ಜನಪದ ಹಾಡಿನ ಮೋಡಿಗಾರ ಗುರುರಾಜ ಕೆಂಧೂಳಿ ಇನ್ನಿಲ್ಲ

ಗಾಯನ ನಿಲ್ಲಿಸಿದ ಜಾನಪದ `ಗುರು' ಕೆಂಧೂಳಿ

Team Udayavani, Feb 27, 2023, 5:33 PM IST

ಜನಪದ ಹಾಡಿನ ಮೋಡಿಗಾರ ಗುರುರಾಜ ಕೆಂಧೂಳಿ ಇನ್ನಿಲ್ಲ

ರಬಕವಿ-ಬನಹಟ್ಟಿ : ಯಾಕ ತಂಗಿ ಇಷ್ಟ್ಯಾಕ ಸೊರಗಿದಿ…, ಹೆಂಡತಿ ಅಂದರ ನಗುತಾನ… ಹೀಗೆ ಸಾವಿರಾರು ಜಾನಪದ ಗೀತೆಗಳನ್ನು ಹಾಡಿ ಲಕ್ಷಾಂತರ ಜನರ ಮನಗೆದ್ದ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿಯ ಖ್ಯಾತ ಗಾಯಕ ಗುರುರಾಜ ಕೆಂಧೂಳಿ(72) ಸೋಮವಾರದಂದು ನಿಧನರಾದರು. ಮೃತರು ಪತ್ನಿ ಸುಪುತ್ರ ಹಾಗೂ ಸುಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

1951 ರಲ್ಲಿ ಬಡಕುಟುಂಬದಲ್ಲಿ ಜನಿಸಿದ ಗುರುರಾಜ ಕೆಂಧೂಳಿ ಹುಟ್ಟಿನಿಂದಲೇ ಜನಪದ ಕಲೆ ಮೈಗೂಡಿಸಿಕೊಂಡು ಬೆಳೆದವರು. ಕ್ಯಾಸೆಟ್‌ಗಳ ಕಾಲವಾಗಿದ್ದ 1985 ರಲ್ಲಿ `ಯಾಕ ತಂಗಿ ಇಷ್ಟ್ಯಾಕ ಸೊರಗಿದಿ’ ಎಂಬ ಜಾನಪದ ಗೀತೆ ರಾಜ್ಯದೆಲ್ಲೆಡೆ ಪಸರಿಸಿಕೊಂಡು ಮನೆಮಾತಾದರು. ಮರು ವರ್ಷವೇ ಹೆಂಡತಿ ಅಂದರ ನಗುತಾನ.. ಎಂಬ ಗೀತೆಯೆಂದಿಗೆ ತನ್ನ ಜನಪ್ರಿಯತೆ ಇಮ್ಮಡಿಗೊಳಿಸಿಕೊಂಡು ಸಾವಿರಾರು ಹಾಡುಗಳಿಗೆ ಸಾಕ್ಷಿಯಾಗಿದ್ದರು.

ಸುಮಾರು 150 ಕ್ಕೂ ಹೆಚ್ಚು ಜನಪದ ಹಾಗೂ ಭಕ್ತಿ ಗೀತೆಗಳನ್ನು ರಚಿಸಿ ಅವುಗಳನ್ನು ಧ್ವನಿ ಸುರಳಿಗೆ ಅಳವಡಿಸಿ ಹಾಡಿರುವ ಕೆಂಧೂಳಿ ಸುಮಾರು ಮೂರುನೂರುಕ್ಕೂ ಹೆಚ್ಚು ಧ್ವನಿ ಸುರಳಿಗಳಿಗೆ ಹಾಡಿದ್ದಾರೆ. ನಾಡಿನ ಶ್ರೇಷ್ಠ ಗಾಯಕರಾದ ಮಂಜುಳಾ ಗುರುರಾಜ, ಚಂದ್ರಿಕಾ ಗುರುರಾಜ, ಬಿ.ಆರ್.ಛಾಯಾ ಮತ್ತು ಕಸ್ತೂರಿ ಶಂಕರ ಅವರು ಗುರುರಾಜ ಕೆಂಧೂಳಿಯವರ ಕ್ಯಾಸೆಟ್‌ಗಳಿಗೆ ಹಾಡಿರುವುದು ಅಪರೂಪದ ಸಂಗತಿ.

ಗುರುರಾಜ ಕೆಂಧೂಳಿಯವರು ಹಾಡಿರುವ ಶ್ರೀಶೈಲ ಮಲ್ಲಿಕಾರ್ಜುನನ ಮೇಲಿನ ಭಕ್ತಿ ಗೀತೆಗಳು ಬಹಳಷ್ಟು ಪ್ರಸಿದ್ದಿಯನ್ನು ಪಡೆದಿವೆ. ನೆರೆಯ ಆಂಧ್ರದ ಶ್ರೀಶೈಲಕ್ಕೆ ಹೋಗಿ ಭಕ್ತಿ ಗೀತೆಗಳ ಕ್ಯಾಸೆಟ್‌ಗಳನ್ನು ಕೊಡಿ ಎಂದರೆ ಸಾಕು ಅವರು ಮೊದಲು ತಮ್ಮ ಮುಂದಿಡುವುದೇ ಕೆಂಧೂಳಿಯವರ ಕ್ಯಾಸೆಟ್‌ಗಳನ್ನು “ಮಾಡಿರೋ ಮಲ್ಲಯ್ಯನ ಧ್ಯಾನ”, “ಕಂಬಿ ಹಾಡುಗಳು”, “ಶ್ರೀಶೈಲ ಯಾತ್ರಾ ಮಾಡೋಣ ನಡಿ”, “ಮಲ್ಲಯ್ಯ ಬಂದಾನ ನಡಿ”, “ಉಘೇ ಮಲ್ಲಯ್ಯ”, “ಶ್ರೀಗಿರಿ ಮಲ್ಲಯ್ಯ” ಇಂತಹ ಹತ್ತಾರು ಅವರು ಧ್ವನಿ ಸುರಳಿಗಳು ಪ್ರಸಿದ್ಧವಾಗಿವೆ.

ಕ್ಯಾಸೆಟ್ ಯುಗದಲ್ಲಿ ಅವರ ಕ್ಯಾಸೆಟ್‌ಗಳು ಉತ್ತರಕರ್ನಾಟಕದ ಪ್ರತಿಯೊಂದು ಅಂಗಡಿಯಲ್ಲಿಯೂ ರಾರಾಜಿಸುತ್ತಿದ್ದವು. ಈಗಲೂ ಕೂಡಾ ಅವು ಸಿಡಿಗಳ ಮೂಖಾಂತರ ಮಾರಾಟವಾಗುತ್ತಿದ್ದು, ಹಳ್ಳಿಯ ಜನ ಇವರ ಕ್ಯಾಸೆಟ್ ಮತ್ತು ಸಿಡಿಗಳಿಗೋಸ್ಕರ ಮುಗಿಬೀಳುವುದು ಸರ್ವೆ ಸಾಮಾನ್ಯವಾಗಿತ್ತು. ಇಂತಹ ಕೆಂಧೂಳಿ ಇದೀಗ ಇಹಲೋಕ ತ್ಯಜಿಸಿದ್ದು, ಅಪಾರ ಸಂಖ್ಯೆ ಅಭಿಮಾನಿಗಳ ಮನದಲ್ಲಿ ನೀರವ ಮೌನ ಆವರಿಸಿದೆ.

ಇದನ್ನೂ ಓದಿ: ಸಚಿವ ಅಶ್ವಥ್ ನಾರಾಯಣ್ ಅವರನ್ನು ಸಂಪುಟದಿಂದ ವಜಾಗೊಳಿಸಿ; ರಕ್ಷಾ ರಾಮಯ್ಯ ಒತ್ತಾಯ

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.