ಗಾಣಿಗ ಜ್ಯೋತಿ ಭವನ ಕಾಂಪೌಂಡ್ ಕಾಮಗಾರಿಗೆ ಸವದಿ ಚಾಲನೆ
Team Udayavani, May 29, 2020, 11:08 AM IST
ಮಹಾಲಿಂಗಪುರ: ಪಟ್ಟಣದ 7ನೇ ವಾರ್ಡ್ನಲ್ಲಿರುವ ಗಾಣಿಗೇರ ಸಮಾಜದ ನೂತನ ಗಾಣಿಗಜ್ಯೋತಿ ಸಮುದಾಯ ಭವನದ ಕಾಂಪೌಂಡ್ ಕಾಮಗಾರಿಗೆ ತೇರದಾಳ ಶಾಸಕ ಸಿದ್ದು ಸವದಿ ಚಾಲನೆ ನೀಡಿದರು.
ಕಾಮಗಾರಿಗೆ ಚಾಲನೆ ನೀಡಿದ ಮಾತನಾಡಿದ ಶಾಸಕ ಸಿದ್ದು ಸವದಿ, ಶಾಸಕರ ಪ್ರದೇಶಾಭಿವೃದ್ದಿ ಯೋಜನೆಯಲ್ಲಿ 7 ಲಕ್ಷ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಿಸಲಾಗುತ್ತಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು. ಜತೆಗೆ ಕಾಮಗಾರಿ ನಡೆಯುವಾಗ ಹಿರಿಯರು, ಯುವಕರು ಕಾಳಜಿ ವಹಿಸಿ ಗುಣಮಟ್ಟದ ಕಾಂಪೌಂಡ್ ನಿರ್ಮಾಣ ಮಾಡಿಕೊಳ್ಳಬೇಕು ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜು ಅಂಬಲಿ, ತೇರದಾಳ ಮತಕ್ಷೇತ್ರ ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶ ಅಕ್ಕಿವಾಟ, ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ, ರನ್ನ ಶುಗರ್ ಉಪಾಧ್ಯಕ್ಷ ಅಶೋಕಗೌಡ ಪಾಟೀಲ, ಬಿಜೆಪಿ ನಗರ ಘಟಕ ಅಧ್ಯಕ್ಷ ಮಹಾಲಿಂಗ ಕುಳ್ಳೋಳ್ಳಿ, ವಾರ್ಡ್ ಸದಸ್ಯ ರವಿ ಜವಳಗಿ, ಗಾಣಿಗ ಸಮಾಜದ ಅಧ್ಯಕ್ಷ ಬಸನಗೌಡ ಗೋಲಪ್ಪನವರ, ಅಧ್ಯಕ್ಷ ಸಂಗಪ್ಪ ಉಪ್ಪಲದಿನ್ನಿ, ಮಹಾಲಿಂಗ ಕಲಾಗತಿ, ಶಂಕರ ಆದೆಪ್ಪನವರ, ಹನಮಂತ ತೇಲಿ, ಈಶ್ವರ ಆದೆಪ್ಪನವರ, ಮುರಿಗೆಪ್ಪ ಅಟಗಾಳಿ, ಶಿವಪ್ಪ ಆದೆಪ್ಪನವರ, ಬೈರೇಶ ಆದೆಪ್ಪನವರ, ಸುಭಾಸ ಹುಕ್ಕೇರಿ, ಜಿ.ಜಿ.ಗಾಣಗೇರ, ಅಶೋಕ ಗುಡ್ಲಿ, ಹನಮಂತ ಕೊಣ್ಣುರ, ಬಿಜೆಪಿ ಮುಖಂಡರಾದ ಚನ್ನಪ್ಪ ರಾಮೋಜಿ, ಜಮೀರ ಯಕ್ಸಂಬಿ, ಅರ್ಜುನ ಪವಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ