ತೇರದಾಳ: ಶಿವಶರಣ ಹರಳಯ್ಯ ಸಮಾಜದಿಂದ ಆಹಾರ ಕಿಟ್
Team Udayavani, May 29, 2020, 11:02 AM IST
ತೇರದಾಳ: ಮನುಷ್ಯನಾದವನಿಗೆ ಸ್ವಾರ್ಥ ಮನೋಭಾವ ಇರಬಾರದು. ಮಾನವೀಯತೆ ಇರಬೇಕು ಎಂದು ಪುರಸಭೆ ಸದಸ್ಯ ಸಚಿನ ಕೊಡತೆ ಹೇಳಿದರು. ಪಟ್ಟಣದ ಶಿವಶರಣ ಹರಳಯ್ಯ ಸಮಾಜದ ವತಿಯಿಂದ ಸಮಾಜದ ಕಡು ಬಡವರಿಗೆ ಆಹಾರ ಕಿಟ್ ವಿತರಣೆ ಮಾಡಿ ಅವರು ಮಾತನಾಡಿದರು.
ಕೋವಿಡ್ ದಿಂದಾಗಿ ಕೂಲಿ ಮಾಡಿ ಬದುಕುವ ಬಡವರಿಗೆ ಉದ್ಯೋಗ ಇಲ್ಲದೇ ಸಂಕಷ್ಟ ಎದುರಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ ಅಂತವರಿಗೆ ನೆರವು ಮಾಡಿವುದು ಎಲ್ಲರ ಕರ್ತವ್ಯವಾಗಿದೆ. ಹರಳಯ್ಯ ಸಮಾಜ ಕೂಡ ಹಿಂದುಳಿದ ಮತ್ತು ಬಡತನ ಹೊಂದಿರುವ ಸಮಾಜವಾಗಿದೆ. ಬಡತನದ ಜತೆಗೆ ಇನ್ನೊಬ್ಬರ ಬಡತನ ಗುರುತಿಸಿ ಅಂತಹ ಕುಟುಂಬಗಳಿಗೆ ಅಗತ್ಯ ದಿನಸಿ ಕಿಟ್ ವಿತರಣೆ ಮಾಡುವ ಕೆಲಸವನ್ನು ಸಮಾಜದ ವತಿಯಿಂದ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಬಾಳಕೃಷ್ಣ ಸಣ್ಣಕ್ಕಿ, ಲಕ್ಷ್ಮಣ ಕೊಡತೆ, ರಾಜು ಸಣ್ಣಕ್ಕಿ, ಪ್ರಭಾಕರ ಸಣ್ಣಕ್ಕಿ, ಆನಂದ ಕೊಡೆ, ಶಿವಾಜಿ ಕಾಂಬಳೆ, ಕಿರಣ ಸಣ್ಣಕ್ಕಿ, ಅರವಿಂದ ಸಣ್ಣಕ್ಕಿ, ಕಿಶೋರ ಸಣ್ಣಕ್ಕಿ ಸೇರಿದಂತೆ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್ ಈಗ “ಸಂಯುಕ್ತ’
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
ತಾಕತ್ತಿದ್ದರೆ ಯತ್ನಾಳ್ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್