗರದ ಜನಪದಗಾರುಡಿಗ ಶಂಭು ಬಳಿಗಾರ ಮಾತನಾಡಿ, ಕವಿಯಾಗಿ ನಾಟಕಕಾರರಾಗಿ ನಾಲ್ಕು ದಶಕಗಳ ಕಾಲ ಹೆಸರು ಮಾಡಿರುವ ಪ್ರೊ| ಚಂದ್ರಶೇಖರ ಪಾಟೀಲ ಗೋಕಾಕ ಚಳವಳಿ ಸೇರಿ ಅನೇಕ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸೆರೆಮನೆ ವಾಸ ವನ್ನೂ ಅನುಭವಿಸಿದ್ದರು.ಅಪರೂಪದ ವಿದ್ವತ್ತಿನ ಮೂಲಕ ಸಾಹಿತ್ಯಾಸಕ್ತ ಮನಸ್ಸುಗಳನ್ನು ಸದಾ ಕ್ರಿಯಾಶೀಲಗೊಳಿಸುತ್ತಿದ್ದ ಅಪರೂಪದ ಆಕರ್ಷ ಣೆಯ ಸಾಹಿತಿಗಳಾಗಿದ್ದರು ಎಂದು ಹೇಳಿದರು.
ಶಿರೂರಿನ ಡಾ| ಬಸವಲಿಂಗ ಸ್ವಾಮೀಜಿ, ವಿಶ್ವನಾಥ ವಂಶಾಕೃತಮಠ, ಮಹಾಂತೇಶ ಗಜೇಂದ್ರಗಡ, ಮಹಾದೇವ ಕಂಬಾರ, ಸಂಗಣ್ಣ ಗದ್ದಿ, ಎಂ.ಬಿ. ಒಂಟಿ, ಮಹಾಬಳೇಶ್ವರ ಮೃಟದ, ರಾಜೇಂದ್ರ ಜುಂಜಾ, ಗೊಪಿ ಕಠಾರೆ, ಪ್ರಭು ಬನ್ನಿಗೊಳ, ಡಿ.ಜಿ. ಸಜ್ಜನ, ಪಿ.ಎಸ್. ಪಮ್ಮಾರ, ಮುತ್ತು ಬೀಳಗಿ, ಗಿರಿಜಾ ಶಿವಬಲ್ಲ, ಸುನೀತಾ ಅಂಗಡಿ, ಸವಿತಾ ಮಾಟೂರ, ವೀರಮ್ಮ ಕುಂಬಾರ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು