ಜ್ಞಾನ-ವಿಜ್ಞಾನದಲ್ಲಿ ಭಾರತದ ಸಾಧನೆ ಅಪಾರ: ಡಾ| ಮಹಾಂತ ದೇವರು
ಪಾಲಕರು ಮಕ್ಕಳ ಜತೆ ಬೆರೆಯಬೇಕು.
Team Udayavani, Dec 18, 2023, 2:21 PM IST
ತೇರದಾಳ: ಅಂದು ಭಾರತವನ್ನು ಕಡೆಗಣಿಸಿದ್ದ ಇಂಗ್ಲೆಂಡ್, ಅಮೆರಿಕಾ ಸೇರಿದಂತೆ ಜಗತ್ತಿನ ಅನೇಕ ರಾಷ್ಟ್ರಗಳು ಇಂದು ನಮ್ಮ ರಾಷ್ಟ್ರವನ್ನು ನೋಡುವ ದೃಷ್ಟಿ ಬದಲಾಗಿ ಶ್ರೇಷ್ಠ ಭಾರತ ಎಂಬುದಾಗಿ ಅರ್ಥೈಸಿಕೊಂಡಿರುವುದು ಹೆಮ್ಮೆ. ಇದಕ್ಕೆ ನಮ್ಮಲ್ಲಾದ ಹಲವು ಬದಲಾವಣೆಗಳೆ ಕಾರಣ. ಉತ್ತಮ ಶಿಕ್ಷಣ ಪಡೆದ ನಮ್ಮವರು ಜ್ಞಾನ, ವಿಜ್ಞಾನದಲ್ಲಿ ಮಾಡಿದ ಸಾಧನೆ ಅಪಾರವಾಗಿದೆ ಎಂದು ಶೇಗುಣಸಿ ವಿರಕ್ತಮಠದ ಡಾ| ಮಹಾಂತ ದೇವರು ಹೇಳಿದರು.
ಪಟ್ಟಣದ ಸಿದ್ದೇಶ್ವರ ವಿದ್ಯಾವರ್ಧಕ ಸಂಘದ ಸ್ವಾಮಿ ವಿವೇಕಾನಂದ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ವಿಜ್ಞಾನ ಪಿಯು ಕಾಲೇಜಿನ ವಾರ್ಷಿಕೋತ್ಸವ ಉತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಇಂದಿನ ಮಕ್ಕಳಿಗೆ ಅಕ್ಷರದ ಜತೆಗೆ ಸಂಸ್ಕಾರ ಕಲಿಸಬೇಕಿದೆ. ಮಕ್ಕಳ ಮನಸ್ಸು ವಿಕಸಿತವಾಗುವಂತಹ ಶಿಕ್ಷಣ ನೀಡಬೇಕಿದೆ.
ಅಗತ್ಯಬಿದ್ದರೆ ಈ ಸಂಸ್ಥೆಯ ಮಕ್ಕಳಿಗೆ ಮೌಲ್ಯಶಿಕ್ಷಣದ ಶಿಬಿರ ನಡೆಸಲು ಸಿದ್ಧರಾಗಿರುವುದಾಗಿ ಹೇಳಿದರು.
ಹಿರಿಯ ಸಾಹಿತಿ ಸಿದ್ದು ದಿವಾನ ಮಾತನಾಡಿ, ಪಾಲಕರು ಮಕ್ಕಳ ಜತೆ ಬೆರೆಯಬೇಕು. ಅವರಲ್ಲಿನ ಭಯ ಹೋಗಲಾಡಿಸಬೇಕು.
ಸಾಮಾಜಿಕ ಮೌಲ್ಯ ಬಿತ್ತುವ ಕೆಲಸ ಶಾಲೆಗಳೊಂದಿಗೆ ಮನೆಯಿಂದಲೂ ನಡೆಯಬೇಕಿದೆ ಎಂದರು.
ತೇರದಾಳ ಶಾಸಕ ಸಿದ್ದು ಸವದಿ, ಮುಖಂಡ ಸಿದ್ದು ಕೊಣ್ಣುರ, ಕ್ಷೇತ್ರಶಿಕ್ಷಣಾಧಿಕಾರಿ ಎ.ಕೆ. ಬಸಣ್ಣವರ ಮಾತನಾಡಿದರು.
ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷ ಡಾ| ಶಂಕರ ಅಥಣಿ, ಚೇರಮನ್ ಮಹೇಶ ಯಾದವಾಡ ಉದ್ಘಾಟಿಸಿದರು. ಶಂಕರ
ಮಂಗಸೂಳಿ, ಪ್ರಕಾಶ ಕಾಲತಿಪ್ಪಿ, ಬಿಆರ್ಸಿ ರಮೇಶ ಅವಟಿ, ಸಿಆರ್ಪಿ ಎ.ಆರ್. ಮುಧೋಳ, ಆಡಳಿತಾಧಿಕಾರಿ ಎಂ.ಬಿ.ಮಾಳೇದ, ಪ್ರಾಚಾರ್ಯ ಜಾಯ್ ಸೆಬ್ ಸ್ಟೇನ್, ಆಡಳಿತ ಮಂಡಳಿಯವರು, ಸಿಬ್ಬಂದಿ, ಪಾಲಕರು ಉಪಸ್ಥಿತರಿದ್ದರು. ಮಕ್ಕಳಿಗೆ ಪಾರಿತೋಷಕ ವಿತರಣೆ ಜರುಗಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ
Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ
Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು