ಮಳೆಗಾಗಿ ಪ್ರಾರ್ಥಿಸಿ ಗುರ್ಚಿ ಪೂಜೆ ಆಚರಣೆ
Team Udayavani, Apr 27, 2019, 12:31 PM IST
ಕಲಾದಗಿ: ಗುರ್ಚಿ ಗುರ್ಚಿ ಎಲ್ಯಾಡಿ ಬಂದಿ, ಹಳ್ಳ ಕೊಳ್ಳ ತಿರಗ್ಯಾಡಿ ಬಂದಿ, ಕಾರ್ ಮಳಿಯೇ ಕಪಾಟ ಮಳಿಯೇ, ಬೇಗನ ಬಾರ ಸುರಿಯೇ ಮಳಿಯೇ..!
ಹೀಗೆ ಜನಪದ ದಾಟಿಯಲ್ಲೇ ಹಾಡುತ್ತಾ ಗ್ರಾಮದ ವಿವಿಧ ಓಣಿಯಲ್ಲಿ ಸುತ್ತಾಡಿ ವಿಶಿಷ್ಟ ಗುರ್ಚಿ ಪೂಜೆ ಆಚರಣೆ ಮಾಡಿ ಮಳೆಗಾಗಿ ಮಕ್ಕಳು ಮಹಿಳೆಯರು, ಯುವಕರು ಪ್ರಾರ್ಥಿಸಿ ಪೂಜಿಸಿದರು.
ಏನಿದು ಗುರ್ಚಿ ಪೂಜೆ: ಓರ್ವ ಬಾಲಕ ಅಥವಾ ಬಾಲಕಿಯ ತಲೆ ಮೇಲೆ ತೆವಿ (ರೊಟ್ಟಿ ಮಾಡು ಹಂಚು)ಯನ್ನು ಉಲಾr (ಡಬ್ಬ) ಹಾಕಿಕೊಂಡು ಆ ತೆವಿ ಮೇಲೆ ಮಣ್ಣಿನ ಮುದ್ದೆ ಇಟ್ಟುಕೊಂಡು, ಹಸಿ ಮಣ್ಣಿಯ ಮುದ್ದೆಯ ಮೇಲೆ ಕರಿಕೆ ಹುಲ್ಲು ಹಾಕಿ, ಮನೆಯ ಮನೆಯ ಮುಂದೆ ಹೋಗಿ ಹಾಡು ಹಾಡುತ್ತಾರೆ. ಈ ವೇಳೆ ಮಹಿಳೆಯರು ಮಕ್ಕಳು ಗುರ್ಚಿಯ ಮೇಲೆ ನೀರು ಸುರಿಯುತ್ತಾರೆ. ಆಗ ಗುರ್ಚಿಯು ತಂಪಾಗಿ ಮಳೆ ಬರುತ್ತದೆ ಎಂದು ನಂಬಿಕೆಯಿದೆ.
ಗ್ರಾಮದ ಗಡ್ಡಿಓಣಿಯ ವಿಶ್ವನಾಥ ಹಣಜಿ ಬಾಲಕ ತಲೆಯ ಮೇಲೆ ಗುರ್ಚಿ ಹೊತ್ತು, ಮಹಿಳೆಯರು ಇಂತಹ ಗುರ್ಚಿಯನ್ನು ಮಾಡಿ ಓಣಿಯಯಲ್ಲಿ ಮನೆ ಮನೆ ಮುಂದೆ ಬಂದಾಗ ಮನೆಯವರು ತಂಬಿಗೆ, ಸಣ್ಣ ಪಾತ್ರೆಯ ತುಂಬಾ ನೀರು ತಂದು ಗುರ್ಚಿಯ ಮೇಲೆ ಸುರಿಯಲಾರಂಭಿಸುತ್ತಾರೆ.ಗುರ್ಚಿ ಹೊತ್ತ ಬಾಲಕ ಓಣಿಯಲ್ಲಿ ತಿರುಗಾಡಿ ಗುರ್ಚಿ ಮೇಲೆಯ ನೀರನ್ನು ಹಾಕಿಸಿಕೊಂಡು ಆ ಮನೆಯವರಿಂದ ದವಸ ಧಾನ್ಯ ನೀಡಿದ್ದನ್ನು ಪ್ರಸಾದವಾಗಿ ತಯಾರಿಸಿ ಮನೆ ಮಂದಿಗೆ ಕೊಡುವ ವಿಶಿಷ್ಟ ಗುರ್ಚಿ ಪೂಜೆ ಆಚರಣೆ ಮಾಡಿ ಮಳೆಗಾಗಿ ಪ್ರಾರ್ಥಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು